Home> India
Advertisement

ಪಾಕ್-ರಾಮ ಮಂದಿರದಿಂದಾಗಿ ಲೋಕಸಭಾ ಚುನಾವಣೆ ಗೆದ್ದಿದ್ದೀರಿ, ಆದರೆ ರಾಜ್ಯದ ಸಮಸ್ಯೆಯೇ ಬೇರೆ; ಸಂಜಯ್ ರಾವತ್

'ರಾಜ್ಯ ಚುನಾವಣೆಯಲ್ಲಿ ಪಾಕಿಸ್ತಾನದ ವಿಷಯವನ್ನು ಎತ್ತುವ ಮೂಲಕ ನೀವು ಏನು ಮಾಡುತ್ತೀರಿ. ಈ ವಿಷಯದಲ್ಲಿ ಲೋಕಸಭೆಯಲ್ಲಿ ಜನರು ನಿಮಗೆ ಮತ ಹಾಕಿದ್ದಾರೆ. ನೀವು ಅದೇ ವಿಷಯಗಳಲ್ಲಿ ಗೆದ್ದಿದ್ದೀರಿ' ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಪಾಕ್-ರಾಮ ಮಂದಿರದಿಂದಾಗಿ ಲೋಕಸಭಾ ಚುನಾವಣೆ ಗೆದ್ದಿದ್ದೀರಿ, ಆದರೆ ರಾಜ್ಯದ ಸಮಸ್ಯೆಯೇ ಬೇರೆ; ಸಂಜಯ್ ರಾವತ್

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019 ರ ಫಲಿತಾಂಶದ ಮೊದಲು ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಬಿಜೆಪಿಯನ್ನು ಗುರಿಯಾಗಿಸಿಕೊಂಡು ರಾಜ್ಯ ಚುನಾವಣೆಯಲ್ಲಿ ಪಾಕಿಸ್ತಾನದ ವಿಷಯವನ್ನು ಎತ್ತುವ ಮೂಲಕ ನೀವು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

ಪಕ್ಷದ ಕಾರ್ಯಕರ್ತರು ಮತ್ತು ಮಹಾರಾಷ್ಟ್ರ ಜನತೆ ಆದಿತ್ಯ ಠಾಕ್ರೆ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. 

'ಪಾಕಿಸ್ತಾನದ ಬಗ್ಗೆ ನಮ್ಮ ಕೇಂದ್ರ ಸರ್ಕಾರದ ನೀತಿ ಏನೆಂದು ಜನರಿಗೆ ತಿಳಿದಿದೆ. ರಾಜ್ಯ ಚುನಾವಣೆಯಲ್ಲಿ ಪಾಕಿಸ್ತಾನದ ವಿಷಯವನ್ನು ಎತ್ತುವ ಮೂಲಕ ನೀವು ಏನು ಮಾಡುತ್ತೀರಿ. ಈ ವಿಷಯದಲ್ಲಿ ಲೋಕಸಭೆಯಲ್ಲಿ ಜನರು ನಿಮಗೆ ಮತ ಹಾಕಿದ್ದಾರೆ. ನೀವು ಅದೇ ವಿಷಯಗಳಲ್ಲಿ ಗೆದ್ದಿದ್ದೀರಿ' ಎಂದು ಶಿವಸೇನೆ ಮುಖಂಡ ಹೇಳಿದ್ದಾರೆ.

'ಪಾಕಿಸ್ತಾನ ಮತ್ತು ರಾಮ ಮಂದಿರ ವಿಷಯಗಳಿಂದಾಗಿ ಮತದಾರರು ನಿಮಗೆ ಮತಹಾಕಿದ್ದಾರೆ. ಆದರೆ ವಿಧಾನಸಭಾ ಚುನಾವಣಾ ವಿಷಯಗಳು ವಿಭಿನ್ನ. ಕೇಂದ್ರ ಹಾಗೂ ರಾಜ್ಯದ ಸಮಸ್ಯೆಗಳು ಬೇರೆಯೇ ಆಗಿವೆ' ಎಂದು ರಾವತ್ ಹೇಳಿದರು.

ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಮತದಾನ ನಡೆದಿದೆ. ಮಹಾರಾಷ್ಟ್ರದಲ್ಲಿ 55.37% ಮತದಾನವಾಗಿದೆ.

ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ 235 ಮಹಿಳೆಯರು ಸೇರಿದಂತೆ 3,237 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾನಕ್ಕಾಗಿ 96,661 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ 6.5 ಲಕ್ಷ ನೌಕರರನ್ನು ನಿಯೋಜಿಸಲಾಗಿದೆ. ಅಭ್ಯರ್ಥಿಗಳಲ್ಲಿ ಬಿಜೆಪಿ (164), ಶಿವಸೇನೆ 126, ಕಾಂಗ್ರೆಸ್ (147), ಕಾಂಗ್ರೆಸ್ (ಎನ್‌ಸಿಸಿಪಿ) 147, ಎನ್‌ಸಿಪಿ 121, ಎಂಎನ್‌ಎಸ್ 101, ಬಿಎಸ್‌ಪಿ 262, ವಿಬಿಎ 288, ಸಿಪಿಐ 16, ಸಿಪಿಐ (ಎಂ) 8, ಇತರ ನೋಂದಾಯಿತ ಪಕ್ಷಗಳು 604 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ, ಉಳಿದ 1,400 ಮಂದಿ ಸ್ವತಂತ್ರ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
 

Read More