Home> India
Advertisement

"ಗೋಡ್ಸೆಯನ್ನು ಹೊಗಳುವವರು ರಾಷ್ಟ್ರವನ್ನು ಅವಮಾನಿಸುತ್ತಿದ್ದಾರೆ"- ಬಿಜೆಪಿ ಸಂಸದ ವರುಣ್ ಗಾಂಧಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ನ ಜನ್ಮ ದಿನಾಚರಣೆಯಂದು ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದರು.

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ನ ಜನ್ಮ ದಿನಾಚರಣೆಯಂದು ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದರು.

ಭಾರತವು ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ, ಆದರೆ ಮಹಾತ್ಮರು ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಆಧಾರಗಳನ್ನು ತಮ್ಮ ಅಸ್ತಿತ್ವದ ಮೂಲಕ ಸ್ಪಷ್ಟಪಡಿಸಿದರು ಮತ್ತು ನಮಗೆ ನೈತಿಕ ಅಧಿಕಾರವನ್ನು ನೀಡಿದರು ಮತ್ತು ಇಂದಿಗೂ ನಮ್ಮ ದೊಡ್ಡ ಶಕ್ತಿಯಾಗಿ ಉಳಿದಿದ್ದಾರೆ.ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡಿದವರು ಬೇಜವಾಬ್ದಾರಿಯಿಂದ ರಾಷ್ಟ್ರವನ್ನು ಅವಮಾನ ಮಾಡುತ್ತಿದ್ದಾರೆ'ಎಂದು ವರುಣ್ ಗಾಂಧಿ (Varun Gandhi) ಟೀಕಾಪ್ರಹಾರ ನಡೆಸಿದರು.

ಇದನ್ನೂ ಓದಿ: VIDEO: ನನ್ನ ಚಹಾಗೆ ಮುಸಲ್ಮಾನರ ಸಕ್ಕರೆಯೂ ಸಿಗಬಹುದೇ?- ವರುಣ್ ಗಾಂಧಿ ವಿವಾದಿತ ಹೇಳಿಕೆ

ಭಾರತವು ಅಂತಾರಾಷ್ಟ್ರೀಯವಾಗಿ ಹೊಂದಿರುವ ಗೌರವವನ್ನು ಮಹಾತ್ಮಾ ಗಾಂಧಿ ಮತ್ತು ಅವರು ಪ್ರತಿನಿಧಿಸಿದ ಆದರ್ಶಗಳಿಂದ ನಾವು ಮರೆಯಬಾರದು."ಗೋಡ್ಸೆ ಜಿಂದಾಬಾದ್ "ಎಂದು ಟ್ವೀಟ್ ಮಾಡುತ್ತಿರುವ ಜನರನ್ನು ಸಾರ್ವಜನಿಕವಾಗಿ ನಾಚಿಸಬೇಕು' ಎಂದು ಅವರು ಹೇಳಿದರು.

'ನಾಥೂರಾಮ್ ಗೋಡ್ಸೆ ಜಿಂದಾಬಾದ್"ಎನ್ನುವ ಘೋಷಣೆ ಮಹಾತ್ಮಾ ಗಾಂಧೀಜಿ ಅವರ ಜಯಂತಿ ದಿನದಂದು ಟ್ರೆಂಡ್ ಆದ ಹಿನ್ನಲೆಯಲ್ಲಿ ಅವರ ಹೇಳಿಕೆ ಬಂದಿದೆ.

ಇದನ್ನೂ ಓದಿ : Amazon ನಲ್ಲಿ ಆಫರ್ ಗಳ ಸುರಿಮಳೆ, ಸ್ಯಾಮ್ ಸಂಗ್ ನ ಈ ಫೋನ್ ಮೇಲೆ ಸಿಗಲಿದೆ 30 ಸಾವಿರಕ್ಕಿಂತ ಅಧಿಕ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More