Home> Karnataka
Advertisement

ತುಂಗಾ ನದಿ ದಡದಲ್ಲಿ ಮತ್ಸ್ಯಗಳ ಮಾರಣ ಹೋಮ

ಶಿವಮೊಗ್ಗದ ಮತ್ತೂರು, ಹೊಸಹಳ್ಳಿ ಗ್ರಾಮದ ನಡುವೆ ಹರಿಯುವ ತುಂಗಾ ನದಿಯಲ್ಲಿ ಈ ಘಟನೆ ನಡೆದಿದೆ.

ತುಂಗಾ ನದಿ ದಡದಲ್ಲಿ ಮತ್ಸ್ಯಗಳ ಮಾರಣ ಹೋಮ

ಶಿವಮೊಗ್ಗ: ಶಿವಮೊಗ್ಗಾ ಜಿಲ್ಲೆಯ ತುಂಗಾ ನದಿ ದಡದಲ್ಲಿ ಹಲವಾರು ಮತ್ಸ್ಯ(ಮೀನು)ಗಳ ಮಾರಣ ಹೋಮ ನಡೆದಿರುವ ದುರದೃಷ್ಟಕರ ಘಟನೆ ಬಗ್ಗೆ ವರದಿಯಾಗಿದೆ.

ಶಿವಮೊಗ್ಗದ ಮತ್ತೂರು, ಹೊಸಹಳ್ಳಿ ಗ್ರಾಮದ ನಡುವೆ ಹರಿಯುವ ತುಂಗಾ ನದಿಯಲ್ಲಿ ಬುಧವಾರ ಈ ಘಟನೆ ಬೆಳಕಿಗೆ ಬಂದಿದೆ.

ಮೃತ ಮೀನುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನೀರಿನಲ್ಲಿ  ಒಂದು ರಾಸಾಯನಿಕವನ್ನು ನೀರಿನಲ್ಲಿ ರಾಸಾಯನಿಕ ಮಿಶ್ರಣದಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ.

fallbacks

ನದಿ ಪಾತ್ರದಲ್ಲಿ ಬೃಹತ್‌ ಗಾತ್ರದ ಮೀನುಗಳ ನಿಗೂಢ ಸಾವು ಜನರಲ್ಲಿ ಆತಂಕ ಮೂಡಿಸಿದ್ದು, ಹರಿಯುವ ನೀರಿನಲ್ಲಿ ಹಸಿರು ಪಾಚಿ ಕಾಣಿಸಿಕೊಂಡ ಮರುದಿನದಿಂದಲೇ ದೊಡ್ಡ ದೊಡ್ಡ ಮೀನುಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Read More