Home> India
Advertisement

ಚೀನಾದೊಂದಿಗೆ ಜಗತ್ತು ವ್ಯವಹಾರ ಮಾಡದೇ ಇರುವುದು ಭಾರತಕ್ಕೆ ಲಾಭವಾಗಲಿದೆ-ನಿತಿನ್ ಗಡ್ಕರಿ

ಜಗತ್ತು ಚೀನಾದೊಂದಿಗೆ ವ್ಯವಹಾರ ಮಾಡಲು ಬಯಸುವುದಿಲ್ಲ ಮತ್ತು ಇದು ಭಾರತಕ್ಕೆ ಅನುಕೂಲವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ಚೀನಾದೊಂದಿಗೆ ಜಗತ್ತು ವ್ಯವಹಾರ ಮಾಡದೇ ಇರುವುದು ಭಾರತಕ್ಕೆ ಲಾಭವಾಗಲಿದೆ-ನಿತಿನ್ ಗಡ್ಕರಿ

ನವದೆಹಲಿ: ಜಗತ್ತು ಚೀನಾದೊಂದಿಗೆ ವ್ಯವಹಾರ ಮಾಡಲು ಬಯಸುವುದಿಲ್ಲ ಮತ್ತು ಇದು ಭಾರತಕ್ಕೆ ಅನುಕೂಲವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ನಷ್ಟ ಅನುಭವಿಸುತ್ತಿರುವ ಎಂಎಸ್‌ಎಂಇಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು) ಬೆಂಬಲಿಸುವ ಸರ್ಕಾರದ ಯೋಜನೆಗಳ ಕುರಿತು ವ್ಯಾಪಕ ಚರ್ಚೆಯ ಸಂದರ್ಭದಲ್ಲಿ ಕರೋನವೈರಸ್ ಮತ್ತು ಲಾಕ್ ಡೌನ್ ಮುಗಿದ ನಂತರ ರಾಷ್ಟ್ರೀಯ ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತಾಗಿ ಅವರು ಮಾತನಾಡಿದರು.'ಪ್ರಪಂಚದಾದ್ಯಂತ ಪ್ರತಿ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.ಆದರೆ ವಿಶ್ವದ ಪ್ರತಿಯೊಂದು ದೇಶವೂ ಇದೀಗ ಚೀನಾದೊಂದಿಗೆ ವ್ಯಾಪಾರ ಮಾಡಲು ಬಯಸುವುದಿಲ್ಲ, ಇದು ನಮಗೆ ಆಶೀರ್ವಾದವಾಗಿದೆ. ಇದು ಇದು ನಮಗೆ ಒಂದು ಅವಕಾಶ 'ಎಂದು ತಿಳಿಸಿದರು.

2025 ರ ವೇಳೆಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಸರ್ಕಾರಕ್ಕೆ ಇದೊಂದು ಅವಕಾಶ ಎಂದು ಗಡ್ಕರಿ ಸೂಚಿಸಿದರು."(ನಾವು) ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಈಡೇರಿಸಲು ಹೊಸ ತಂತ್ರಜ್ಞಾನವನ್ನು ಹೂಡಿಕೆಗಳಾಗಿ ಪರಿವರ್ತಿಸಲು ಜಂಟಿ ಕಾರ್ಯದರ್ಶಿಯನ್ನು ನಿಯೋಜಿಸುತ್ತೇವೆ" ಎಂದು ಅವರು ಹೇಳಿದರು.

12 ತಿಂಗಳ ಹಿಂದೆ ಇದೇ ಅವಧಿಗೆ ಹೋಲಿಸಿದರೆ ಜನವರಿ-ಮಾರ್ಚ್‌ನಲ್ಲಿ ಜಿಡಿಪಿ ಶೇಕಡಾ 6.8 ರಷ್ಟು ಕುಗ್ಗಿದೆ - ಇದು ಮಾರ್ಚ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಕುಸಿತ ಮತ್ತು ಚಿಲ್ಲರೆ ಮಾರಾಟದಲ್ಲಿ ಸುಮಾರು 16 ಶೇಕಡಾ ಕುಸಿತದಿಂದ ಸೂಚಿಸಲ್ಪಟ್ಟಿದೆ.COVID-19 ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ 28.25 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಸುಮಾರು ಎರಡು ಲಕ್ಷ ಜನರ ಸಾವಿಗೆ ಕಾರಣವಾಗಿದೆ. ಭಾರತದಲ್ಲಿ, ಮಾರ್ಚ್ ಅಂತ್ಯದ ನಂತರದ ಪ್ರಕರಣಗಳಲ್ಲಿ ಕಡಿಮೆ ದೈನಂದಿನ ಬೆಳವಣಿಗೆಯ ದರವನ್ನು ಸರ್ಕಾರ ಇಂದು ಹೇಳಿಕೊಂಡಿದೆ, ಸುಮಾರು 24,000 ಪ್ರಕರಣಗಳು ಮತ್ತು 779 ಸಾವುಗಳು ವರದಿಯಾಗಿವೆ.

Read More