ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಬೆಳಗ್ಗೆ 10.30 ರಿಂದ 11.30 ರ ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ ಹೊಸ 17 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ.
ಇಂದು ಒಟ್ಟು 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಜಾತಿ ಲೆಕ್ಕಾಚಾರದಲ್ಲಿ 7 ಲಿಂಗಾಯತ ಶಾಸಕರು, 3 ಒಕ್ಕಲಿಗ ಶಾಸಕರು, 4 ಎಸ್ಸಿ ಎಸ್ಟಿ ಶಾಸಕರು, 2 ಹಿಂದುಳಿದ ವರ್ಗದ ಶಾಸಕರು ಹಾಗೂ 1 ಬ್ರಾಹ್ಮಣ ಶಾಸಕರಿಗೆ ಮಣೆ ಹಾಕಲಾಗಿದೆ.
ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವವರ ಸಂಪೂರ್ಣ ಪಟ್ಟಿ ಇಲ್ಲಿದೆ:
7 ಲಿಂಗಾಯತ ಸಚಿವರು
3 ಒಕ್ಕಲಿಗ
4 ಎಸ್ಸಿ ಎಸ್ಟಿ
2 ಹಿಂದುಳಿದ ವರ್ಗ
1 ಬ್ರಾಹ್ಮಣ