Home> India
Advertisement

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ

ವ್ಯಕ್ತಿಯೊಬ್ಬನನ್ನು  ಭಯೋತ್ಪಾದಕ ಎಂದು ಕರೆಯಲು ಮತ್ತು ಅವನ ಆಸ್ತಿ ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಭಯೋತ್ಪಾದನಾ ವಿರೋಧಿ ಕಾನೂನಿನ ತಿದ್ದುಪಡಿಗೆ ಸಂಸತ್ತು ಶುಕ್ರವಾರದಂದು ಅಂಗೀಕರಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ

ನವದೆಹಲಿ: ವ್ಯಕ್ತಿಯೊಬ್ಬನನ್ನು  ಭಯೋತ್ಪಾದಕ ಎಂದು ಕರೆಯಲು ಮತ್ತು ಅವನ ಆಸ್ತಿ ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಭಯೋತ್ಪಾದನಾ ವಿರೋಧಿ ಕಾನೂನಿನ ತಿದ್ದುಪಡಿಗೆ ಸಂಸತ್ತು ಶುಕ್ರವಾರದಂದು ಅಂಗೀಕರಿಸಿದೆ.

ಜುಲೈ 24 ರಂದು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ನ್ನು ತಿದ್ದುಪಡಿ ಮಾಡಲು ಯತ್ನಿಸುವ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019 ನ್ನು ಲೋಕಸಭೆ ಅಂಗೀಕರಿಸಿದ್ದರೆ, ರಾಜ್ಯಸಭೆಯು ಶುಕ್ರವಾರದಂದು ಧ್ವನಿ ಮತದ ಮೂಲಕ ಅದನ್ನು ಅಂಗೀಕರಿಸಿತು. 

ತಿದ್ದುಪಡಿಯ ಕುರಿತ ಚರ್ಚೆ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ತಿದ್ದುಪಡಿಯಲ್ಲಿ ನಾಲ್ಕು ಹಂತದ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುವುದಿಲ್ಲ ಎಂದು ಹೇಳಿದರು. ಒಂದು ಸಂಸ್ಥೆಯನ್ನು ನಿಷೇಧಿಸಿದ ನಂತರ ಅವರು ಹಲವಾರು ಸಂಘಟನೆಗಳಲ್ಲಿ ಸೇರುತ್ತಿರುವ ಕಾರಣ ಅಂತಹ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸುವ ಅಗತ್ಯವಿದೆ ಎಂದು ಅವರು ಹೇಳಿದರು.   

ಭಯೋತ್ಪಾದನೆ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಅಥವಾ ಭಾಗವಹಿಸಿದರೆ, ಭಯೋತ್ಪಾದನೆಗೆ ಉತ್ತೇಜಿಸಿದರೆ  ಅಂತಹ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಬಹುದು ಎಂದು ಅವರು ಹೇಳಿದರು. ಈ ತಿದ್ದುಪಡಿಯು ಭಯೋತ್ಪಾದಕ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಿದೆ ಎಂದರು. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ಭಯೋತ್ಪಾದಕರು ಮಾನವೀಯತೆಗೆ ವಿರುದ್ಧವಾಗಿದ್ದಾರೆ, ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನುಗಳನ್ನು ಬೆಂಬಲಿಸಲು ಎಲ್ಲಾ ಪಕ್ಷಗಳ ಬೆಂಬಲವನ್ನು ಕೋರಿದ್ದಾರೆ ಎಂದು ಅವರು ಹೇಳಿದರು. 

ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಪ್ರತಿಪಕ್ಷದ ಕಳವಳಗಳಿಗೆ ಪ್ರತಿಕ್ರಿಯಿಸಿದ ಅವರು, ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದಾಗ ಮೇಲ್ಮನವಿ ಸಲ್ಲಿಸುವ ನಿಬಂಧನೆಯೊಂದಿಗೆ ನಾಲ್ಕು ಹಂತದ ಪರಿಶೀಲನೆ ಇರುವುದರಿಂದ ಯಾರೊಬ್ಬರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುವುದಿಲ್ಲ ಎಂದು ಹೇಳಿದರು.ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ದಾಖಲೆಯ ಬಗ್ಗೆ ವಿವರಿಸಿದ ಅವರು, ಏಜೆನ್ಸಿಯಿಂದ ನೋಂದಾಯಿಸಲ್ಪಟ್ಟ 278 ಭಯೋತ್ಪಾದಕ ಪ್ರಕರಣಗಳಲ್ಲಿ 204 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ತೀರ್ಪುಗಳು ಬಂದ 54 ಪ್ರಕರಣಗಳಲ್ಲಿ, 48 ರಲ್ಲಿ ಅಪರಾಧ ಸಾಬೀತಾಗಿದೆ ಎಂದು ತಿಳಿಸಿದರು.

Read More