ಮಂಡ್ಯ: ರಾಜ್ಯದಲ್ಲಿ ಉಪ ಚುನಾವಣೆಯ ಕಣ ರಂಗೇರಿದೆ. ಅದರಲ್ಲೂ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರವನ್ನು ಹೈವೊಲ್ಟೆಜ್ ಕಣವೆಂದೇ ಪರಿಗಣಿಸಲಾಗಿದೆ. ಇದೀಗ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ(KR Pet Assembly constituency)ದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಅವರ ಬಹಿರಂಗ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
ಎರಡು ಬಾರಿ ಚುನಾವಣೆಯಲ್ಲಿ ಸೋತ ಬಳಿಕ ನನ್ನ ಬಳಿ ಏನೂ ಉಳಿದಿಲ್ಲ. ಹೀಗಾಗಿ ಬಿಜೆಪಿಯವರು, ಜೆಡಿಎಸ್ ನವರು ಯಾರು ಏನೇ ಕೊಟ್ರೂ ಇಸ್ಕೊಳಿ. ನಾದರೆ ನಿಮ್ಮ ಮತ ಮಾತ್ರ ನನಗೇ ಹಾಕಿ ಎಂದು ಮತದಾರರಲಿ ಮನವಿ ಮಾಡಿದ ಪ್ರಸಂಗ ನಡೆದಿದೆ.