ನವದೆಹಲಿ: ಲಕ್ಷಾಂತರ ಗ್ರಾಹಕರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಬ್ಯಾಂಕುಗಳಿಂದ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಎಟಿಎಂಗಳಿಂದ ವಂಚನೆ ಪ್ರಕರಣದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇತ್ತೀಚೆಗೆ, ಎಟಿಎಂ ವಂಚನೆ ಹೆಚ್ಚಾಗಿರುವುದಕ್ಕೆ ನ್ಯಾಯಾಲಯವು ಬ್ಯಾಂಕುಗಳನ್ನು ಖಂಡಿಸಿತು. ಎಟಿಎಂ ವಂಚನೆಯನ್ನು ತಡೆಯಲು ದೆಹಲಿ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಕೆಲವು ಕ್ರಮಗಳನ್ನು ಸೂಚಿಸಿದೆ. ಎಸ್ಎಸ್ಬಿಸಿ ನೀಡಿದ ಸಲಹೆಗಳನ್ನು ಅಂಗೀಕರಿಸಿದರೆ, ಎಟಿಎಂ ವಂಚನೆ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಸಮಿತಿ ಆಶಿಸಿದೆ. ಎರಡು ಎಟಿಎಂ ವಹಿವಾಟುಗಳ ನಡುವೆ 6 ರಿಂದ 12 ಗಂಟೆಗಳ ಕಾಲ ಅಂತರ ಇಡಬೇಕು ಎಂದು ಸಮಿತಿ ಸೂಚಿಸಿತು.
ರಾತ್ರಿಯಲ್ಲಿ ವಂಚನೆ ಪ್ರಕರಣಗಳು ಹೆಚ್ಚು:
ದೇಶದಲ್ಲಿ ಒಟ್ಟು 980 ಎಟಿಎಂ ವಂಚನೆ ಪ್ರಕರಣಗಳು ದಾಖಲು:
ಸಭೆಯಲ್ಲಿ ಪ್ರಸ್ತುತಪಡಿಸಿದ ದತ್ತಾಂಶದಿಂದ, ಎಟಿಎಂ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. 2018-19ನೇ ಸಾಲಿನಲ್ಲಿ ದೆಹಲಿಯಲ್ಲಿ 179 ಎಟಿಎಂ ವಂಚನೆ ಪ್ರಕರಣಗಳು ನಡೆದಿವೆ. ದೇಶಾದ್ಯಂತ ಒಟ್ಟು 980 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಎಟಿಎಂ ವಂಚನೆ ಮತ್ತು ಎಟಿಎಂ ಕಾರ್ಡ್ಗಳ ಕ್ಲೋನಿಂಗ್ ಗೆ ಸಂಬಂಧಿಸಿವೆ. ಇದಕ್ಕೂ ಮೊದಲು 2017-18ನೇ ಸಾಲಿನಲ್ಲಿ ಒಟ್ಟು 911 ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿವೆ.
ಒಟಿಪಿಯನ್ನು ಕಡ್ಡಾಯಗೊಳಿಸಿದ ಕೆನರಾ ಬ್ಯಾಂಕ್:
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು, ಕೆನರಾ ಬ್ಯಾಂಕ್ ಎಟಿಎಂನಿಂದ 10 ಸಾವಿರ ಅಥವಾ ಹೆಚ್ಚಿನ ಮೊತ್ತವನ್ನು ಹಿಂಪಡೆಯಲು ಒಟಿಪಿಯನ್ನು ಕಡ್ಡಾಯಗೊಳಿಸಿದೆ.