ಮುಂಬೈ: Power Crisis: ಕಲ್ಲಿದ್ದಲು ಬಿಕ್ಕಟ್ಟಿನಿಂದಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (MSEDCL) ಗೆ ವಿದ್ಯುತ್ ಪೂರೈಸುವ ಒಟ್ಟು 13 ಘಟಕಗಳ ವಿದ್ಯುತ್ ಸ್ಥಾವರಗಳನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ 3330 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಡಿಮೆ ವಿದ್ಯುತ್ ಬಳಸುವಂತೆ ಗ್ರಾಹಕರಿಗೆ ಮನವಿ ಮಾಡಲಾಗುತ್ತಿದೆ.
ಕಡಿಮೆ ವಿದ್ಯುತ್ ಬಳಸಲು ಮನವಿ:
ಇದನ್ನೂ ಓದಿ- ರಾಜಸ್ಥಾನದಲ್ಲಿನ ದಲಿತ ವ್ಯಕ್ತಿ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಮೌನ ತಾಳಿರುವುದೇಕೆ?-ಮಾಯಾವತಿ
ಪ್ರತಿ ಯೂನಿಟ್ ಗೆ 13.60 ರೂ.ನಂತೆ ವಿದ್ಯುತ್ ಖರೀದಿಸಲಾಗಿದೆ:
ಪ್ರಸ್ತುತ, ವಿದ್ಯುತ್ (Power) ಬೇಡಿಕೆ ಮತ್ತು ಪೂರೈಕೆ ನಡುವೆ 3330 ಮೆಗಾವ್ಯಾಟ್ ಅಂತರವನ್ನು ತುಂಬಲು ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವ ಕಾರಣ, ವಿದ್ಯುತ್ ಖರೀದಿ ಬೆಲೆಯೂ ದುಬಾರಿಯಾಗುತ್ತಿದೆ. 700 MW ವಿದ್ಯುತ್ ಅನ್ನು ಪ್ರತಿ ಮಾರುಕಟ್ಟೆಗೆ 13.60 ರೂ. ದರದಲ್ಲಿ ಮುಕ್ತ ಮಾರುಕಟ್ಟೆಯಿಂದ ಖರೀದಿಸಲಾಗುತ್ತಿದೆ. ಭಾನುವಾರ ಬೆಳಿಗ್ಗೆ, 900 MW ವಿದ್ಯುತ್ ಅನ್ನು ರಿಯಲ್ ಟೈಮ್ ವಹಿವಾಟುಗಳ ಮೂಲಕ ಪ್ರತಿ ಯೂನಿಟ್ಗೆ 6.23 ರೂ. ದರದಲ್ಲಿ ಖರೀದಿಸಲಾಗಿದೆ. ಇದರ ಜೊತೆಗೆ, ಕೊಯ್ನಾ ಅಣೆಕಟ್ಟು ಹಾಗೂ ಇತರ ಸಣ್ಣ ಜಲವಿದ್ಯುತ್ ಸ್ಥಾವರಗಳು ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ. ಒಂದೆಡೆ ಕಲ್ಲಿದ್ದಲು ಕೊರತೆ ತೀವ್ರವಾಗುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ವಿದ್ಯುತ್ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ಬಿಕ್ಕಟ್ಟಿನ ನಡುವೆ ರಾಜಕೀಯ ಹೋರಾಟ :
ಶನಿವಾರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ, ರಾಜಧಾನಿಯಲ್ಲಿ ಕೇವಲ ಒಂದು ದಿನದ ವಿದ್ಯುತ್ ಪೂರೈಕೆಯನ್ನು ನೀಡಬಹುದು, ಇಷ್ಟು ಕಲ್ಲಿದ್ದಲು ಮಾತ್ರ ಉಳಿದಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಕಲ್ಲಿದ್ದಲು ಬಿಕ್ಕಟ್ಟಿನ ವರದಿಗಳನ್ನು ಕೇಂದ್ರ ಸಚಿವ ಆರ್ಕೆ ಸಿಂಗ್ ಭಾನುವಾರ ತಳ್ಳಿಹಾಕಿದ್ದು, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ- Indian Space Association: ಅಕ್ಟೋಬರ್ 11 ಕ್ಕೆ ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ಗೆ ಪ್ರಧಾನಿ ಮೋದಿ ಚಾಲನೆ
ಕರ್ನಾಟಕದಲ್ಲೂ ಕಲ್ಲಿದ್ದಲಿನ ಕೊರತೆ:
ವಾಸ್ತವವಾಗಿ, ಕರ್ನಾಟಕದಲ್ಲೂ ಕಲ್ಲಿದ್ದಲಿನ ಕೊರತೆ (Coal Shortage In Karnataka) ಎದುರಾಗಿದ್ದು ರಾಜ್ಯದ ಎರಡು ಸ್ಥಾವರಗಳಲ್ಲಿ ಕಡಿಮೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕೊರತೆ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ (Sunil Kumar) ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಶನಿವಾರ (ಅ.9) ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ರಾಜ್ಯಕ್ಕೆ 12 ರೇಕ್ ಗಳಲ್ಲಿ ಕೇಂದ್ರ ಕಲ್ಲಿದ್ದಲನ್ನು ಸರಬರಾಜು ಮಾಡಬೇಕಿತ್ತು. ಆದರೆ ಸದ್ಯ 8 ರೇಕ್ ಗಳಲ್ಲಿ ಕಲ್ಲಿದ್ದಲನ್ನು ಸರಬರಾಜು ಮಾಡುತ್ತಿದೆ. ಮುಂದಿನ ವಾರದಲ್ಲಿ 2 ರೇಕ್ ಗಳಲ್ಲಿ (8+2) ಕಲ್ಲಿದ್ದಲು ಸರಬರಾಜಾಗಲಿದೆ. ಇದರಿಂದ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ರಾಜ್ಯಾದಲ್ಲಿ ಯಾವ ಸ್ಥಾವರವೂ ಬಂದ್ ಆಗಿಲ್ಲ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ