Home> Karnataka
Advertisement

ಬೆಡ್ ರೂಂನಲ್ಲೇ ಭಾರೀ ಬೆಂಕಿ, ಅಪಾಯದಿಂದ ಪಾರಾದ ಸಚಿವ ಈಶ್ವರಪ್ಪ ದಂಪತಿ

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಸಂಪೂರ್ಣ ರೂಮ್ ಸುಟ್ಟು ಭಸ್ಮವಾಗಿದೆ.

ಬೆಡ್ ರೂಂನಲ್ಲೇ ಭಾರೀ ಬೆಂಕಿ, ಅಪಾಯದಿಂದ ಪಾರಾದ ಸಚಿವ ಈಶ್ವರಪ್ಪ ದಂಪತಿ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa)ರವರ ನಿವಾಸದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಈಶ್ವರಪ್ಪ ದಂಪತಿ ಅಪಾಯದಿಂದ ಪಾರಾಗಿದ್ದಾರೆ.

ಸಚಿವರ ಕೋಣೆಯಲ್ಲಿ ಎಸಿಯಿಂದ ಕಾಣಿಸಿಕೊಂಡ ಬೆಂಕಿ:

ಸಚಿವ ಕೆ.ಎಸ್. ಈಶ್ವರಪ್ಪ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಮಲಗಲು ತಮ್ಮ ಬೆಡ್ ರೂಂಗೆ ತೆರಳಿದ್ದಾರೆ. ತಾವು ಮಲಗುವ ಮುನ್ನ ಈಶ್ವರಪ್ಪ ಎಸಿ ಸ್ವಿಚ್ ಆನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ದಂಪತಿಗಳು ಕೋಣೆಯಿಂದ ತಕ್ಷಣವೇ ಹೊರಬಂದಿದ್ದಾರೆ.

ಈಶ್ವರಪ್ಪ ಕೂಡಲೇ ತಮ್ಮ ಅಳಿಯನಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕ್ಷಣಾರ್ಧದಲ್ಲಿ ಸಂಪೂರ್ಣ ರೂಮ್ ಆವರಿಸಿದ ಬೆಂಕಿಯಿಂದಾಗಿ ಇಡೀ ಬಂಗಲೆಯ ವಿದ್ಯುತ್ ವೈರಿಗಂಗಳು ಮತ್ತು ವುಡ್ ವರ್ಕ್ ನ ಹಲವು ಸಾಮಾಗ್ರಿಗಳು ಭಾಗಶಃ ಸುಟ್ಟು ಕರಕಲಾಗಿವೆ.

ಘಟನೆಯಲ್ಲಿ ಒಂದು ಕೊಠಡಿ ಸಂಪೂರ್ಣ ಸುಟ್ಟು ಹೋಗಿದ್ದು, ಬಟ್ಟೆ, ಬೆಡ್, ಕರ್ಟನ್ ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಈಶ್ವರಪ್ಪ ದಂಪತಿ ಹೊರಗೆ ಬಂದಿದ್ದರಿಂದ ಯಾರಿಗೂ ಏನೂ ಅಪಾಯವಾಗಿಲ್ಲ.

Read More