Home> India
Advertisement

'ಭಾರತದ ಜೊತೆಗಿನ ಗಂಭೀರ ಸಂಘರ್ಷ ಚೀನಾ ಹಿತದೃಷ್ಟಿಯಿಂದ ಒಳ್ಳೆಯದಲ್ಲ'

ಭಾರತದೊಂದಿಗಿನ ಗಂಭೀರ ಸಶಸ್ತ್ರ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಚೀನಾದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಮಂಗಳವಾರ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

'ಭಾರತದ ಜೊತೆಗಿನ ಗಂಭೀರ ಸಂಘರ್ಷ ಚೀನಾ ಹಿತದೃಷ್ಟಿಯಿಂದ ಒಳ್ಳೆಯದಲ್ಲ'

ನವದೆಹಲಿ: ಭಾರತದೊಂದಿಗಿನ ಗಂಭೀರ ಸಶಸ್ತ್ರ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಚೀನಾದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಮಂಗಳವಾರ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

"ಜಾಗತಿಕ ಭೌಗೋಳಿಕ ರಾಜಕೀಯದ ಅನಿಶ್ಚಿತತೆ ಮತ್ತು ಅಸ್ಥಿರತೆ ಮತ್ತು ಜಾಗತಿಕ ಭದ್ರತೆಗೆ ಪ್ರಮುಖ ಶಕ್ತಿಗಳ ಅಸಮರ್ಪಕತೆಯೂ ಚೀನಾ (China) ಕ್ಕೆ ತನ್ನ ಶಕ್ತಿಯನ್ನು ಪ್ರದರ್ಶಿಸುವ ಅವಕಾಶವನ್ನು ಒದಗಿಸಿದೆ' ಎಂದು ಹೇಳಿದರು.

ಇದನ್ನೂ ಓದಿ: China ದೇಶಕ್ಕೆ ತಕ್ಕ ಪಾಠ ಕಲಿಸಲು ಭಾರತದ ಬಿಗ್ ಪ್ಲಾನ್

"ಯುದ್ಧದಂತಹ ಸನ್ನಿವೇಶಗಳಿಗೆ ತರಬೇತಿಯಿಂದ ಹಿಡಿದು ಹೊಸ ರಚನೆ ಮತ್ತು ತಂತ್ರಜ್ಞಾನದೊಂದಿಗೆ ಸಹಕರಿಸುವುದು ಅಥವಾ ಮಿಲಿಟರಿ ಪ್ರಾಬಲ್ಯದ ದುಷ್ಕೃತ್ಯವರೆಗೂ ಚೀನಾದ ಕ್ರಮಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಏರ್ ಚೀಫ್ ಮಾರ್ಷಲ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದೊಂದಿಗೆ 70 ವರ್ಷಗಳ ದ್ವೀಪಕ್ಷೀಯ ಸಂಬಂಧ: ಅಂಚೆ ಚೀಟಿ ರದ್ದುಗೊಳಿಸಿದ ಚೀನಾ

"ಜಾಗತಿಕ ಮಟ್ಟದಲ್ಲಿ ಯಾವುದೇ ಗಂಭೀರ ಸಂಘರ್ಷ ಚೀನಾಕ್ಕೆ ಒಳ್ಳೆಯದಲ್ಲ. ಚೀನಾದ ಆಕಾಂಕ್ಷೆಗಳು ಜಾಗತಿಕವಾಗಿದ್ದರೆ ಅದು (ಗಡಿ ನಿಲುವು) ಅವರ ಭವ್ಯ ಯೋಜನೆಗೆ ಸರಿಹೊಂದುವುದಿಲ್ಲ.ಆದ್ದರಿಂದ, ಅವರ ಕಾರ್ಯಕ್ಕೆ ಸಂಭವನೀಯ ಉದ್ದೇಶಗಳು ಯಾವುವು? ಎಂದು ಏರ್ ಚೀಫ್ ಮಾರ್ಷಲ್ ಪ್ರಶ್ನಿಸಿದರು.

Read More