Home> India
Advertisement

Amit Shah: 'ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ.40ಕ್ಕಿಂತ ಕಡಿಮೆ ಮಾಡುತ್ತೇವೆ'

ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿ ಪ್ರದೇಶ ಪುದುಚೇರಿ ಪ್ರವಾಸದಲ್ಲಿರುವ ಅಮಿತ್​ ಷಾ

Amit Shah: 'ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ.40ಕ್ಕಿಂತ ಕಡಿಮೆ ಮಾಡುತ್ತೇವೆ'

ಪುದುಚೇರಿ: ಯುವ ಜನಾಂಗವು ಎನ್​ಡಿಎಗೆ ಮತ ಚಲಾಯಿಸಿದರೆ ನಮ್ಮ ಸರ್ಕಾರವು ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್​ ಷಾ ಹೇಳಿದರು.

ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿ ಪ್ರದೇಶ ಪುದುಚೇರಿ ಪ್ರವಾಸದಲ್ಲಿರುವ ಅಮಿತ್​ ಷಾ(Amit Shah) ಅವರು ಇಂದು ಕಾರೈಕಲ್​ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

Milk Price Hike: ಮಾರ್ಚ್ 1 ರಿಂದ ಲೀಟರ್ ಹಾಲಿನ ಬೆಲೆ 100 ರೂ.? ನಿಜಾನಾ ?

ಇದೇ ಹಿಂದಿನ ಕಾಂಗ್ರೆಸ್(Congress)​ ಸರ್ಕಾರದ ವಿರುದ್ಧ ಹರಿಹಾಯ್ದ ಷಾ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಸಣ್ಣತನದ ರಾಜಕೀಯವನ್ನು ಪ್ರದರ್ಶಿಸಿತು ಎಂದು ಕಿಡಿಕಾರಿದರು.

West Bengal Election 2021: ಮೇ 2ರಂದು ಬಂಗಾಳದಲ್ಲಿ 'ದೀದಿ ಗಯೀ, ಬಿಜೆಪಿ ಆಯೀ'

ಮುಂದಿನ ಬಾರಿ ಪುದುಚೇರಿಯಲ್ಲಿ ಎನ್​ಡಿಎ(NDA) ಸರ್ಕಾರ ರಚನೆ ಮಾಡಲಿದೆ. ಕೇವಲ ಪುದುಚೇರಿ ಮಾತ್ರವಲ್ಲ, ಇಡೀ ದೇಶದಲ್ಲಿ ಎನ್​ಡಿಎ ಬರಲಿದೆ. ಅನೇಕ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ. ಏಕೆಂದರೆ ಅರ್ಹತೆಗೆ ಕಾಂಗ್ರೆಸ್​ನಲ್ಲಿ ಬೆಲೆ ಇಲ್ಲ ಎಂದರು.

Jobs : ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ, ವರ್ಷಕ್ಕೆ ಸಿಟಿಸಿ 6.1 ಲಕ್ಷ

ಕೇವಲ 30 ವಿಧಾನಸಭೆ ಸ್ಥಾನಗಳನ್ನು ಪುದುಚೇರಿ(Puducherry) ಹೊಂದಿದೆ. ಏಪ್ರಿಲ್​ನಲ್ಲಿ ಕೇವಲ ಒಂದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಕೆಲವು ದಿನಗಳ ಹಿಂದಷ್ಟೇ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಹುಮತ ಕೊರತೆಯಿಂದ ಕುಸಿಯಿತು. ಸದ್ಯ ಪುದುಚೇರಿ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ.

PSLV-C51/Amazonia-1 Launch: ಬಾಹ್ಯಾಕಾಶದಲ್ಲಿ ಗೀತಾ ಸಂದೇಶದ ಪ್ರತಿಧ್ವನಿ, ಇಂದು ISRO ನಿಂದ PSLV-C51/Amazonia-1 ಉಡಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More