Home> Bengaluru
Advertisement

ಕುಕ್ಕರ್ ನಿಂದ ಹೊಡೆದು ಲವರ್ ಕೊಂದ ಪ್ರೇಮಿ..! ʼಲಿವಿಂಗ್ ಟುಗೆದರ್‌ ಲವ್‌ʼ

ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯಯಾಗಿರೋ ಘಟನೆ ಬೆಂಗಳೂರಿನ ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಪ್ರಿಯಯತಮೆಯನ್ನೇ ಪ್ರೇಮಿಯೊಬ್ಬ ಕುಕ್ಕರ್ ನಿಂದ ಕೊಂದು ಕೊಲೆ ಮಾಡಿದ್ದಾನೆ. ದೇವಾ ಎಂಬ 24ವರ್ಷದ ಯುವತಿಯನ್ನ ಅದೇ ವಯಸ್ಸಿನ ಪ್ರಿಯತಮ ವೈಷ್ಣವ್ ಕೊಲೆ ಮಾಡಿ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.

ಕುಕ್ಕರ್ ನಿಂದ ಹೊಡೆದು ಲವರ್ ಕೊಂದ ಪ್ರೇಮಿ..! ʼಲಿವಿಂಗ್ ಟುಗೆದರ್‌ ಲವ್‌ʼ

ಬೆಂಗಳೂರು : ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯಯಾಗಿರೋ ಘಟನೆ ಬೆಂಗಳೂರಿನ ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಪ್ರಿಯಯತಮೆಯನ್ನೇ ಪ್ರೇಮಿಯೊಬ್ಬ ಕುಕ್ಕರ್ ನಿಂದ ಕೊಂದು ಕೊಲೆ ಮಾಡಿದ್ದಾನೆ. ದೇವಾ ಎಂಬ 24ವರ್ಷದ ಯುವತಿಯನ್ನ ಅದೇ ವಯಸ್ಸಿನ ಪ್ರಿಯತಮ ವೈಷ್ಣವ್ ಕೊಲೆ ಮಾಡಿ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.

ಅಂದ್ಹಾಗೆ ಇವ್ರಿಬ್ರ ಲವ್ ಸ್ಟೋರಿ ಮತ್ತೆ ಎಂಡಿಂಗ್ ಸ್ಟೋರಿ ಎರಡೂ ಹೇಳ್ಬಿಡ್ತೀವಿ ನೋಡಿ.. ಎಂಜಿನಿಯರಿಂಗ್ ಓದಿ ಪದವಿ ಪಡೆದಿದ್ದ ದೇವಾ ಮತ್ತು ವೈಷ್ಣವ್ ಇಬ್ರೂ ಕೇರಳ ಮೂಲದವ್ರು.. ದೇವಾ ಕೊಚ್ಚಿಯಾಕೆ ಆದ್ರೆ ವೈಷ್ಣವ್ ತಿರುವಂತನಪುರಂನಾಥ.. ಇಬ್ಬರಿಗೂ ಓದೋವಾಗ್ಲೆ ಲವ್ ಅಲ್ಲಿ ಬಿದ್ದಿದ್ರು.. 

ಇದನ್ನೂ ಓದಿ : ಸಿಗರೆಟ್‌ಗಾಗಿ ಜಗಳ ಶುರು ಮಾಡಿ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ..!

ಈ ವಿಚಾರ ಇಬ್ಬರ ಮನೆಯವ್ರಿಗೂ ಗೊತ್ತಾಗಿ ಪ್ರೀತಿಗೆ ಒಪ್ಪಿಗೆ ಕೂಡ ಸೂಚಿಸಿದ್ರು.. ಓದಿನ ನಂತರ ಬೆಂಗಳೂರಿಗೆ ಬಂದಿದ್ದೋರು ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡ್ತಿದ್ರು.. ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್ ನಲ್ಲಿ ಮನೆ ಮಾಡಿಕೊಂಡಿದ್ದವರು ಇಬ್ಬರೂ ಜೊತೆಯಲ್ಲೇ ಲಿವಿಂಗ್ ಟುಗೆದರ್ ನಲ್ಲಿದ್ರು.. 

ಜೀವನ ಚೆನ್ನಾಗೇ ಸಾಗ್ತಿತ್ತು.. ಮುಂದಿನ ದಿನಗಳಲ್ಲಿ ಮದ್ಚೆ ಮಾಡ್ಕೊಳ್ಳೋಕು ಚಿಂತನೆ ಮಾಡಿದ್ರು.. ಆದ್ರೆ ಅಷ್ಟರಲ್ಲೇ ಜಗಳ ಶುರುವಾಗಿತ್ತು.. ಇತ್ತೀಚೆಗೆ ದೇವಾ ಮೇಲೆ ಅನುಮಾನ ಪಡ್ತಿದ್ದ ವೈಷ್ಣವ್ ಆಗಾಗ ಜಗಳ ತೆಗೀತ್ತಿದ್ದ.. ಹಂಗೆ ನಿನ್ನೆ ಸಂಜೆ ನಾಲ್ಕೂವರೆ ಸುಮಾರಿಗೆ ಇಬ್ಬರ ಮಧ್ಯೆಯೂ ಜಗಳ ನಡೆದಿತ್ತು.. ಆ ಜಗಳ ವಿಕೋಪಕ್ಕೆ ಹೋಗಿ ಕಿಚನ್ ನಲ್ಲಿದ್ದ ಕುಕ್ಕರನ್ನ ಕೈಗೆತ್ತುಕೊಂಡಿದ್ದ ವೈಷ್ಣವ್ ದೇವಾ ತಲೆಗೆ ಬಲವಾಗಿ ಹೊಡೆದಿದ್ದಾನೆ.. 

ಇದನ್ನೂ ಓದಿ : ಗಾಂಜಾ ಸೇದುವವರು ನಗುತ್ತಾ ಇಲ್ಲವೇ ಅಳುತ್ತಲೇ ಇರುತ್ತಾರೆ..! ಏಕೆ ಗೊತ್ತಾ..? 

ಪರಿಣಾಮ ತೀವ್ರಗಾಯಗೊಂಡಿದ್ದ ದೇವಾ ಸಾವನ್ನಪ್ಪಿದ್ದಾಳೆ.. ಇನ್ನು ಕೊಲೆ ಬಗ್ಗೆ ಮಾಹಿತಿ ಬಂದಿದ್ದೇ ತಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೇಗೂರು ಪೊಲೀಸರು ಆರೋಪಿ ವೈಷ್ಣವ್ ನನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.. ಏನೆ ಆಗ್ಲಿ.. ಒಂದು ಸಂಬಂಧ ಅಂದ್ಮೇಲೆ ಸಂಶಯ, ಜಗಳ ಬಂದೇ ಬರುತ್ವೆ.. ಆದ್ರೆ ತಾಳ್ಮೆಯಿಂದ ಜಗಳ ಕಂಟ್ರೋಲ್ ಮಾಡಿದ್ರೆ ಇಂತಹ ಯಾವ ಅನಾಹುತವೂ ಆಗಲ್ಲ.. ಕೋಪ ವಿಕೋಪದಿಂದ ಈ ರೀತಿ ಬದುಕಬೇಕಾಗಿದ್ದವ ಜೀವ-ಜೀವನ ಎರಡೂ ಹಾಳಾಗೋದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More