Home> India
Advertisement

ಉದ್ಯೋಗಗಳ ಮೇಲೆ ಕರೋನಾ ಕರಿನೆರಳು: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ 100 ಕಾರ್ಖಾನೆಗಳು

ಇಲ್ಲಿಯವರೆಗೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ (ನೋಯ್ಡಾ) ದ 100 ಕೈಗಾರಿಕಾ ಘಟಕಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿವೆ ಮತ್ತು 150 ಘಟಕಗಳು ಲೋಡ್ ಕಡಿಮೆ ಮಾಡಲು ಅರ್ಜಿಗಳನ್ನು ನೀಡಿವೆ.
 

ಉದ್ಯೋಗಗಳ ಮೇಲೆ ಕರೋನಾ ಕರಿನೆರಳು: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ 100 ಕಾರ್ಖಾನೆಗಳು

ನೋಯ್ಡಾ: ಕೊರೊನಾವೈರಸ್ ಸಾಂಕ್ರಾಮಿಕ ಸೋಂಕನ್ನು ತಡೆಗಟ್ಟಲು ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಉದ್ಯಮವು ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಇದರಿಂದಾಗಿ ಅನೇಕ ಕಾರ್ಖಾನೆಗಳು ಇಲ್ಲಿಯವರೆಗೆ ಮುಚ್ಚಲ್ಪಟ್ಟಿವೆ. 

ಇಲ್ಲಿಯವರೆಗೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ (Noida) ದ 100 ಕೈಗಾರಿಕಾ ಘಟಕಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿವೆ ಮತ್ತು 150 ಘಟಕಗಳು ಲೋಡ್ ಕಡಿಮೆ ಮಾಡಲು ಅರ್ಜಿಗಳನ್ನು ನೀಡಿವೆ.

ವಿದ್ಯುತ್ ಸಂಪರ್ಕ ಪಡೆಯಲು ಕೇವಲ 2 ದಾಖಲೆಗಳಿದ್ದರೆ ಸಾಕು

ಲಾಕ್‌ಡೌನ್‌ನಿಂದಾಗಿ ವ್ಯಾಪಾರದ ಮೇಲೂ ಪರಿಣಾಮ:
ನೋಯ್ಡಾ ವಿಭಾಗದ ಪಾಸ್ಚಿಮಾಂಚಲ್ ವಿದ್ಯಾ ನಿಗಮ್ ಲಿಮಿಟೆಡ್ (ಪಿವಿವಿಎನ್ಎಲ್) ಮುಖ್ಯ ಎಂಜಿನಿಯರ್ ವೀರೇಂದ್ರ ನಾಥ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ, ಲಾಕ್‌ಡೌನ್‌ನಿಂದ ಅನೇಕ ಕೈಗಾರಿಕೆಗಳು ಮತ್ತು ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಲಾಕ್‌ಡೌನ್ (Lockdown) ನಂತರ ಅನೇಕ ಘಟಕಗಳಿಂದ ವಿದ್ಯುತ್ ಲೋಡ್ ಅನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಮುಚ್ಚಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ.  ಇಲ್ಲಿಯವರೆಗೆ ಸುಮಾರು 100 ಕಾರ್ಖಾನೆಗಳಲ್ ವಿದ್ಯುತ್ ಸಂಪರ್ಕಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ ಮತ್ತು ಕಾರ್ಖಾನೆಯ ಬಳಕೆಯ ಪ್ರಕಾರ ವಿದ್ಯುತ್ ಹೊರೆ ಕಡಿಮೆ ಮಾಡಲು ಸುಮಾರು 150 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ವಿದ್ಯುತ್ ಬಿಲ್ ಕಡಿತ ಸಾಧ್ಯತೆ

ಲೋಡ್ ಕಡಿಮೆಯಾದ ಕಾರಣ ಆದಾಯದ ಮೇಲೆ ಪರಿಣಾಮ:
ಈಗ ಕೆಲಸಗಳು ನಿಧಾನವಾಗಿ ನೆಲೆಗೊಳ್ಳುತ್ತಿವೆ ಮತ್ತು ಕೆಲವು ಕೈಗಾರಿಕೆಗಳಲ್ಲಿ ಲೋಡ್ ಹೆಚ್ಚಾಗಿದೆ. ಇದಕ್ಕೂ ಮೊದಲು ಲೋಡ್ ಕಡಿಮೆಯಾದ ಕಾರಣ ನಮ್ಮ ಆದಾಯದ ಮೇಲೆ ಬಹಳ  ಪರಿಣಾಮ ಬೀರಿದೆ. ಏಕೆಂದರೆ ನೋಯ್ಡಾದ ದೊಡ್ಡ ವಾಣಿಜ್ಯ ಸಂಸ್ಥೆಗಳು ಮಾಲ್‌ಗಳು, ಶಾಪಿಂಗ್ ಕೇಂದ್ರಗಳು ಇತ್ಯಾದಿ ಮುಚ್ಚಲ್ಪಟ್ಟಿದ್ದವು ಎಂದು ಮುಖ್ಯ ಎಂಜಿನಿಯರ್ ವೀರೇಂದ್ರ ನಾಥ್ ತಿಳಿಸಿದರು.

Read More