Home> Karnataka
Advertisement

ಹುಲಿ ದಾಳಿಗೆ ಓರ್ವ ಸಾವು

ತಾಲ್ಲೂಕಿನ ಮಚ್ಚೂರು ಸಮೀಪ ಗುಂಡುಮೇಟ್ಲು ಗ್ರಾಮದ ನಿವಾಸಿ ಚಿನ್ನಪ್ಪ (40) ಮನೆಯಿಂದ ಹೊರಬರುತ್ತಿದ್ದಂತೆಯೇ ದಾಳಿ ನಡೆಸಿದ ಹುಲಿ ಅವರನ್ನು ಹೊತ್ತೊಯ್ದಿದೆ. 

ಹುಲಿ ದಾಳಿಗೆ ಓರ್ವ ಸಾವು

ಮೈಸೂರು: ಮನೆಯ ಹೊರಗೆ ಬಂದ ವ್ಯಕ್ತಿಯನ್ನು ಹುಲಿಯೊಂದು ಕೊಂದು ಹಾಕಿರುವ ಘಟನೆ ಮೈಸೂರು ಚಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಗುಂಡುಮೇಟ್ಲು ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ. 

ತಾಲ್ಲೂಕಿನ ಮಚ್ಚೂರು ಸಮೀಪ ಗುಂಡುಮೇಟ್ಲು ಗ್ರಾಮದ ನಿವಾಸಿ ಚಿನ್ನಪ್ಪ (40) ಮನೆಯಿಂದ ಹೊರಬರುತ್ತಿದ್ದಂತೆಯೇ ದಾಳಿ ನಡೆಸಿದ ಹುಲಿ ಅವರನ್ನು ಹೊತ್ತೊಯ್ದಿದೆ. 

ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಗ್ರಾಮಸ್ಥರು ಚೀರಾಟ ಆರಂಭಿಸಿದ್ದರಿಂದ ಸುಮಾರು 200 ಮೀಟರ್ ದೂರದಲ್ಲಿ ಮೃತ ದೇಹವನ್ನು ಬಿಟ್ಟು ಹೋಗಿದೆ. ಆದರೆ ಗಂಭಿರವಾಗಿ ಗಾಯಗೊಂಡಿದ್ದ ಚಿನ್ನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read More