Home> India
Advertisement

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗಳಿಗೆ ನಿರ್ಬಂಧಗಳಿಲ್ಲ- ಸುಪ್ರೀಂಕೋರ್ಟ್

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗಳಿಗೆ ನಿರ್ಬಂಧಗಳಿಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಮತದಾನದ ನಂತರದ ಮೈತ್ರಿಯನ್ನು ಪ್ರಶ್ನಿಸಿದ ಹಿಂದೂ ಮಹಾಸಭಾ ಮುಖಂಡರ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗಳಿಗೆ ನಿರ್ಬಂಧಗಳಿಲ್ಲ- ಸುಪ್ರೀಂಕೋರ್ಟ್

ನವದೆಹಲಿ: ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗಳಿಗೆ ನಿರ್ಬಂಧಗಳಿಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಮತದಾನದ ನಂತರದ ಮೈತ್ರಿಯನ್ನು ಪ್ರಶ್ನಿಸಿದ ಹಿಂದೂ ಮಹಾಸಭಾ ಮುಖಂಡರ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರ ನ್ಯಾಯಪೀಠವು ಪ್ರಮೋದ್ ಪಂಡಿತ್ ಜೋಶಿ ಸಲ್ಲಿಸಿದ್ದ ಅರ್ಜಿಗೆ ಒಲವು ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಪೂರ್ವ-ಮತದಾನ, ನಂತರದ ಮತದಾನದ ವಿಚಾರದಲ್ಲಿ  ನಾವು ಯಾಕೆ ಪ್ರವೇಶಿಸಬೇಕು" ಎಂದು ನ್ಯಾಯಮೂರ್ತಿ ಭೂಷಣ್  ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿದಾರರು ಮತದಾನ ಪೂರ್ವ ಬಿಜೆಪಿ-ಶಿವಸೇನೆ ಒಕ್ಕೂಟ ಮಂಡಿಸಿದ ಪ್ರಣಾಳಿಕೆಯ ಆಧಾರದ ಮೇಲೆ ರಾಜ್ಯದ ಜನರು ಮತ ಚಲಾಯಿಸಿದ್ದಾರೆ ಎಂದು ವಾದಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವದನ್ನು ಕಾರ್ಯಗತಗೊಳಿಸಲು ರಾಜಕೀಯ ಪಕ್ಷಗಳಿಗೆ ನ್ಯಾಯಾಲಯವು ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

'ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಬಹಳಷ್ಟು ವಿಷಯಗಳನ್ನು ಹೇಳುತ್ತವೆ. ಪ್ರಣಾಳಿಕೆಯಲ್ಲಿ ಅವರು ಹೇಳಿದ್ದನ್ನು ಕಾರ್ಯಗತಗೊಳಿಸಲು ನಾವು (ನ್ಯಾಯಾಲಯ) ನಿರ್ದೇಶನ ನೀಡಬಹುದೇ? ನಿಮ್ಮ ವಾದವನ್ನು ಒಪ್ಪಿಕೊಂಡರೆ, ಪ್ರಜಾಪ್ರಭುತ್ವದ ಅಗತ್ಯವಿಲ್ಲ. ಸಾಂವಿಧಾನಿಕ ನೈತಿಕತೆಯು ರಾಜಕೀಯ ನೈತಿಕತೆಗಿಂತ ಭಿನ್ನವಾಗಿದೆ ”ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು, ಜನರು ತೀರ್ಪು ನೀಡುವುದು ನ್ಯಾಯಾಲಯಗಳಲ್ಲ ಎಂದು ಹೇಳಿತು. ತನ್ನ ಅಧಿಕಾರ ವ್ಯಾಪ್ತಿಯಿಂದ ಹೊರಗಿರುವ ಸಮಸ್ಯೆಗಳನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಗಮನಿಸಿದ ಅರ್ಜಿಯನ್ನು ಸುಪ್ರೀಂ ನ್ಯಾಯಪೀಠ ವಜಾಗೊಳಿಸಿತು.
 

Read More