Home> India
Advertisement

ನಾವು ಜಾತಿ ಮತ್ತು ಕೋಮುವಾದ ಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ-ನಿತಿನ್ ಗಡ್ಕರಿ

ಪುಣೆಯ ಪಿಂಪ್ರಿ ಚಿಂಚ್ ವಾಡದಲ್ಲಿನ ಕಾರ್ಯಕ್ರಮದಲ್ಲಿ  ಮಾತನಾಡುತ್ತಾ " ಜಾತಿ ಮತ್ತು ಕೋಮುವಾದ ಮುಕ್ತ ದೇಶ ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾವು ಜಾತಿ ಮತ್ತು ಕೋಮುವಾದ ಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ-ನಿತಿನ್ ಗಡ್ಕರಿ

ನವದೆಹಲಿ: ಪುಣೆಯ ಪಿಂಪ್ರಿ ಚಿಂಚ್ ವಾಡದಲ್ಲಿನ ಕಾರ್ಯಕ್ರಮದಲ್ಲಿ  ಮಾತನಾಡುತ್ತಾ " ಜಾತಿ ಮತ್ತು ಕೋಮುವಾದ ಮುಕ್ತ ದೇಶ ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ನಮಗೆ ಜಾತಿ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ, ನಿಮ್ಮಲ್ಲಿ ಎಷ್ಟು ಜಾತಿಗಳು ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಮ್ಮಲ್ಲಿ ಜಾತಿ ಇಲ್ಲ, ಯಾರು ಜಾತಿ ಬಗ್ಗೆ ಮಾತನಾಡುತ್ತಾರೋ ಅಂತವರನ್ನು ನಾನು ಥಳಿಸುತ್ತೇನೆ" ಎಂದು ಗಡ್ಕರಿ ತಿಳಿಸಿದರು.

ಜಾತಿವಾದ ಮತ್ತು ಕೊಮುವಾದದಿಂದ ಸಮಾಜವನ್ನು ಮುಕ್ತಗೊಳಿಸಬೇಕಾಗಿದೆ. ಸಮಾಜದಲ್ಲಿ ಶ್ರೀಮಂತ ಹಾಗೂ ಬಡವರ ಮಧ್ಯ ಯಾವುದೇ ತಾರತಮ್ಯ ಮಾಡಬಾರದು, ಸಮಾಜದಲ್ಲಿ ಯಾರು ಮೇಲಲ್ಲ ಕೀಳಲ್ಲ ಎಂದು ಗಡ್ಕರಿ ತಿಳಿಸಿದರು.

ಇತ್ತೀಚೆಗೆ ಸಾರಿಗೆ ಇಲಾಖೆಯಲ್ಲಿ ಮಾಡಿದ ಕಾರ್ಯಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ಗಡ್ಕರಿಯವರಿಗೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು.

Read More