Home> India
Advertisement

ಶಬರಿಮಲೆ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆಂಬಲಿಸಿ ನಂತರ 'ಎಚ್ಚರಿಕೆ' ನೀಡಿದ ರಜನಿಕಾಂತ್

ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅನುಮತಿ ನೀಡಬೇಕೆಂದು ಹೇಳಿರುವ ಸುಪ್ರಿಂಕೋರ್ಟ್ ನಿರ್ಧಾರವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲಿಸಿದ್ದಾರೆ. 

ಶಬರಿಮಲೆ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆಂಬಲಿಸಿ ನಂತರ 'ಎಚ್ಚರಿಕೆ' ನೀಡಿದ ರಜನಿಕಾಂತ್

ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅನುಮತಿ ನೀಡಬೇಕೆಂದು ಹೇಳಿರುವ ಸುಪ್ರಿಂಕೋರ್ಟ್ ನಿರ್ಧಾರವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲಿಸಿದ್ದಾರೆ. 

ಆದರೆ ಧರ್ಮ ಮತ್ತು ಸಂಪ್ರದಾಯಗಳ ವಿಷಯ ಬಂದಾಗ ಹಸ್ತಕ್ಷೇಪದ ವಿಚಾರವಾಗಿ ಎಚ್ಚರಿಕೆ ವಹಿಸಬೇಕೆಂದು ರಜನಿಕಾಂತ್ ತಿಳಿಸಿದ್ದಾರೆ. ಸುಪ್ರಿಂಕೋರ್ಟ್ ತೀರ್ಪಿನ ನಂತರ ಇದೆ ಮೊದಲ ಬಾರಿಗೆ ಈ ವಿಚಾರವಾಗಿ ಮಾತನಾಡಿದ ಅವರು "ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯು ಸಮಾನ ಹಕ್ಕುಗಳನ್ನು ಹೊಂದಿರಬೇಕು, ಅದರ ಬಗ್ಗೆ ಯಾವುದೇ ಸಂದೇಹವೂ ಇಲ್ಲ, ಜನರು ಸಹಿತ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಬೇಕು, ಆದರೆ ಸಾಂಪ್ರದಾಯಿಕ ವಿಷಯಗಳನ್ನು ನಿರ್ವಹಿಸುವಾಗಿ ಸ್ವಲ್ಪ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಕೇರಳ ಸರ್ಕಾರವು ಉನ್ನತ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲಿದೆ ಎಂದು ಹೇಳಿದ ನಂತರ  ದೇವಸ್ತಾನವನ್ನು ಪ್ರವೇಶಿಸುವ ವಿಚಾರವಾಗಿ ಪರ ಮತ್ತು ವಿರೋಧದ ಪ್ರತಿಭಟನೆಗಳು ರಾಜ್ಯಾದ್ಯಂತ ಮುಂದುವರೆದಿವೆ.

Read More