Home> India
Advertisement

ಭಾರತದ ಅರ್ಧದಷ್ಟು ಜನರು ಹಸಿವಿನಿಂದಿರುವಾಗ 1000 ಕೋಟಿ ರೂ.ಗಳ ಹೊಸ ಸಂಸತ್ತಿನ ಕಟ್ಟಡವಾದರೂ ಏಕೆ?

2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸುವ ಮೊದಲು ಕಮಲ್ ಹಾಸನ್ ಅವರು ಹೊಸ ಸಂಸತ್ತು ನಿರ್ಮಾಣ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಭಾರತದ ಅರ್ಧದಷ್ಟು ಜನರು ಹಸಿವಿನಿಂದಿರುವಾಗ 1000 ಕೋಟಿ ರೂ.ಗಳ ಹೊಸ ಸಂಸತ್ತಿನ ಕಟ್ಟಡವಾದರೂ ಏಕೆ?

ನವದೆಹಲಿ: 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸುವ ಮೊದಲು ಕಮಲ್ ಹಾಸನ್ ಅವರು ಹೊಸ ಸಂಸತ್ತು ನಿರ್ಮಾಣ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

Tamil Nadu Assembly election: ಈ ಬಾರಿಯಾದರೂ 'ಕಮಾಲ್' ಮಾಡುವರೇ ಕಮಲ್

ಭಾನುವಾರದಂದು ಟ್ವೀಟ್ ಮಾಡಿರುವ ಕಮಲ್ ಹಾಸನ್ 'ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವಾಗ, ಕರೋನವೈರಸ್ನಿಂದ ಜೀವನವನ್ನು ಕಳೆದುಕೊಳ್ಳುವಾಗ 1,000 ಕೋಟಿರೂ ವೆಚ್ಚದ ಹೊಸ ಸಂಸತ್ತು ಏಕೆ? ಚೀನಾದ ಮಹಾ ಗೋಡೆಯಾಗಿ ಸಾವಿರಾರು ಜನರು ಸತ್ತಾಗ ನಿರ್ಮಿಸಲಾಗುತ್ತಿದ್ದು, ಜನರನ್ನು ರಕ್ಷಿಸುವುದಾಗಿ ಆಡಳಿತಗಾರರು ಹೇಳಿದರು.ಯಾರನ್ನು ರಕ್ಷಿಸಲು ನೀವು ರೂ .1,000 ಕೋಟಿ ಸಂಸತ್ತನ್ನು ನಿರ್ಮಿಸುತ್ತಿದ್ದೀರಿ? ದಯವಿಟ್ಟು ಗೌರವಾನ್ವಿತ ಪ್ರಧಾನ ಮಂತ್ರಿಗಳೆ ಉತ್ತರಿಸಿ ಎಂದು ಪ್ರಶ್ನಿಸಿದ್ದಾರೆ.

ಬಾಲ್ಕನಿ ಸರ್ಕಾರಕ್ಕೆ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನವಿರಲಿ-ಕಮಲ್ ಹಾಸನ್

ಪ್ರಧಾನಿ ಮೋದಿ ಗುರುವಾರ (ಡಿ.10)ದಂದು ನೂತನ ಸಂಸತ್ ಭವನದ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು.ಈ ಘಟನೆಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದ ಹೆಗ್ಗುರುತು ಎಂದು ಕರೆದರು.2021 ರ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಕಮಲ್ ಹಾಸನ್ ಮಧುರೈನಿಂದ ತಮ್ಮ ಅಭಿಯಾನದ ಮೊದಲ ಹಂತದ ಪ್ರಚಾರವನ್ನು ಮಾಡಲಿದ್ದಾರೆ.

ರಜನಿ ಮತ್ತು ನಾನು ಭಿನ್ನ ರಾಜಕೀಯ ನಿಲುವು ಹೊಂದಿದ್ದರೂ ನಮ್ಮಲ್ಲಿ ಪರಸ್ಪರ ಗೌರವವಿದೆ-ಕಮಲ್ ಹಾಸನ್

ಈ ಹಿಂದೆ ಎಂಎನ್‌ಎಂ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 3.7% ಮತಗಳನ್ನು ಗಳಿಸಿತ್ತು.ತಮ್ಮ ಅಭಿಯಾನದ ಬಗ್ಗೆ ಮಾತನಾಡಿದ ಕಮಲ್ ಹಾಸನ್, "ರಾಜ್ಯದಲ್ಲಿ ಅವನತಿಯ ಬಗ್ಗೆ ಯಾವುದೇ ಸಂದೇಹವಿಲ್ಲ ... ಜನರಿಗೆ ಅದು ಚೆನ್ನಾಗಿ ತಿಳಿದಿದೆ ಮತ್ತು ವಿಷಾದಿಸುವುದರಲ್ಲಿ ಯಾವುದೇ ಅರ್ಥವಿಲ್ಲ 'ಎಂಎನ್‌ಎಂ ಈಗ ಏನು ಮಾಡಬೇಕೆಂಬುದರ ಬಗ್ಗೆ ಮಾತನಾಡಲಿದೆ' ಎಂದು ಕಮಲ್ ಹಸನ್ ಹೇಳಿದರು,

 

Read More