Home> India
Advertisement

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜೂನ್ 16ಕ್ಕೆ ಅಯೋಧ್ಯೆಗೆ ಭೇಟಿ

ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ ನಮನ ಸಲ್ಲಿಸಲಿರುವ ಠಾಕ್ರೆ, ಬಳಿಕ ಶ್ರೀರಾಮನ ದರ್ಶನ ಪಡೆಯಲಿದ್ದಾರೆ.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜೂನ್ 16ಕ್ಕೆ ಅಯೋಧ್ಯೆಗೆ ಭೇಟಿ

ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಪಕ್ಷದ ಸಂಸದರೊಂದಿಗೆ ಜೂನ್ 16 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. 

ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ ನಮನ ಸಲ್ಲಿಸಲಿರುವ ಠಾಕ್ರೆ, ಬಳಿಕ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಶಿವಸೇನೆ ಸಂಸದರು ಸಾಥ್ ನೀಡಲಿದ್ದಾರೆ ಎಂದು ಶಿವಸೇನಾ ಟ್ವೀಟ್ ಮಾಡಿದೆ. 

ಕೆಲ ದಿನಗಳ ಹಿಂದೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದರು. ಆದರೆ ದಿನಾಂಕದ ಅಧಿಕೃತ ಮಾಹಿತಿ ನೀಡಿರಲಿಲ್ಲ. 2018ರ ನವೆಂಬರ್ ನಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ಠಾಕ್ರೆ, ರಾಮಮಂದಿರ ನಿರ್ಮಾಣ ದಿನಾಂಕವನ್ನು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು. 

Read More