Home> India
Advertisement

Karnataka ಕಾಂಗ್ರೆಸ್ ನ 5 'ಗ್ಯಾರಂಟಿ'ಗಳು ಇತರ ರಾಜ್ಯಗಳಿಗೂ ಅನ್ವಯಿಸಬಹುದೇ? ಸಾಧ್ಯತೆ ಕುರಿತು ಡಿಕೆಶಿ ಹೇಳಿದ್ದೇನು?

General Elections 2024: ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ಸರ್ಕಾರಗಳು ದೊಡ್ಡ ಉದ್ಯಮಿಗಳಿಗೆ ಸಹಾಯ ಮಾಡುತ್ತವೆ, ಆದರೆ ಸಾಮಾನ್ಯ ಜನರಿಗೆ ಸಹಾಯ ಮಾಡುವುದು ಹೇಗೆ? ಅದಕ್ಕಾಗಿಯೇ ನಾವು ಐದು ಖಾತರಿಗಳನ್ನು ತರಲು ನಿರ್ಧರಿಸಿದೇವು ಎಂದು ಹೇಳಿದ್ದಾರೆ. 
 

Karnataka  ಕಾಂಗ್ರೆಸ್ ನ 5 'ಗ್ಯಾರಂಟಿ'ಗಳು ಇತರ ರಾಜ್ಯಗಳಿಗೂ ಅನ್ವಯಿಸಬಹುದೇ? ಸಾಧ್ಯತೆ ಕುರಿತು ಡಿಕೆಶಿ ಹೇಳಿದ್ದೇನು?

Lok Sabha Elections 2024: ಕಾಂಗ್ರೆಸ್‌ನ 'ಐದು ಗ್ಯಾರಂಟಿ' ಭರವಸೆ ಅತ್ಯಂತ ದಿಟ್ಟ ಹೆಜ್ಜೆ ಎಂದು ಕರ್ನಾಟಕ ಉಪ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ  ಹೇಳಿದ್ದಾರೆ. ಅಲ್ಲದೆ, ಪಕ್ಷವು ಇತರ ರಾಜ್ಯಗಳಲ್ಲಿ ಅದನ್ನು ಅನುಸರಿಸಬಹುದು ಎಂಬುದು ತಮ್ಮ ಭಾವನೆಯಾಗಿದೆ, ಆದರೆ, ಅದು ಸಂಪೂರ್ಣ ಅಲ್ಲಿನ ಆರ್ಥಿಕ ಸ್ಥಿತಿಯ ಮೇಲೆ ಅವಲಂಭಿತವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಶಿವಕುಮಾರ್, ಸರ್ಕಾರಗಳು ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ದೊಡ್ಡ ಉದ್ಯಮಿಗಳಿಗೆ ಸಹಾಯ ಮಾಡುತ್ತವೆ, ಆದರೆ ಸಾಮಾನ್ಯ ಜನರಿಗೆ ಸಹಾಯ ಮಾಡುವುದು ಹೇಗೆ? ಇದೆ ಕಾರಣದಿಂದ ನಾವು ಐದು ಖಾತರಿಗಳನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ನಂತರ ಮಾತನಾಡಿದ ಅವರು, ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಬಡತನವು ಮುಖ್ಯ ಸಮಸ್ಯೆಗಳಾಗಿವೆ, ಅವು ಸೈದ್ಧಾಂತಿಕವಲ್ಲ, ಏಕೆಂದರೆ ಅವು ಹೊಟ್ಟೆ ತುಂಬುವುದಿಲ್ಲ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ
ಶಿವಕುಮಾರ್, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನಂಟು ಇದೆ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸಲಿವೆ ಎಂದು ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತ ಪ್ರದರ್ಶನ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಇತರ ರಾಜ್ಯಗಳಲ್ಲಿ ಐದು ಖಾತರಿ ಯೋಜನೆಗಳು ಜಾರಿಗೆ ತರಬಹುದೇ?
ಇನ್ನೊಂದೆಡೆ, ಇತರ ರಾಜ್ಯಗಳಲ್ಲಿ ಐದು ಖಾತರಿ ಯೋಜನೆ ಅನುಷ್ಠಾನದ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಆಯಾ ರಾಜ್ಯ ಕಾಂಗ್ರೆಸ್ ಪಕ್ಷದ ಘಟಕಗಳು ಅದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ಮುಂದಿನ ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಇತರ ರಾಜ್ಯಗಳಲ್ಲಿ ಚುನಾವಣಾ ‘5 ಖಾತರಿ’ಗಳನ್ನು ಜಾರಿಗೊಳಿಸುವ ತಂತ್ರವನ್ನು ಕಾಂಗ್ರೆಸ್ ಪರಿಗಣಿಸಬಹುದೇ ಎಂದು ಸುದ್ದಿ ಸಂಸ್ಥೆ ಪಿಟಿಐ ಡಿಕೆಶಿ ಅವರನ್ನು ಪ್ರಶ್ನಿಸಿತ್ತು. ಈ ಕುರಿತು ಶಿವಕುಮಾರ್ ಅವರು, ಇದು ಸಂಬಂಧಪಟ್ಟ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-National Training Conclave: ದೇಶದ ಮೊಟ್ಟಮೊದಲ ರಾಷ್ಟ್ರೀಯ ತರಬೇತಿ ಸಮಾವೇಶ ಉದ್ಘಾಟಿಸಿದ ಪ್ರಧಾನಿ ಮೋದಿ

ರಾಜ್ಯಗಳ ಆರ್ಥಿಕ ಸ್ಥಿತಿ ಅವಲಂಭಿಸಿದೆ - ಡಿಕೆಶಿ
ಕರ್ನಾಟಕದಲ್ಲಿನ 5 ಖಾತರಿ ಯೋಜನೆಗಳ ಕುರಿತು ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಇದು ಎಲ್ಲಾ ರಾಜ್ಯಗಳ ಆರ್ಥಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ. ಹಣದುಬ್ಬರದಿಂದ ನಾವು ಈ ಗ್ಯಾರಂಟಿ ನೀಡಿದ್ದೇವೆ. ಹಣದುಬ್ಬರವು ಗಳಿಕೆ ಕಡಿಮೆಯಾಗಿದೆ, ಆದ್ದರಿಂದ ಹಣದುಬ್ಬರವನ್ನು ಸರಿದೂಗಿಸಲಾಗುತ್ತದೆ, ಇದನ್ನು ಮಾಡುವ ಮೂಲಕ ಜನರಿಗೆ ಸರಕಾರ ಸಹಾಯ ಮಾಡಬೇಕೆಂದು ಯೋಚಿಸಿದೆ, ಇದು ತುಂಬಾ ಕಠಿಣ ನಿರ್ಧಾರ ಎಂದು ನಮಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Biparjoy ಕೇವಲ 6 ಗಂಟೆಗಳಲ್ಲಿ ಪಡೆದುಕೊಳ್ಳಲಿದೆ 'ಅತಿ ಗಂಭೀರ ಸ್ವರೂಪ'! ಐ‌ಎಮ್‌ಡಿ ಅಲರ್ಟ್ ಜಾರಿ

ವಿಧಾನಸಭೆ ಚುನಾವಣೆಯ ನಂತರ, ಕರ್ನಾಟಕದ ಹೊಸ ಕಾಂಗ್ರೆಸ್ ಸರ್ಕಾರವು ಜೂನ್ 2 ರಂದು ಕಾಂಗ್ರೆಸ್ನ ಐದು ಚುನಾವಣಾ ಖಾತರಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ ಮತ್ತು ಈ ಹಣಕಾಸು ವರ್ಷದೊಳಗೆ ಈ ಯೋಜನೆಗಳನ್ನು ಜಾರಿಗೆ ತರಲು ಗಡುವನ್ನು ನಿಗದಿಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More