Home> India
Advertisement

ವಕೀಲ ಹರೀಶ್ ಸಾಳ್ವೆಗೆ 1 ರೂಪಾಯಿ ನೀಡಿ ಸುಷ್ಮಾ ಸ್ವರಾಜ್ ಆಸೆ ಪೂರೈಸಿದ ಪುತ್ರಿ...!

 ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ಕೊನೆಯುಸಿರೆಳೆಯುವ ಮುನ್ನ ಹಿರಿಯ ವಕೀಲ ಹರೀಶ್ ಸಾಳ್ವೆ ಅವರೊಂದಿಗೆ ಕೊನೆಯ ಸಂಭಾಷಣೆ ನಡೆಸಿದ್ದರು. ಕುಲಭೂಷಣ ಯಾದವ್ ಪ್ರಕರಣದಲ್ಲಿ ಹರೀಶ್ ಸಾಳ್ವೆ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಅವರಿಗೆ ಬಂದು 1 ರೂಪಾಯಿ ಶುಲ್ಕವನ್ನು ಸಂಗ್ರಹಿಸಲು ಕೇಳಿಕೊಂಡಿದ್ದರು.

ವಕೀಲ ಹರೀಶ್ ಸಾಳ್ವೆಗೆ 1 ರೂಪಾಯಿ ನೀಡಿ ಸುಷ್ಮಾ ಸ್ವರಾಜ್ ಆಸೆ ಪೂರೈಸಿದ ಪುತ್ರಿ...!

ನವದೆಹಲಿ: ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ಕೊನೆಯುಸಿರೆಳೆಯುವ ಮುನ್ನ ಹಿರಿಯ ವಕೀಲ ಹರೀಶ್ ಸಾಳ್ವೆ ಅವರೊಂದಿಗೆ ಕೊನೆಯ ಸಂಭಾಷಣೆ ನಡೆಸಿದ್ದರು. ಕುಲಭೂಷಣ ಯಾದವ್ ಪ್ರಕರಣದಲ್ಲಿ ಹರೀಶ್ ಸಾಳ್ವೆ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಅವರಿಗೆ ಬಂದು 1 ರೂಪಾಯಿ ಶುಲ್ಕವನ್ನು ಸಂಗ್ರಹಿಸಲು ಕೇಳಿಕೊಂಡಿದ್ದರು.

ಆದರೆ ಸುಷ್ಮಾ ಸ್ವರಾಜ್ ಅವರು ನಿಧನರಾದ ಹಿನ್ನಲೆಯಲ್ಲಿ ಅವರ ಆಸೆಯನ್ನು ಈಗ ಅವರ ಪುತ್ರಿ ಪೂರೈಸಿದ್ದಾರೆ. ಈಗ ಮಿಜೋರಾಂ ನ ಮಾಜಿ ರಾಜ್ಯಪಾಲ ಮತ್ತು ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಾಲ್ ಅವರು ಟ್ವೀಟ್ ಮಾಡಿ ತಮ್ಮ ಪುತ್ರಿ ವಕೀಲ ಹರೀಶ್ ಸಾಳ್ವೆಯವರಿಗೆ ಒಂದು ರೂಪಾಯಿ ನೀಡುತ್ತಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.  

'ಅವಳು ತುಂಬಾ ಹರ್ಷಚಿತ್ತದಿಂದ ಧ್ವನಿಸುತ್ತಿದ್ದರು ಮತ್ತು ತುಂಬಾ ಸಂತೋಷಗೊಂಡಿದ್ದರು. ಈ ಭೇಟಿಯಲ್ಲಿ ನಾನು ಯಾಕೆ ಬಂದು ಅವರನ್ನು ಭೇಟಿ ಮಾಡಿಲ್ಲ ಎಂದು ಅವರು ನನ್ನನ್ನು ಕೇಳುತ್ತಿದ್ದರು. ನಾನು ಇಂದು ಬಂದು ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದೆ. ನಾನು ನಿಮ್ಮ ಶುಲ್ಕವನ್ನು ಪಾವತಿಸಬೇಕಾಗಿರುವುದರಿಂದ ನೀವು ಬರಬೇಕು ಎಂದು  ಹೇಳಿದರು. ಒಂದು ರೂಪಾಯಿಯನ್ನು ಸಹ ಪಾವತಿಸಲಾಗಿಲ್ಲ ಎಂದು ನೀವು ಎಲ್ಲೋ ಕಾಮೆಂಟ್ ಮಾಡಿದ್ದೀರಿ, ಹಾಗಾಗಿ ಜಾಧವ್ ಪ್ರಕರಣಕ್ಕೆ ನಾನು ಆ ಒಂದು ರೂಪಾಯಿಯನ್ನು ನೀಡಬೇಕಾಗಿದೆ 'ಎಂದು ಹರೀಶ್ ಸಾಳ್ವೆ ಸುಷ್ಮಾ ಸ್ವರಾಜ್ ಅವರೊಂದಿಗಿನ ಕೊನೆಯ ಮಾತುಕತೆಯನ್ನು ಸ್ಮರಿಸಿದರು.

Read More