Home> Karnataka
Advertisement

BJP Janmotsav Program : ಉಮೇಶ್ ಕತ್ತಿ ನಿಧನ ಹಿನ್ನಲೆ ಮುಂದೂಡಿದ 'ಜನೋತ್ಸವ ಕಾರ್ಯಕ್ರಮ'

ಸಂಪುಟ ಸಹುದ್ಯೋಗಿ ಉಮೇಶ್ ಕತ್ತಿ ನಿಧನ ಹೊಂದಿದ ಹಿನ್ನೆಲೆ, 8ನೇ ತಾರೀಖು ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. 

BJP Janmotsav Program : ಉಮೇಶ್ ಕತ್ತಿ ನಿಧನ ಹಿನ್ನಲೆ ಮುಂದೂಡಿದ 'ಜನೋತ್ಸವ ಕಾರ್ಯಕ್ರಮ'

ಬೆಂಗಳೂರು : ಸಂಪುಟ ಸಹುದ್ಯೋಗಿ ಉಮೇಶ್ ಕತ್ತಿ ನಿಧನ ಹೊಂದಿದ ಹಿನ್ನೆಲೆ, 8ನೇ ತಾರೀಖು ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. 

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಜನೋತ್ಸವ ಕಾರ್ಯಕ್ರಮವನ್ನು 11 ನೇ ತಾರಿಖು ಭಾರವಾರ ಕಾರ್ಯಕ್ರಮ ಮುಂದುವರೆಸಿದ್ದೇವೆ. ಉಮೇಶ್ ಕತ್ತಿ ಅವರ ಕುಟಂಬಕ್ಕೆ ಸಾಂತ್ವಾನ  ಶೋಕಾಚಾರಣೆ ಇದೆ. ಭಾಗದಲ್ಲಿ ಎಲ್ಲಾ ಕಾರ್ಯಕರ್ತರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. ನಮ್ಮನ್ನ ಅಗಲಿದ ಕತ್ತಿ ಕುಟುಂಬದ ಜೊತೆ ಇದ್ದು ಸಾಂತ್ವಾನ ಹೇಳಬೇಕಿದೆ. ಸಿಎಂ ಅಲ್ಲಿಗೆ ತೆರಳಿದ್ದಾರೆ ಎಂದರು.

ಇದನ್ನೂ ಓದಿ : BS Yediyurappa: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ..!

ನಂತರ ಉಮೇಶ್ ಕತ್ತಿ ಬಗ್ಗೆ ಮಾತನಾಡಿದ ಅವರು, ಒಳ್ಳೆಯ ನಾಯಕರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರು. ಇವರು 8 ಬಾರಿ ಶಾಸಕರಾಗಿದ್ರು. ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಶಾಸಕರಾಗಿದ್ರು. ಬಹಳ ನೋವಿನ ವಿಚಾರ ಆಗಾಗಿ ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More