Home> Karnataka
Advertisement

ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥ : ದಾವಣೆಗೆರೆಯ ಮಲೇಬೆನ್ನೂರಿನಲ್ಲಿ ಘಟನೆ

Panipuri : ಬೀದಿ ಬದಿಯ ಅಂಗಡಿಯಲ್ಲಿ ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನಲ್ಲಿ ನಡೆದಿದೆ. 

ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥ : ದಾವಣೆಗೆರೆಯ ಮಲೇಬೆನ್ನೂರಿನಲ್ಲಿ ಘಟನೆ

Food poisoning : ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಪಟ್ಟಣದ ಬೀದಿಬದಿಯ ಅಂಗಡಿಯಲ್ಲಿ 19 ಮಕ್ಕಳು ಪಾನಿಪುರಿ ಸೇವಿಸಿ ನಂತರ ಅಸ್ವಸ್ಥ ಗೊಂಡಿರುವ ಘಟನೆ ಬೆಳಕಿಗೆ ಬಂದಿದೆ

ಮಲೆಬೆನ್ನೂರಿನ ಜಾಮಿಯಾ ಮಸೀದಿ ಬಳಿ ಕಳೆದ ಬುಧವಾರ ರಂಜಾನ್ ಉಪವಾಸದ ನಂತರ ಸಂಜೆ ಪ್ರಾರ್ಥನೆ ಸಲ್ಲಿಸಿ ಹೊರಬಂದು ಮಕ್ಕಳು ಪಾನಿಪುರಿ ಸೇವಿಸಿದ್ದರು.

ಗುರುವಾರ ಬೆಳಿಗ್ಗೆ ಮಕ್ಕಳಲ್ಲಿ ಜ್ವರ ಹೊಟ್ಟೆ ನೋವು ಕಂಡುಬಂದು, ವಾಂತಿಯಿಂದ ಮಕ್ಕಳು ಬಳಲಲು ಪ್ರಾರಂಭಿಸಿದರು.

ಇದನ್ನು ಓದಿ : Ritika Singh: ಕಡಲ ತೀರದಲ್ಲಿ "ಓ ಮೈ ಕಡುವಲೆ"ಯ ನೂಡಲ್ ಮಂಡೆ ಫೋಟೋಸ್ ವೈರಲ್

19 ಮಕ್ಕಳಲ್ಲಿ 11 ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಏಳು ಮಕ್ಕಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ್ದು, ಸದ್ಯ 7 ವರ್ಷದ ಬಾಲಕನ ಬನ ಸ್ಥಿತಿ ಗಂಭೀರವಾಗಿದೆ. 

ಅಧಿಕಾರಿಗಳು ಪಟ್ಟಣಕ್ಕೆ ಭಾವಿಸಿ ಪರಿಸ್ಥಿತಿಯ ಅವಲೋಕನ ಮಾಡಲಾಗಿದ್ದು, ಮಕ್ಕಳು ಅಸ್ವಸ್ಥಗೊಂಡಿದ್ದಕ್ಕೆ ಕುಡಿಯುವ ನೀರಿನ ಸಮಸ್ಯೆ ಕಾರಣವಲ್ಲ ಎಂದು ಪುರಸಭೆ ಮುಖ್ಯ ಅಧಿಕಾರಿ ಎ.ಸುರೇಶ್ ಹೇಳಿದ್ದಾರೆ

ಇದನ್ನು ಓದಿ : KPSC : 247 ಪಿಡಿಒ ಹುದ್ದೆ ಭರ್ತಿಗೆ ಕೆಪಿಎಸ್ ಸಿ ಅಧಿಸೂಚನೆ

ಪಾನಿಪುರಿ ವ್ಯಾಪಾರಿ ನಾಪತ್ತೆಯಾಗಿದ್ದು ಆತನ ಮೇಲೆ ಯಾವುದೇ ರೀತಿಯ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More