Home> Karnataka
Advertisement

DKS vs Siddu: ಕೊನೆಪಕ್ಷ ಸಿದ್ದರಾಮಯ್ಯಗೆ ಟಿಕೆಟ್ ಆದ್ರೂ ಕೊಡ್ತಾರಾ ಡಿಕೆಶಿ?

#BharatTodoYatra ಸಭೆಗಳಿಗೂ ಸಿದ್ದರಾಮಯ್ಯರಿಗೆ ಆಹ್ವಾನ ಇರಲಿಲ್ಲ. ನಿನ್ನೆಯ ಟಿಕೇಟ್ ಆಕಾಂಕ್ಷಿಗಳ ಸಭೆಗೂ ಆಹ್ವಾನ ಇರಲಿಲ್ಲ. ಕೊನೆಪಕ್ಷ ಡಿಕೆಶಿಯವರು ಸಿದ್ದರಾಮಯ್ಯನವರಿಗೆ ಟಿಕೇಟ್ ಆದ್ರೂ ಕೊಡ್ತಾರಾ? ಅಂತಾ BJP ಪ್ರಶ್ನಿಸಿದೆ.

DKS vs Siddu: ಕೊನೆಪಕ್ಷ ಸಿದ್ದರಾಮಯ್ಯಗೆ ಟಿಕೆಟ್ ಆದ್ರೂ ಕೊಡ್ತಾರಾ ಡಿಕೆಶಿ?

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಬಣ ರಾಜಕೀಯ ಶುರುವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರದ ಕಾಳಗ ನಡೆಯುತ್ತಿದೆ. ಇಬ್ಬರು ನಾಯಕರು ತೋರಿಕೆಗೆ ಚೆನ್ನಾಗಿ ಕಂಡರೂ ಪರಸ್ಪರ ಕಾಲೆಳೆಯುತ್ತಾ, ಎಟಿಗೆ-ಎದಿರೇಟಿನಂತೆ ನಡೆದುಕೊಳ್ಳುತ್ತಿದ್ದಾರೆ.

ಕೊಪ್ಪಳದಲ್ಲಿ ಸಿದ್ದರಾಮಯ್ಯನವರು ಮುಂದಿನ ವಿಧಾನಸಭೆ ಚುನಾವಣೆಗೆ ಐವರು ಅಭ್ಯರ್ಥಿಗಳನ್ನು ಘೋಷಿಸಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ಬಸವರಾಜ ರಾಯರಡ್ಡಿ, ಅಮರೇಗೌಡ ಬಯ್ಯಾಪೂರ, ಶಿವರಾಜ ತಂಗಡಗಿ, ಇಕ್ಬಾಲ್‌ ಅನ್ಸಾರಿ ಮತ್ತು ರಾಘವೇಂದ್ರ ಹಿಟ್ನಾಳ್‍ರನ್ನು ಗೆಲ್ಲಿಸಬೇಕು ಅಂತಾ ಮನವಿ ಮಾಡಿದ್ದರು.

fallbacks

ಇದನ್ನೂ ಓದಿ: ಬೆಳಗಾವಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ ಲೋಕಾಯಕ್ತ ಬಲೆಗೆ..!

ಆದರೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಸಿದ್ದರಾಮಯ್ಯನವರ ನಡೆಗೆ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದರು. ‘ಅಭ್ಯರ್ಥಿ ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ, ನನಗೂ ಇಲ್ಲ, ಅದು ಇರುವುದು ಕೇವಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮಾತ್ರ’ ಅಂತಾ ಹೇಳುವ ಮೂಲಕ ಸಿದ್ದುಗೆ ಡಿಕೆಶಿ ತಿರುಗೇಟು ನೀಡಿದ್ದರು.

ಟಿಕೆಟ್ ಹಂಚಿಕೆ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕದನ ನಡೆಯುತ್ತಿದೆ. ಕಾಂಗ್ರೆಸ್‍ನಲ್ಲಿ ಒಬ್ಬ ಅಭ್ಯರ್ಥಿಗೆ ಒಂದೇ ಟಿಕೆಟ್ ಎಂಬ ನಿಯಮವನ್ನು ಡಿಕೆಶಿ ಘೋಷಿಸಿದ್ದಾರೆ. ಇದೀಗ ಇಚೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಗಿಡೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯರನ್ನು ಕಟ್ಟಿಹಾಕಲು, ಕಾಂಗ್ರೆಸ್‌ನಲ್ಲಿಯೇ ತಂತ್ರ ರೂಪುಗೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. #BharatTodoYatra ಸಭೆಗಳಿಗೂ ಸಿದ್ದರಾಮಯ್ಯರಿಗೆ ಆಹ್ವಾನ ಇರಲಿಲ್ಲ. ನಿನ್ನೆಯ ಟಿಕೇಟ್ ಆಕಾಂಕ್ಷಿಗಳ ಸಭೆಗೂ ಆಹ್ವಾನ ಇರಲಿಲ್ಲ. ಕೊನೆಪಕ್ಷ ಡಿಕೆಶಿಯವರು ಸಿದ್ದರಾಮಯ್ಯನವರಿಗೆ ಟಿಕೇಟ್ ಆದ್ರೂ ಕೊಡ್ತಾರಾ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: ಐಸಿಸ್ ಟ್ರೈನಿಂಗ್ ಪಡೆದಿದ್ದ ಮಂಗಳೂರು ಸ್ಫೋಟದ ಆರೋಪಿಯಿಂದ 40 ಮಂದಿಗೆ ತರಬೇತಿ: ಶೋಭಾ ಕರಂದ್ಲಾಜೆ

‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ನೆಮ್ಮದಿಗೆ ಮತ್ತೆ ಭಂಗಬಂದಿದೆ. ಮೇಲ್ನೋಟಕ್ಕೆ ಅವರ ಪರಮಾಪ್ತರಂತೆ ನಟಿಸುವ ಚೋಡೋ ಗೆಳೆಯ ಡಿಕೆಶಿ ಇನ್ನೊಂದು ಬಾಣ ಬಿಟ್ಟಿದ್ದಾರೆ. 5 ಜಿಲ್ಲೆಗಳಿಗೆ ದಿಢೀರಂತ ಅಧ್ಯಕ್ಷರನ್ನು ನೇಮಿಸಿ, ಸಿದ್ದರಾಮಯ್ಯನವರು ಬಾಲ ಬಿಚ್ಚದಂತೆ ನೋಡಿಕೊಂಡಿದ್ದಾರೆ’ ಅಂತಾ ಬಿಜೆಪಿ ಕುಟುಕಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More