Home> India
Advertisement

Kashi Vishwanath: ಮತ್ತಷ್ಟು ದುಬಾರಿಯಾಯ್ತು ಕಾಶಿ ವಿಶ್ವನಾಥನ ದರ್ಶನ, ಬೆಲೆ ಎಷ್ಟು ಗೊತ್ತಾ?

Kashi Vishwanath Temple: ಶ್ರಾವಣ ಮಾಸವನ್ನು ಶಿವನ ಮಾಸ ಎನ್ನುತ್ತಾರೆ. ಈ ದಿನಗಳಲ್ಲಿ ಕೋಟ್ಯಂತರ ಭಕ್ತರು ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಕಾಶಿ ವಿಶ್ವನಾಥನ ದರ್ಶನ ಮತ್ತಷ್ಟು ದುಬಾರಿಯಾಗಿದೆ. 
 

Kashi Vishwanath: ಮತ್ತಷ್ಟು ದುಬಾರಿಯಾಯ್ತು ಕಾಶಿ ವಿಶ್ವನಾಥನ ದರ್ಶನ, ಬೆಲೆ ಎಷ್ಟು ಗೊತ್ತಾ?

Kashi Vishwanath Temple: ಶ್ರಾವಣ ಮಾಸವನ್ನು ಶಿವನ ಮಾಸ ಎನ್ನುತ್ತಾರೆ. ಈ ತಿಂಗಳಲ್ಲಿ ಕೋಟ್ಯಂತರ ಭಕ್ತರು ಬನಾರಸ್‌ನ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಾಶಿ ವಿಶ್ವನಾಥನ ಕಂಡು ಪುನೀತರಾಗುತ್ತಾರೆ. ಭಾರತ ಮತ್ತು ವಿದೇಶಗಳಿಂದಲೂ ಶಿವನ ಭಕ್ತರು ಬನಾರಸ್‌ಗೆ ಬಂದು ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. ದೇವಾಲಯದ ಆಡಳಿತ ಮಂಡಳಿಯು ವಿಶ್ವನಾಥನ ದರ್ಶನಕ್ಕಾಗಿ ಕೆಲವು ಸೌಲಭ್ಯಗಳ ಶುಲ್ಕವನ್ನು ಹೆಚ್ಚಿಸಿದ್ದು, ಈ ಕಾರಣದಿಂದಾಗಿ ದರ್ಶನವು ಈ ಬಾರಿ ಸ್ವಲ್ಪ ದುಬಾರಿಯಾಗಲಿದೆ.

ಇನ್ನು ಶುಲ್ಕ ಹೆಚ್ಚಳದಿಂದ ಭಕ್ತರಿಗೆ ಕಾಶಿ ವಿಶ್ವನಾಥನ ದರ್ಶನ ದುಬಾರಿಯಾಗಲಿದೆ. ಈ ಹಿಂದೆ ಸುಲಭ ದರ್ಶನಕ್ಕೆ 500 ರೂಪಾಯಿ ನೀಡಬೇಕಿತ್ತು. ಆದರೆ ಈಗ ಶ್ರಾವಣ ಮಾಸದಲ್ಲಿ ಇದಕ್ಕೆ 750 ರೂಪಾಯಿ ನೀಡಬೇಕಾಗಿದೆ. ಇದರೊಂದಿಗೆ ಮಂಗಳ ಆರತಿಗೆ ಮೊದಲು 1000 ರೂಪಾಯಿ ನೀಡಬೇಕಾಗಿತ್ತು. ಆದರೆ ಈಗ 2000 ಪಾವತಿಸಬೇಕಾಗುತ್ತದೆ. ಪವಿತ್ರ ಶ್ರಾವಣ ತಿಂಗಳು ಪ್ರಾರಂಭವಾಗುತ್ತಿದೆ. ಇದಕ್ಕಾಗಿ ಕಾಶಿ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಶ್ರಾವಣ ಮಾಸದಲ್ಲಿ ಬನಾರಸ್‌ಗೆ ಕೋಟಿಗಟ್ಟಲೆ ಭಕ್ತರು ಬರುತ್ತಾರೆ. ಹೆಚ್ಚುತ್ತಿರುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿಯು ವಿವಿಧ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಇದರ ಅಡಿಯಲ್ಲಿ ಸುಗಮ ದರ್ಶನ ಮತ್ತು ಮಂಗಳ ಆರತಿಯ ವೆಚ್ಚವನ್ನು ಸಹ ಹೆಚ್ಚಿಸಲಾಗಿದೆ.

ಇದನ್ನೂ ಓದಿ: High-Tech Village : ಇದು ಭಾರತದ ಹೈಟೆಕ್‌ ಹಳ್ಳಿ! ವೈಫೈ, ಆಸ್ಪತ್ರೆ, ಎಸಿ ಶಾಲೆ.. ವಿದೇಶಿಗರನ್ನೂ ಆಕರ್ಷಿದ ಗ್ರಾಮ

ಈ ವರ್ಷ ಶಿವನ ಭಕ್ತರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿರಬಹುದೆಂದು ನಿರೀಕ್ಷಿಸಲಾಗಿದೆ. ಅಂತಹ ಭಾರಿ ಜನಸಂದಣಿಯನ್ನು ನಿಭಾಯಿಸಲು, ಆಡಳಿತವು ಸಹ ಎಚ್ಚೆತ್ತುಕೊಳ್ಳಬೇಕು. ಯಾವುದೇ ನೂಕುನುಗ್ಗಲು ಉಂಟಾಗದಂತೆ ನೋಡಿಕೊಳ್ಳಲು ದೇವಾಲಯದ ಆಡಳಿತ ಮಂಡಳಿಯು ಸಿದ್ಧತೆ ನಡೆಸಿದೆ. ದೇವಾಲಯದಲ್ಲಿ ಸಿದ್ಧತೆಗಳನ್ನು ಮಾಡುತ್ತಿದೆ. ಈ ಬಾರಿ ಕಾಶಿ ವಿಶ್ವನಾಥನ ಅಲಂಕಾರಕ್ಕೆ ಸಂಬಂಧಿಸಿದಂತೆ ದೇವಾಲಯದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಮಾಡಿದೆ. ವರದಿಗಳ ಪ್ರಕಾರ, ಈ ವರ್ಷ ಕಾಶಿ ವಿಶ್ವನಾಥನಿಗೆ 10 ಅಲಂಕಾರಗಳು ನಡೆಯಲಿವೆ. ಶ್ರಾವಣ ಮಾಸ ಮುಗಿದ ಬಳಿಕ ಸಾಮಾನ್ಯ ದಿನಗಳಲ್ಲಿ ಮತ್ತೆ ದರ್ಶನ ಮತ್ತು ಮಂಗಳ ಆರತಿಯ ಹಳೆಯ ದರಗಳು ಜಾರಿಯಾಗಲಿವೆ.

ಇದನ್ನೂ ಓದಿ: Capital Investment: ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಬಗ್ಗೆ ನಿತಿನ್ ಗಡ್ಕರಿ ದೊಡ್ಡ ಹೇಳಿಕೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More