Home> India
Advertisement

Kolkata Murder Case: ಶ್ರದ್ಧಾ ಕೇಸ್ ನಿಂದ ಪ್ರೇರಣೆ: ತಾಯಿ ಹೇಳಿದಳೆಂದು ತಂದೆಯನ್ನು 6 ಪೀಸ್ ಮಾಡಿದ ಮಗ!

Kolkata Murder Case: ಮೂಲಗಳ ಪ್ರಕಾರ, ಬಾಲಕ ಬಾತ್ ರೂಂ ಒಳಗೆ ಗರಗಸದಿಂದ ತಂದೆಯ ದೇಹವನ್ನು ಕತ್ತರಿಸಿದ್ದಾನೆ. ಅದರಲ್ಲಿ ತಾಯಿ ಕೂಡ ಅವನಿಗೆ ಬೆಂಬಲ ನೀಡಿದ್ದಾಳೆ. ಮೊದಲ ಬಾರಿಗೆ ತಾಯಿ ಮತ್ತು ಮಗ ಮೃತದೇಹದ ತುಂಡುಗಳನ್ನು ಸೈಕಲ್ ಮೇಲೆ ಎಸೆಯಲು ಹೋಗಿದ್ದಾರೆ. ಆದರೆ, ನಂತರ ಎರಡು ಬಾರಿ ಮಗನೊಬ್ಬನೇ ಮೃತದೇಹದ ತುಂಡುಗಳನ್ನು ಸೈಕಲ್ ಮೇಲೆ ಎಸೆಯಲು ಹೋಗಿದ್ದಾನೆ.

Kolkata Murder Case: ಶ್ರದ್ಧಾ ಕೇಸ್ ನಿಂದ ಪ್ರೇರಣೆ: ತಾಯಿ ಹೇಳಿದಳೆಂದು ತಂದೆಯನ್ನು 6 ಪೀಸ್ ಮಾಡಿದ ಮಗ!

Kolkata Murder Case: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬಾಲಕನೊಬ್ಬ ತನ್ನ ತಾಯಿಯೊಂದಿಗೆ ಸೇರಿ ತಂದೆಯನ್ನು ಕೊಂದಿದ್ದಾನೆ. ನಂತರ ಮೃತದೇಹವನ್ನು ಮರೆಮಾಚಲು ತಂದೆಯ ಶವವನ್ನು 6 ತುಂಡುಗಳಾಗಿ ಕತ್ತರಿಸಿದ್ದಾನೆ. ಮಾಹಿತಿ ಪ್ರಕಾರ, ಶ್ರದ್ಧಾ ಕೊಲೆ ಪ್ರಕರಣದಿಂದ ಪ್ರೇರಿತರಾಗಿ ತಾಯಿ ಮತ್ತು ಮಗ ತಂದೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾರೆ.

ಇದನ್ನೂ ಓದಿ: Ration Cardನಲ್ಲಿ ʻದತ್ತಾʼ ಬದಲು ʻಕುತ್ತಾʼ.! ಸಿಟ್ಟಿಗೆದ್ದ ವ್ಯಕ್ತಿ, ಅಧಿಕಾರಿ ಎದುರು ಗಲಾಟೆ

ಮೂಲಗಳ ಪ್ರಕಾರ, ಬಾಲಕ ಬಾತ್ ರೂಂ ಒಳಗೆ ಗರಗಸದಿಂದ ತಂದೆಯ ದೇಹವನ್ನು ಕತ್ತರಿಸಿದ್ದಾನೆ. ಅದರಲ್ಲಿ ತಾಯಿ ಕೂಡ ಅವನಿಗೆ ಬೆಂಬಲ ನೀಡಿದ್ದಾಳೆ. ಮೊದಲ ಬಾರಿಗೆ ತಾಯಿ ಮತ್ತು ಮಗ ಮೃತದೇಹದ ತುಂಡುಗಳನ್ನು ಸೈಕಲ್ ಮೇಲೆ ಎಸೆಯಲು ಹೋಗಿದ್ದಾರೆ. ಆದರೆ, ನಂತರ ಎರಡು ಬಾರಿ ಮಗನೊಬ್ಬನೇ ಮೃತದೇಹದ ತುಂಡುಗಳನ್ನು ಸೈಕಲ್ ಮೇಲೆ ಎಸೆಯಲು ಹೋಗಿದ್ದಾನೆ.

ಇದನ್ನೂ ಓದಿ: Indian Armyಯನ್ನು ಮದುವೆಗೆ ಆಹ್ವಾನಿಸಿದ ಜೋಡಿ! ಮನಮುಟ್ಟುವಂತಿದೆ Wedding Card ವಿಶೇಷ ಬರಹ

ಈ ಹೃದಯ ವಿದ್ರಾವಕ ಘಟನೆ ಕೋಲ್ಕತ್ತಾದ ಬರುಯಿಪುರ ಪ್ರದೇಶದಲ್ಲಿ ನಡೆದಿದೆ. ತಾಯಿ-ಮಗ ಇಬ್ಬರೂ ಉಜ್ವಲ್ ಚಕ್ರವರ್ತಿ ಎಂಬ ವ್ಯಕ್ತಿಯನ್ನು ಕೊಂದಿದ್ದಾರೆ. ನಂತರ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣದಿಂದ ಪ್ರೇರಿತರಾಗಿ ಅವನ ದೇಹವನ್ನು ಛಿದ್ರಗೊಳಿಸಲು ನಿರ್ಧರಿಸಿದರು. ಅಸಲಿಗೆ, ಕೊಲೆ ನಡೆದು 3-4 ಗಂಟೆಯಾದರೂ ಏನು ಮಾಡಬೇಕೆಂದು ತಾಯಿ-ಮಗನಿಗೆ ಅರ್ಥವಾಗದೇ ಇದ್ದಾಗ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣದಂತೆಯೇ ಏನಾದರೂ ಮಾಡಬೇಕೆಂದು ಯೋಚಿಸಿ ಮಗ ತಂದೆಯನ್ನು 6 ತುಂಡಾಗಿ ಕತ್ತರಿಸಿದ್ದಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More