Home> India
Advertisement

ಮೋದಿ ಸರ್ಕಾರದ ಮಹತ್ವದ ನಿರ್ಧಾರ, 3.6 ಕೋಟಿ ಉದ್ಯೋಗಿಗಳಿಗೆ ನೇರ ಲಾಭ!

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಕೋಟ್ಯಾಂತರ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 
 

ಮೋದಿ ಸರ್ಕಾರದ  ಮಹತ್ವದ ನಿರ್ಧಾರ, 3.6 ಕೋಟಿ ಉದ್ಯೋಗಿಗಳಿಗೆ ನೇರ ಲಾಭ!

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಕೋಟ್ಯಾಂತರ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.  ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ಇಎಸ್ಐ) ಆರೋಗ್ಯ ವಿಮಾ ಕಾರ್ಯಕ್ರಮದಲ್ಲಿ, ಉದ್ಯೋಗಿಗಳು ಭರಿಸಬೇಕಿದ್ದ ಹಣವನ್ನು ಶೇ. 6.5 ರಿಂದ ಶೇ. 4ಕ್ಕೆ ಕಡಿಮೆ ಮಾಡಲು ನಿರ್ಧರಿಸಿದೆ. ಇದರಿಂದ ಪ್ರತಿವರ್ಷ 12.85 ಲಕ್ಷ ಉದ್ಯೋಗದಾತರಿಗೆ 5,000 ಕೋಟಿ ರೂ. ಹೊರೆ ಕಡಿಮೆಯಾಗಲಿದೆ. ಅಲ್ಲದೆ, ಇದು 3.6 ದಶಲಕ್ಷ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಕಡಿಮೆಗೊಳಿಸಿದ ದರಗಳು ಜುಲೈ 1 ರಿಂದ ಜಾರಿಗೆ ಬರಲಿವೆ.

3.6 ಕೋಟಿ ಉದ್ಯೋಗಿಗಳಿಗೆ ನೇರ ಲಾಭ:

ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, "ಇಎಸ್ಐ ಕಾನೂನಿನ ಅಡಿಯಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ 6.5 ರಿಂದ 4 ರಷ್ಟು (ಉದ್ಯೋಗದಾತರು 4.75 ರಿಂದ 3.25 ಪ್ರತಿಶತದವರೆಗೆ ಮತ್ತು ನೌಕರರ ಕೊಡುಗೆಯನ್ನು 1.75 ಪ್ರತಿಶತಕ್ಕೆ 0.75 ಪ್ರತಿಶತದಷ್ಟು ಕೊಡುಗೆ) ಕಡಿಮೆ ಮಾಡಲು ನಿರ್ಧರಿಸಿದೆ". 2018-19ರ ಹಣಕಾಸು ವರ್ಷದಲ್ಲಿ 12.85 ಲಕ್ಷ ಉದ್ಯೋಗಿಗಳು ಮತ್ತು 3.6 ಮಿಲಿಯನ್ ಉದ್ಯೋಗಿಗಳು ಇಎಸ್ಐ ಯೋಜನೆಯ 22,279 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ಕಂಪನಿಗಳಿಗೆ ವಾರ್ಷಿಕವಾಗಿ 5 ಸಾವಿರ ಕೋಟಿ ರೂ. ಪ್ರಯೋಜನ:
ಸರ್ಕಾರದ ಈ ನಿರ್ಧಾರದಿಂದ ಇಎಸ್ಐಗೆ ಕಂಪನಿ ಕಡೆಯಿಂದ ನೀಡಬೇಕಾದ ಕೊಡುಗೆ ದರದಲ್ಲಿ ಕಡಿತದ ಕಾರಣ, ಕಂಪನಿಗಳು ವಾರ್ಷಿಕವಾಗಿ ಕನಿಷ್ಠ 5,000 ಕೋಟಿ ರೂಪಾಯಿಗಳನ್ನು ಉಳಿಸಲಿವೆ. ಅಷ್ಟೇ ಅಲ್ಲದೆ ಇದು ಕಾರ್ಮಿಕರಿಗೂ ಸಾಕಷ್ಟು ಪರಿಹಾರವನ್ನು ಒದಗಿಸುತ್ತದೆ ಮತ್ತು ಇಎಸ್ಐ ಯೋಜನೆಯಡಿ ಹೆಚ್ಚಿನ ನೌಕರರನ್ನು ನೇಮಕ ಮಾಡಲು ಮತ್ತು ಔಪಚಾರಿಕ ವಲಯದಲ್ಲಿ ಗರಿಷ್ಠ ಕಾರ್ಮಿಕ ಶಕ್ತಿಯನ್ನು ತರಲು ಸುಲಭವಾಗುತ್ತದೆ ಎಂದು ಹೇಳಲಾಗಿದೆ.

ನೌಕರರ ರಾಜ್ಯ ವಿಮಾ ಕಾಯಿದೆ, 1948 (ಇಎಸ್ಐ ಲಾ) ಈ ಕಾನೂನಿನಡಿಯಲ್ಲಿ ವಿಮೆ, ವೈದ್ಯಕೀಯ, ನಗದು, ಮಾತೃತ್ವ, ಅಂಗವೈಕಲ್ಯ ಮತ್ತು ಅವಲಂಬನೆಗಳ ಪ್ರಯೋಜನಗಳನ್ನು ಒದಗಿಸುತ್ತದೆ. ಇಎಸ್ಐ ನೌಕರನನ್ನು ರಾಜ್ಯ ವಿಮಾ ನಿಗಮ (ಇಎಸ್ಐಸಿ) ನಿರ್ವಹಿಸುತ್ತದೆ. ಇಎಸ್ಐ ಕಾನೂನಿನಡಿಯಲ್ಲಿ ಲಭ್ಯವಾಗುವ ಪ್ರಯೋಜನಗಳನ್ನು ಮಾಲೀಕರು ಮತ್ತು ನೌಕರರು ನೀಡಿದ ಕೊಡುಗೆಗಳ ಮೂಲಕ ಹಣವನ್ನು ನೀಡಲಾಗುತ್ತದೆ.

2016 ರಿಂದ ಜೂನ್ 2017 ವರೆಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳ ವಿಶೇಷ ನೋಂದಣಿ ಕಾರ್ಯಕ್ರಮವನ್ನು ಸರಕಾರ ಪ್ರಾರಂಭಿಸಿದೆ. ಸಾಮಾಜಿಕ ಭದ್ರತೆಗೆ ಗರಿಷ್ಠ ವ್ಯಾಪ್ತಿ ನೀಡಬೇಕು ಮತ್ತು ಯೋಜನೆಯ ಎಲ್ಲಾ ಸೌಲಭ್ಯಗಳನ್ನು ವಿವಿಧ ಹಂತಗಳಲ್ಲಿ ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಿದೆ.  1.1.2017 ರಿಂದ ಸಂಬಳವನ್ನು ತಿಂಗಳಿಗೆ 15,000 ರೂಪಾಯಿಯಿಂದ ರೂ. 21,000 ಗೆ ಹೆಚ್ಚಿಸಲಾಗಿದೆ.
 

Read More