Home> India
Advertisement

ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ!

ಕೆಲ ದಿನಗಳ ಹಿಂದೆ DMK ಅಭ್ಯರ್ಥಿ ಕಚೇರಿಯಲ್ಲಿ ಹೆಚ್ಚು ಮೊತ್ತದ ಹಣ ವಶಪಡಿಸಿಕೊಂಡ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  
 

ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ!

ನವದೆಹಲಿ: ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹಣದ ದುರ್ಬಳಕೆ ಮಾಡಿಕೊಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ  ಸಂಬಂಧ ರಾಷ್ಟ್ರಪತಿಗೆ ಶಿಫಾರಸು ಮಾಡಲು ಚುನಾವಣಾ ಆಯೋಗವು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಅಧಿಸೂಚನೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಎಲ್ಲಾ ನಿರ್ಧಾರಗಳು ರಾಷ್ಟ್ರಪತಿಗಳ ಮೂಲಕವೇ ನಡೆಯಬೇಕು. ಹಾಗಾಗಿ ರಾಷ್ಟ್ರಪತಿಗಳೇ ರದ್ದುಗೊಳಿಸಬೇಕಿದೆ. 

ಕೆಲ ದಿನಗಳ ಹಿಂದೆ DMK ಅಭ್ಯರ್ಥಿ ಕಚೇರಿಯಲ್ಲಿ ಹೆಚ್ಚು ಮೊತ್ತದ ಹಣ ವಶಪಡಿಸಿಕೊಂಡ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  

ಈ ಸಂಬಂಧ ಏಪ್ರಿಲ್ 10 ರ ಆದಾಯ ತೆರಿಗೆ ಇಲಾಖೆಯ ವರದಿಯ ಆಧಾರದ ಮೇಲೆ ಜಿಲ್ಲಾ ಪೊಲೀಸರು ಡಿಎಂಕೆ ಅಭ್ಯರ್ಥಿ ಕಾತಿರ್ ಆನಂದ್ ಮತ್ತು ಇಬ್ಬರು ಪಕ್ಷದ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.

Read More