Home> Karnataka
Advertisement

ಬಾಮೈದನಿಂದಲೇ ಯೋಧನ ಕೊಲೆ, ಸಹೋದರಿ ಜೊತೆ ಜಗಳವಾಡಿದ್ದಕ್ಕೆ ಸಿಟ್ಟಿಗೆದ್ದು ಭಾವನ ಹತ್ಯೆ

ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ , ಕಳೆದ ನಾಲ್ಕು ದಿನದ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದ.  ಈ ವೇಳೆ ತನ್ನ ಪತ್ನಿ ಜೊತೆ ಯೋಧ ಜಗಳವಾಡಿದ್ದಾನೆ. ಪತಿ ತನ್ನೊಂದಿಗೆ ಜಗಳವಾಡಿರುವ ವಿಚಾರವನ್ನು ಪತ್ನಿ ಆಕೆಯ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾಳೆ. 

ಬಾಮೈದನಿಂದಲೇ ಯೋಧನ ಕೊಲೆ, ಸಹೋದರಿ ಜೊತೆ ಜಗಳವಾಡಿದ್ದಕ್ಕೆ ಸಿಟ್ಟಿಗೆದ್ದು ಭಾವನ ಹತ್ಯೆ

ಬಾಗಲಕೋಟೆ : ರಜೆ ಮೇಲೆ ಬಂದಿದ್ದ ಯೋಧನ‌ ತನ್ನ ಬಾಮೈದನಿಂದಲೇ ಕೊಲೆಯಾಗಿದ್ದಾನೆ. 25 ವರ್ಷದ ಕರಿಸಿದ್ದಪ್ಪ‌ ಕಳಸದ ಕೊಲೆಯಾದ ಯೋಧ. ಕರಿಸಿದ್ದಪ್ಪ ಕಳಸದನನ್ನು   ಅವರ ಬಾಮೈದ ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನು ಧರಿಗೌಡ ದೂಳಪ್ಪನವರ  ಎಂದು ಗುರುತಿಸಲಾಗಿದೆ. ಬಾಗಲಕೋಟೆ ‌ಜಿಲ್ಲೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. 

ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ , ಕಳೆದ ನಾಲ್ಕು ದಿನದ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದ. ಈ ವೇಳೆ ತನ್ನ ಪತ್ನಿ ಜೊತೆ ಯೋಧ ಜಗಳವಾಡಿದ್ದಾನೆ. ಪತಿ ತನ್ನೊಂದಿಗೆ ಜಗಳವಾಡಿರುವ ವಿಚಾರವನ್ನು ಪತ್ನಿ ಆಕೆಯ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾಳೆ. 

ಇದನ್ನೂ ಓದಿ : ಎ.ಸಿ.ಬಿ.ರದ್ದು ವಿಚಾರ : ಪಕ್ಷದ ಪ್ರಣಾಳಿಕೆ ಆಧರಿಸಿ ಮುಂದಿನ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಜೆ ಮೇಲೆ ಬಂದಿದ್ದ ಯೋಧ ಊಟ ಮಾಡುವ ವೇಳೆ ಪತ್ನಿ ಜೊತೆ ಜಗಳವಾಡಿದ್ದಾನೆ.  ಈ ವಿಚಾರಕ್ಕೆ ಯೋಧನ ಬಾಮೈದ ಕೋಪಗೊಂಡಿದ್ದಾನೆ. ತನ್ನ ಸಹೋದರಿಗೆ ಕಿರುಕುಳ ನೀಡುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.  ಹೀಗೆ ಮಾತಿಗೆ ಮಾತು ಬೆಳೆದು ಜಗಳ ಚಾಕು ಇರಿತದವರೆಗೆ ತಲುಪಿದೆ.  ನಿನ್ನೆ ರಾತ್ರಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೆರೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಚಾಕು ಇರಿತಕ್ಕೊಳಗಾದ ಯೋಧ ಕರಿಸಿದ್ದಪ್ಪ‌ ಕಳಸದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಯೋಧ ಕರಿಸಿದ್ದಪ್ಪ‌ ಕಳಸದ ಎರಡು ವರ್ಷದ ಹಿಂದೆ ವಿದ್ಯಾ ಎಂಬುವಳ ಜೊತೆ  ಲವ್ ಮ್ಯಾರೇಜ್ ಆಗಿದ್ದ. 

ಇದನ್ನೂ ಓದಿ : ಭೇಟಿ ಮಾಡಲು ಬಂದ ಯುವತಿ ಮೇಲೆ ಅತ್ಯಾಚಾರವೆಸಗಿದ ಸಂಬಂಧಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More