Home> India
Advertisement

ಸಿಎಂ ವಸುಂಧರಾ ರಾಜೆ ಕ್ಷಮೆ ಯಾಚಿಸಿದ ಶರದ್ ಯಾದವ್

ಜೆಡಿಯುನ ಮಾಜಿ ನಾಯಕ ಶರದ್ ಯಾದವ್ ವಸುಂಧರಾ ರಾಜೆ ವಿರುದ್ಧ ನೀಡಿರುವ ಹೇಳಿಕೆ ವಿಚಾರವಾಗಿ ಈಗ ಕ್ಷಮೆ ಕೋರಿದ್ದಾರೆ.

 ಸಿಎಂ ವಸುಂಧರಾ ರಾಜೆ ಕ್ಷಮೆ ಯಾಚಿಸಿದ ಶರದ್ ಯಾದವ್

ನವದೆಹಲಿ: ಜೆಡಿಯುನ ಮಾಜಿ ನಾಯಕ ಶರದ್ ಯಾದವ್ ವಸುಂಧರಾ ರಾಜೆ ವಿರುದ್ಧ ನೀಡಿರುವ ಹೇಳಿಕೆ ವಿಚಾರವಾಗಿ ಈಗ ಕ್ಷಮೆ ಕೋರಿದ್ದಾರೆ.

ಈ ತಮ್ಮ ಹೇಳಿಕೆಗೆ ಬಂದಿರುವ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಶರದ್ ಯಾದವ್ "ನಾನು ಅವರ ಹೇಳಿಕೆಯನ್ನು ಗಮನಿಸಿದ್ದೇನೆ,ಅವರ ಕುಟುಂಬದೊಂದಿಗೆ ನಾನು ಹಳೆಯ ಸಂಬಂಧವನ್ನು ಹೊಂದಿದ್ದೇನೆ.ಒಂದು ವೇಳೆ ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ನಾನು ಕ್ಷಮಿಸುತ್ತೇನೆ ಮತ್ತು ಈ ವಿಚಾರವಾಗಿ ನಾನು ಅವರಿಗೆ ಪತ್ರವನ್ನು ಬರೆಯುತ್ತೇನೆ ಎಂದು ಹೇಳಿರುವುದನ್ನು ಎಎನ್ಐ ಉಲ್ಲೇಖಿಸಿದೆ.

ಶರದ್ ಯಾದವ್ ಅವರು ಸಿಎಂ ರಾಜೆ ವಿರುದ್ದವಾಗಿ ಮಾತನಾಡುತ್ತಾ " ವಸುಂಧರಾ ರಾಜೆ ಆಯಾಸಗೊಂಡಿದ್ದಾರೆ ಮತ್ತು ಬಹಳ ದಪ್ಪವಾಗಿದ್ದಾರೆ.ಈ ಹಿಂದೆ ಅವರು ತೆಳ್ಳಗಿದ್ದರು ಅವರು ಮಧ್ಯಪ್ರದೇಶದ ಮಗಳು ಅವರಿಗೆ ವಿಶ್ರಾಂತಿ ನೀಡಿ" ಎಂದು ಹೇಳಿಕೆ ನೀಡಿದ್ದರು ಆದರೆ  ಅವರ ಈ ಹೇಳಿಕೆ ಕುರಿತಾಗಿ ಬಹಳ ವಿರೋಧ ವ್ಯಕ್ತವಾಗಿತ್ತು.ಸಿಪಿಎಂನ ಬೃಂದಾ ಕಾರಟ್ ಕೂಡ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು.ಈಗ ಇದನ್ನು ಗಮನಿಸಿರುವ ಶರದ್ ಯಾದವ್ ಅವರು ಕ್ಷಮೆಯಾಚಿಸಿದ್ದಾರೆ.

 

Read More