Home> India
Advertisement

ಪತಿಯನ್ನು ಕಂಟ್ರೋಲ್ ಮಾಡಲು ಮಾಟಗಾರನಿಗೆ 59 ಲಕ್ಷ ಕೊಟ್ಟ ಪತ್ನಿ: ಮುಂದೇನಾಯ್ತು ಗೊತ್ತಾ?

Astrologer Dupe Woman: ಮುಂಬೈನ 39 ವರ್ಷದ ಉದ್ಯಮಿಯೊಬ್ಬರು ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಲು 35 ಲಕ್ಷ ರೂಪಾಯಿ ನಗದು ತಂದು ಕಬೋರ್ಡ್ ನಲ್ಲಿಟ್ಟಿದ್ದರು. ಆದರೆ ಮನೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ತನಗೆ ಗೊತ್ತಿಲ್ಲ ಎಂದಿದ್ದಾಳೆ.ಮುಂಬೈನ 39 ವರ್ಷದ ಉದ್ಯಮಿಯೊಬ್ಬರು ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಲು 35 ಲಕ್ಷ ರೂಪಾಯಿ ನಗದು ತಂದು ಕಬೋರ್ಡ್ ನಲ್ಲಿಟ್ಟಿದ್ದರು. ಆದರೆ ಮನೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ತನಗೆ ಗೊತ್ತಿಲ್ಲ ಎಂದಿದ್ದಾಳೆ.

ಪತಿಯನ್ನು ಕಂಟ್ರೋಲ್ ಮಾಡಲು ಮಾಟಗಾರನಿಗೆ 59 ಲಕ್ಷ ಕೊಟ್ಟ ಪತ್ನಿ: ಮುಂದೇನಾಯ್ತು ಗೊತ್ತಾ?

Astrologer Dupe Woman: ತಂತ್ರಜ್ಞಾನ ಕ್ಷೇತ್ರ ಎಷ್ಟೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ನಮ್ಮ ದೇಶದಲ್ಲಿ ಮೂಢನಂಬಿಕೆಗಳ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಇಲ್ಲೊಂದು ಘಟನೆಯಲ್ಲಿ ಉದ್ಯಮಿ ಪತಿಯನ್ನು ನಿಯಂತ್ರಿಸಲು ಮಹಿಳೆಯೊಬ್ಬಲು ಮಾಟಗಾರನಿಗೆ ಬರೋಬ್ಬರಿ 59 ಲಕ್ಷ ರೂ.ಕೊಟ್ಟಿದ್ದಳು. ಆದರೆ ಆಕೆಯ ಮಾಜಿ ಗೆಳೆಯ ಮಾಡಿದ್ದನ್ನು ನೋಡಿದ್ರೆ ಶಾಕ್ ಆಗುತ್ತೀರಿ. ಈ ಘಟನೆ ಮುಂಬೈನಲ್ಲಿ ನಡೆದಿದೆ.

ಇದನ್ನೂ ಓದಿ: Heinous crime : ಶವವನ್ನು 72 ತುಂಡುಗಳಾಗಿ ಕತ್ತರಿಸಿದ್ದ ಕಿರಾತಕ! ಶ್ರದ್ಧಾ ಕೊಲೆಗಿಂತಲೂ ಭಯಾನಕವಾಗಿದೆ ಈ ಘಟನೆ..

ಮುಂಬೈನ 39 ವರ್ಷದ ಉದ್ಯಮಿಯೊಬ್ಬರು ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಲು 35 ಲಕ್ಷ ರೂಪಾಯಿ ನಗದು ತಂದು ಕಬೋರ್ಡ್ ನಲ್ಲಿಟ್ಟಿದ್ದರು. ಆದರೆ ಮನೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ತನಗೆ ಗೊತ್ತಿಲ್ಲ ಎಂದಿದ್ದಾಳೆ.

ಆ ಬಳಿಕ ತನ್ನ ಸಹೋದರನ ಜೊತೆ ಸೇರಿ ಮತ್ತೆ ಆಕೆಯ ಬಳಿಕ ಸತ್ಯವನ್ನು ಬಾಯಿ ಬಿಡುವಂತೆ ಮಾಡಿದ್ದಾನೆ, ಆಗ  ಆಕೆ ಸತ್ಯವನ್ನು ಹೇಳಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದು, ಆತನಿಗೆ ಚಿನ್ನಾಭರಣಗಳನ್ನೂ ನೀಡಿರುವುದಾಗಿ ಪತ್ನಿ ಹೇಳಿದ್ದಾಳೆ.

ಕುಟುಂಬಸ್ಥರ ಮಾತು ಕೇಳಿ ಪತಿ ಕಿರುಕುಳ ನೀಡುತ್ತಿದ್ದ ಎಂದು ಗಂಡನನ್ನು ಹೇಗೆ ಕಂಟ್ರೋಲ್ ಮಾಡುವುದು ಅಂತ ಆಕೆಎ ಯೋಚಿಸಿದ್ದಳು. ಇದೇ ಸಂದರ್ಭದಲ್ಲಿ ಬಾದಲ್ ಶರ್ಮಾ ಎಂಬ ಜ್ಯೋತಿಷಿ ಇನ್ಸ್ಟಾಗ್ರಾಮ್ ನಲ್ಲಿ ಜಾಹೀರಾತನ್ನು ನೀಡಿದ್ದ. ಆ ಬಳಿಕ ಆತನನ್ನು ಸಂಪರ್ಕಿಸಿ, ಪತಿಯನ್ನು ಹತೋಟಿಗೆ ಹೇಗೆ ತರುವುದು ಎಂದು ಕೇಳಿದ್ದಾಳೆ. ಅದಕ್ಕೆ ಆತ ಸಹಾಯ ಮಾಡುವುದಾಗಿಯೂ ಹೇಳಿದ್ದಾನೆ. ಅಷ್ಟೇ ಅಲ್ಲದೆ, ಈ ಮಹಿಳೆಯ ಮಾಜಿ ಗೆಳೆಯ ಪರೇಶ್ ಗಡ ಕೂಡ ಇದಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದ.

ಆದರೆ ಬಾದಲ್ ಶರ್ಮಾ ಮತ್ತು ಪರೇಶ್ ಗಡ ಅವರು ಉದ್ಯಮಿಯ ಮನೆಯಿಂದ ಹಣವನ್ನು ಕದಿಯಲು ಯೋಜಿಸಿದ್ದರು. ಮಾಟಮಂತ್ರದ ಹೆಸರಲ್ಲಿ ಬಂದು ಆಕೆಯ ಮನೆ ತಪಾಸಣೆ ಹೆಸರಲ್ಲಿ 35 ಲಕ್ಷ ರೂ. ಎಗರಿಸಿದ್ದಾರೆ. ಮೇಲಾಗಿ 24 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನೂ ನೀಡಿದ್ದಾಳೆ. 35 ಲಕ್ಷ ನಾಪತ್ತೆಯಾಗಿದ್ದನ್ನು ವ್ಯಾಪಾರಿ ಪತ್ತೆ ಮಾಡಿದಾಗ ವಂಚನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Shraddha Walkar Murder Case: ಶ್ರದ್ಧಾ ಮೃತದೇಹ ಇಟ್ಟಿದ್ದ ಫ್ರಿಡ್ಜ್ ಇದುವೇ! ಶವದ ಜೊತೆ ಆಹಾರವನ್ನು ಇಟ್ಟಿದ್ದನಂತೆ ಕ್ರೂರಿ!

ಮಹಿಳೆಯಿಂದ ಅಕ್ರಮವಾಗಿ ಹಣ ಪಡೆದ ಬಾದಲ್ ಶರ್ಮಾ ಮತ್ತು ಪರೇಶ್ ಗಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪಿಒವೈ ಪೊಲೀಸರು ತಿಳಿಸಿದ್ದಾರೆ. ಸದ್ಯ ಇಬ್ಬರು ತಲೆಮರೆಸಿಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More