ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾವೇರಿ ತಮಿಳುನಾಡು ಸೇರಲು ಕಾರಣವಾದ ಕಾಂಗ್ರೆಸ್ ಸರ್ಕಾರ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬದ್ಧತೆಗೆ ಈ ಪ್ರಶ್ನೆಗಳೇ ಸಾಕ್ಷಿ..!’ ಎಂದು ಕೆಲವು ಪ್ರಶ್ನೆಗಳನ್ನು ಕೇಳಿದೆ.
ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ತಮಿಳುನಾಡಿಗೆ ನೀರು ಹರಿಸಿದ್ದೇಕೆ?, ಇದುವರೆಗೂ ತಮಿಳುನಾಡು ಸರ್ಕಾರದ ಜೊತೆಗೆ ಕಾಂಗ್ರೆಸ್ ಮಾತುಕತೆ ಮಾಡದೆ ಮೌನವಾಗಿರುವುದೇಕೆ?, ಕರ್ನಾಟಕದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಲಹೆ ಪಡೆಯಲಿಲ್ಲ ಏಕೆ?, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರೂ ಮೊದಲ ಸಲ ತಮಿಳುನಾಡಿಗೆ ನೀರು ಬಿಟ್ಟಿದ್ದೇಕೆ? ಮತ್ತು ಕಾವೇರಿ ನೀರಿಗಾಗಿ ಪ್ರತಿಭಟಿಸುತ್ತಿರುವ ನಮ್ಮ ಹೋರಾಟಗಾರರನ್ನು ಹತ್ತಿಕ್ಕುತ್ತಿರುವುದೇಕೆ?’ ಎಂದು ಬಿಜೆಪಿ ಸರಣಿ ಪ್ರಶ್ನೆಗಳನ್ನು ಕೇಳಿದೆ.
ಕಾವೇರಿ ತಮಿಳುನಾಡು ಸೇರಲು ಕಾರಣವಾದ @INCKarnataka ಸರ್ಕಾರ ಮತ್ತು ಡಿಸಿಎಂ @DKShivakumar ಅವರ ಬದ್ಧತೆಗೆ ಈ ಪ್ರಶ್ನೆಗಳೇ ಸಾಕ್ಷಿ..!
✳ ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ತಮಿಳುನಾಡಿಗೆ ನೀರು ಹರಿಸಿದ್ದೇಕೆ❓
✳ ಇದುವರೆಗೂ ತಮಿಳುನಾಡು ಸರ್ಕಾರದ ಜತೆಗೆ ಕಾಂಗ್ರೆಸ್ ಮಾತುಕತೆ ಮಾಡದೆ ಮೌನವಾಗಿರುವುದೇಕೆ❓
✳ ಕರ್ನಾಟಕದ…
— BJP Karnataka (@BJP4Karnataka) September 23, 2023
ಇದನ್ನೂ ಓದಿ: ಕೇಂದ್ರ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್
‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಎಂ.ಕೆ.ಸ್ಟಾಲಿನ್ ಜೊತೆಗಿನ ಮೈತ್ರಿಗಾಗಿ ನೀರು ಬಿಟ್ಟು ಜಲಾಶಯ ಖಾಲಿ ಮಾಡಿದ ಮೇಲೆ ಬೇಕಿದ್ದರೆ ನಮಗೆ ಬೈಯಿರಿ ಎನ್ನುವ ಲಜ್ಜೆಗೇಡಿತನದ ಉಪಮುಖ್ಯಮಂತ್ರಿ ಕರ್ನಾಟಕದಲ್ಲಿರುವುದು ನಮ್ಮ ದೌರ್ಭಾಗ್ಯ..!’ವೆಂದು ಡಿಕೆಶೀ ವಿರುದ್ಧ ಬಿಜೆಪಿ ಕಿಡಿಕಾತಿದೆ.
ಎಚ್.ಸಿ.ಮಹದೇವಪ್ಪ ಸತ್ಯ ಒಪ್ಪಿಕೊಂಡಿದ್ದಾರೆ!
ತಮ್ಮ ಸುದೀರ್ಘ ರಾಜಕಾರಣದವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ @CMahadevappa ರವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ.
🔹 ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಜೊತೆ ಹೊಡೆದಾಡಿ, ಈಗ ಅವರ ಜೊತೆಯೇ ಮೈತ್ರಿ.
🔹 ಪಂಜಾಬ್ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದಿಂದ ಬಾಯಿಗೆ ಬಂದಂತೆ ಬೈಸಿಕೊಂಡು, ಈಗ ಅವರ ಜೊತೆಯೇ ಸ್ನೇಹ.
🔹 ಓಲೈಕೆ… https://t.co/jCuxXPlMfO
— BJP Karnataka (@BJP4Karnataka) September 23, 2023
‘ಸಿದ್ದಾಂತವಿಲ್ಲದ ಪಕ್ಷಕ್ಕೆ ಅವಸಾನವೇ ಗತಿ’ ಎಂದು ಟ್ವೀಟ್ ಮಾಡಿದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪರಿಗೆ ತಿರುಗೇಟು ನೀಡಿರುವ ಬಿಜೆಪಿ, ‘ತಮ್ಮ ಸುದೀರ್ಘ ರಾಜಕಾರಣದ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹದೇವಪ್ಪನವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಜೊತೆ ಹೊಡೆದಾಡಿ, ಈಗ ಅವರ ಜೊತೆಯೇ ಮೈತ್ರಿ, ಪಂಜಾಬ್ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದಿಂದ ಬಾಯಿಗೆ ಬಂದಂತೆ ಬೈಸಿಕೊಂಡು, ಈಗ ಅವರ ಜೊತೆಯೇ ಸ್ನೇಹ’ ಅಂತಾ ಕುಟುಕಿದೆ.
ಇದನ್ನೂ ಓದಿ: ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಬೆಳೆ ಹಾನಿ, ₹30,482 ಕೋಟಿ ನಷ್ಟ: ಸರ್ಕಾರದ ಮಾಹಿತಿ
‘ಓಲೈಕೆ ರಾಜಕಾರಣಕ್ಕಾಗಿ ಸದಾ ದೇಶ ವಿರೋಧಿ ಚಟುವಟಿಕೆ ನಡೆಸುವ ಮುಸ್ಲಿಂ ಲೀಗ್, ಎಸ್ಡಿಪಿಐ, ಪಿಎಫ್ಐಗಳ ಜೊತೆ ಬಾಂಧವ್ಯ. ಹೀಗೆ ಕಾಂಗ್ರೆಸ್ ಪಕ್ಷದ ಸಾಲು ಸಾಲು ತಪ್ಪುಗಳನ್ನು "ಸಿದ್ದಾಂತವಿಲ್ಲದ ಪಕ್ಷಕ್ಕೆ ಅವಸಾನವೇ ಗತಿ" ಎಂಬ ಒಂದೇ ಸಾಲಿನಲ್ಲಿ ಮಹದೇವಪ್ಪ ವ್ಯಕ್ತಪಡಿಸಿದ್ದಾರೆ. ಸತ್ಯ ಹೇಳುವ ನಿಮ್ಮ ಪರಿಪಾಠ, ಹೀಗೆಯೇ ಮುಂದುವರೆಯಲಿ ಮಹಾದೇವಪ್ಪನವರೇ..!!’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.