ವಿಶ್ವಸಂಸ್ಥೆ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣ ಪ್ರಾರಂಭವಾದ ಕೂಡಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿ ಸಾಮಾನ್ಯ ಸಭೆಯಿಂದ ಹೊರನಡೆದರು. ಇಮ್ರಾನ್ ಖಾನ್ (Imran Khan) ತನ್ನ ಭಾಷಣವನ್ನು ಪ್ರಾರಂಭಿಸಿದ ತಕ್ಷಣ ಅವರು ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದು ಭಾರತದ ವಿರುದ್ಧ ಆಕ್ರಮಣ ಮಾಡಿದ್ದು ಅಸೆಂಬ್ಲಿ ಚೇಂಬರ್ನ ಮೊದಲ ಸಾಲಿನ ಎರಡನೇ ಆಸನದ ಮೇಲೆ ಕುಳಿತಿದ್ದ ಮೊದಲ ಸೆಕ್ರೆಟರಿ ಮಿಜಿತೊ ವಿನಿಟೊ ಮೊದಲು ತಮ್ಮ ಆಸನವನ್ನು ತೊರೆದರು. ಇಮ್ರಾನ್ ತಮ್ಮ ಭಾಷಣದಲ್ಲಿ ಮೊದಲು ಆರ್ಎಸ್ಎಸ್ ಮತ್ತು ನಂತರ ಕಾಶ್ಮೀರ ವಿಷಯದ ಮೇಲೆ ಭಾರತದ ಮೇಲೆ ದಾಳಿ ಮಾಡಿದರು.
ಭಾರತದ ಮೇಲಿನ ದಾಳಿಗೆ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಬೆಂಬಲ ಘೋಷಿಸಿದರು. ಕಾಶ್ಮೀರಿ ಸಹೋದರ ಸಹೋದರಿಯರ ಸ್ವ-ನಿರ್ಣಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದ ಜನರು ಬೆಂಬಲಿಸುತ್ತಾರೆ ಮತ್ತು ಅವರೊಂದಿಗೆ ನಿಲ್ಲಲು ಬದ್ಧರಾಗಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದರು. ಪಾಕಿಸ್ತಾನ (Pakistan) ಸರ್ಕಾರದ ಪ್ರಾಯೋಜಿತ ಭಾರತದ ಮೇಲೆ ಯಾವುದೇ ದಾಳಿಯಲ್ಲಿ ಇಮ್ರಾನ್ ಖಾನ್ ನಿರಾಕರಿಸಿದ್ದಾರೆ ಮತ್ತು ಅದನ್ನು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.
ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಇಮ್ರಾನ್ ಖಾನ್ ಅವರ ದಾಳಿಯನ್ನು ಟೀಕಿಸಿ ಇದು ಯುದ್ಧದ ಉರಿಯುತ್ತಿರುವ ಭಾಷಣ ಎಂದು ಹೇಳಿದರು. 75ನೇ ಯುಎನ್ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನದ ಪ್ರಧಾನ ಮಂತ್ರಿಯ ಹೇಳಿಕೆ ಕೆಳಮಟ್ಟದ ರಾಜತಾಂತ್ರಿಕ ಕ್ರಮವಾಗಿದೆ - ಇದು ಕೆಟ್ಟ, ಸುಳ್ಳು, ವೈಯಕ್ತಿಕ ದಾಳಿಯಿಂದ ಕೂಡಿದೆ ಎಂದು ಅವರು ಟ್ವೀಟ್ ನಲ್ಲಿ ಪಾಕಿಸ್ತಾನ ಪ್ರಧಾನಿ ವಿರುದ್ಧ ಹರಿಹೈದಿದ್ದಾರೆ. ತನ್ನದೇ ಆದ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪಾಕಿಸ್ತಾನವು ಗಡಿಯುದ್ದಕ್ಕೂ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ. ಸೂಕ್ತವಾದ ಉತ್ತರವನ್ನು ನೀಡಲು ಭಾರತಕ್ಕೆ ಅರ್ಹತೆ ಇದೆ ಎಂದವರು ತಿಳಿಸಿದರು.
ಮುಸ್ಲಿಮೇತರರಲ್ಲದೆ ಅಹ್ಮದಿಯಾ ಪಂಥದ ಮುಸ್ಲಿಮರ ಹಕ್ಕುಗಳನ್ನು ಸಾಂವಿಧಾನಿಕವಾಗಿ ಕಸಿದುಕೊಂಡಿರುವ ಇಸ್ಲಾಮಿಕ್ ಗಣರಾಜ್ಯದ ಪ್ರಧಾನಿ ಭಾರತವು ಮಹಾತ್ಮ ಗಾಂಧಿಯವರ ಜಾತ್ಯತೀತತೆಯನ್ನು ತ್ಯಜಿಸಿ ಹಿಂದುತ್ವ ರಾಜ್ಯದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ ಎಂದವರು ವಾಗ್ದಾಳಿ ನಡೆಸಿದರು.