Home> India
Advertisement

ಮುಸ್ಲಿಂ ಯುವತಿಯ ವೆಡ್ಡಿಂಗ್ ಕಾರ್ಡ್‌ನಲ್ಲಿ ಗಣೇಶ ಮತ್ತು ರಾಧಾ-ಕೃಷ್ಣ ಫೋಟೋ!

ಈ ಸಮಯದಲ್ಲಿ, ದೇಶದ ರಾಜಧಾನಿಯಾದ ದೆಹಲಿಯಲ್ಲಿ ಭುಗಿಲೆದ್ದಿರುವ ಗಲಭೆಯಿಂದಾಗಿ ಈವರೆಗೂ 39 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಏತನ್ಮಧ್ಯೆ, ಉತ್ತರ ಪ್ರದೇಶದ ಮೀರತ್‌ನಲ್ಲಿ ಕೋಮು ಸೌಹಾರ್ದತೆಯ ಉದಾಹರಣೆ ಮುನ್ನೆಲೆಗೆ ಬಂದಿದೆ. ಮೀರತ್‌ನಲ್ಲಿ ವಿವಾಹದ ಕಾರ್ಡ್ ಚರ್ಚೆಯ ವಿಷಯವಾಗಿ ಉಳಿದಿದೆ.

ಮುಸ್ಲಿಂ ಯುವತಿಯ ವೆಡ್ಡಿಂಗ್ ಕಾರ್ಡ್‌ನಲ್ಲಿ ಗಣೇಶ ಮತ್ತು ರಾಧಾ-ಕೃಷ್ಣ ಫೋಟೋ!

ಮೀರತ್: ಈ ಸಮಯದಲ್ಲಿ, ದೇಶದ ರಾಜಧಾನಿಯಾದ ದೆಹಲಿಯಲ್ಲಿ ಭುಗಿಲೆದ್ದಿರುವ ಗಲಭೆಯಿಂದಾಗಿ ಈವರೆಗೂ 39 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಏತನ್ಮಧ್ಯೆ, ಉತ್ತರ ಪ್ರದೇಶದ ಮೀರತ್‌ನಲ್ಲಿ ಕೋಮು ಸೌಹಾರ್ದತೆಯ ಉದಾಹರಣೆ ಮುನ್ನೆಲೆಗೆ ಬಂದಿದೆ. ಮೀರತ್‌ನಲ್ಲಿ ವಿವಾಹದ ಕಾರ್ಡ್ ಚರ್ಚೆಯ ವಿಷಯವಾಗಿ ಉಳಿದಿದೆ. ವಾಸ್ತವವಾಗಿ ಮುಸಲ್ಮಾನ ಸಮುದಾಯದ ಮದುವೆಯ ಆಹ್ವಾನ ಅಪತ್ರಿಕೆಯಲ್ಲಿ ಗಣೇಶ ಮತ್ತು ರಾಧಾ-ಕೃಷ್ಣ ಫೋಟೋವನ್ನು ಮುದ್ರಿಸಿದ್ದಾರೆ. ಜೊತೆಗೆ ಪತ್ರಿಕೆಯಲ್ಲಿ ಇಸ್ಲಾಂ ಧರ್ಮದ ಚಂದ್ರ ಮತ್ತು ನಕ್ಷತ್ರಗಳ ಚಿತ್ರವನ್ನು ಮುದ್ರಿಸಿದ್ದಾರೆ.

ಮುಸ್ಲಿಂ ಕುಟುಂಬದ ಈ ಉಪಕ್ರಮವನ್ನು ಜನರು ಬಹಳ ಶ್ಲಾಘಿಸುತ್ತಿದ್ದಾರೆ. ಈ ವೆಡ್ಡಿಂಗ್ ಕಾರ್ಡ್ ಗಂಗಾ-ಜಮುನಿ ತೆಹ್ಜೀಬ್‌ಗೆ ಅದ್ಭುತ ಉದಾಹರಣೆಯನ್ನು ನೀಡುತ್ತಿದೆ. ಮೀರತ್‌ನಿಂದ 40 ಕಿ.ಮೀ ದೂರದಲ್ಲಿರುವ ಹಸ್ತಿನಾಪುರದ ಸೈದ್‌ಪುರ ಫಿರೋಜ್‌ಪುರ ಗ್ರಾಮದಲ್ಲಿ ಮೊಹಮ್ಮದ್ ಸರಫತ್ ಅವರ ಮಗಳು ವಿವಾಹ ನಡೆಯಲಿದೆ. ಅವರು ತಮ್ಮ ಮಗಳ ಮದುವೆ ಕಾರ್ಡ್‌ನಲ್ಲಿ ಚಂದ್ರ ಮತ್ತು ನಕ್ಷತ್ರಗಳ ಜೊತೆಗೆ ಗಣೇಶ ಮತ್ತು ರಾಧಾ-ಕೃಷ್ಣರ ಚಿತ್ರವನ್ನು ಮುದ್ರಿಸಿದ್ದಾರೆ.

ಕಾರ್ಡಿನಲ್ಲಿ ಗಣೇಶ ದೇವರ ಚಿತ್ರಕ್ಕಿಂತ ಸ್ವಲ್ಪ ಕೆಳಗೆ ನೂರ್ಚಾಶ್ಮಿ ಅಸ್ಮಾ ಖತೂನ್ ಮತ್ತು ನೂರ್ಚಾಶ್ಮ್ ಮೊಹಮ್ಮದ್ ಶಕೀಬ್ ಹೆಸರನ್ನು ಬರೆಯಲಾಗಿದೆ. ಕಾರ್ಡ್‌ಗಿಂತ ಸ್ವಲ್ಪ ಕೆಳಗೆ ಹುಡುಗಿಯ ತಂದೆಯಾದ ಮೊಹಮ್ಮದ್ ಶರಫತ್‌ನ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ಬರೆಯಲಾಗಿದೆ. ಕೆಲವು ಜನರು 'ನಿಕಾಹ್' ಆಹ್ವಾನವನ್ನು ಸ್ವೀಕರಿಸಿದಾಗ, ಅವರು ಈ ಕಾರ್ಡ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಇದರ ನಂತರ, ಮೊಹಮ್ಮದ್ ಶರಫತ್ ಅವರ ಈ ಉಪಕ್ರಮವನ್ನು ಜನರು ಶ್ಲಾಘಿಸುತ್ತಿದ್ದಾರೆ.

Read More