Home> India
Advertisement

Bank Holidays: ಮುಂದಿನ 3 ದಿನಗಳವರೆಗೆ ಈ ನಗರಗಳಲ್ಲಿ ಬ್ಯಾಂಕುಗಳಿಗೆ ರಜೆ, ತುರ್ತು ಕೆಲಸ ಇದ್ದರೆ ಇಂದೇ ಪೂರ್ಣಗೊಳಿಸಿ

Bank Holidays: ಇಂದಿನ ದಿನಗಳಲ್ಲಿ ಬ್ಯಾಂಕಿನ ಹೆಚ್ಚಿನ ಕೆಲಸಗಳನ್ನು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾಡಲಾಗುತ್ತದೆ. ಆದರೆ ಇನ್ನೂ ನಾವು ಅನೇಕ ಪ್ರಮುಖ ಕೆಲಸಗಳಿಗಾಗಿ ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕುಗಳ ರಜಾ ದಿನಗಳ ಬಗ್ಗೆ ತಿಳಿದಿರುವುದು ಅವಶ್ಯಕವಾಗಿದೆ.
 

Bank Holidays:  ಮುಂದಿನ 3 ದಿನಗಳವರೆಗೆ ಈ ನಗರಗಳಲ್ಲಿ ಬ್ಯಾಂಕುಗಳಿಗೆ ರಜೆ, ತುರ್ತು ಕೆಲಸ ಇದ್ದರೆ ಇಂದೇ ಪೂರ್ಣಗೊಳಿಸಿ

ನವದೆಹಲಿ: Bank Holidays- ನೀವು ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಇತ್ಯರ್ಥಗೊಳಿಸಲು ಯೋಜಿಸುತ್ತಿದ್ದರೆ, ಮೊದಲು ಈ ಸುದ್ದಿಯನ್ನು ಖಂಡಿತವಾಗಿ ಓದಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ, ಮುಂದಿನ 4 ದಿನಗಳವರೆಗೆ ಅನೇಕ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹಾಗಾಗಿ ನಿಮಗೆ ಬ್ಯಾಂಕಿಂಗ್ ಸಂಬಂಧಿತ ತುರ್ತು ಕೆಲಸಗಳಿದ್ದರೆ ಶೀಘ್ರವೇ ಅದನ್ನು ಮುಗಿಸಿಕೊಳ್ಳಿ.  ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಬ್ಯಾಂಕಿಂಗ್  (Internet Banking)  ಮೂಲಕ ಮಾಡಲಾಗುತ್ತದೆ. ಇನ್ನೂ, ಕೆಲವೊಮ್ಮೆ ನಾವು ಕೆಲವು ಪ್ರಮುಖ ಕೆಲಸಗಳಿಗಾಗಿ ನಮ್ಮ ಬ್ಯಾಂಕಿನ ಶಾಖೆಗೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕಿಗೆ ಹೋಗುವ ಮೊದಲು, ಯಾವ ದಿನಾಂಕಗಳಲ್ಲಿ ಬ್ಯಾಂಕ್ ರಜೆ ಇದೆ ಎಂದು ತಿಳಿಯುವುದು ಮುಖ್ಯವಾಗಿದೆ 

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನೀಡುವ ರಜಾದಿನಗಳ ಪ್ರಕಾರ, ಪ್ರತಿ ತಿಂಗಳಂತೆ, ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುವುದು. ಹಾಗಾಗಿ ಯಾವ ದಿನ ಮತ್ತು ಯಾವ ವಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂದು ತಿಳಿಯೋಣ ...

ಇದನ್ನೂ ಓದಿ- PM Jan dhan Account: ಖಾತೆಯಲ್ಲಿ ಹಣ ಇಲ್ಲದೇ ಇದ್ದರೂ 10,000 ರೂ.ಗಳನ್ನು ಹಿಂಪಡೆಯಬಹುದು, ತಕ್ಷಣವೇ ಈ ಖಾತೆಯನ್ನು ತೆರೆಯಿರಿ

ಬ್ಯಾಂಕ್ ರಜಾದಿನಗಳ ಪಟ್ಟಿ ಸೆಪ್ಟೆಂಬರ್ 2021:
ಆರ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಿರುವ ರಜಾದಿನಗಳ ಪಟ್ಟಿಯಲ್ಲಿ (Bank Holidays in September 2021) ಸ್ಥಳೀಯ ರಾಜ್ಯ ಮಟ್ಟದಲ್ಲಿ ಮಾತ್ರ ಪರಿಣಾಮಕಾರಿಯಾಗಿರುವ ಕೆಲವು ರಜಾದಿನಗಳಿವೆ. ಈ ರಜೆಗಳು ಎಲ್ಲಾ ರಾಜ್ಯಗಳಲ್ಲಿ ಒಂದೇ ಆಗಿರುವುದಿಲ್ಲ. ಏಕೆಂದರೆ ಕೆಲವು ಹಬ್ಬಗಳು ಅಥವಾ ಹಬ್ಬಗಳನ್ನು ಇಡೀ ದೇಶದಲ್ಲಿ ಏಕಕಾಲದಲ್ಲಿ ಆಚರಿಸಲಾಗುವುದಿಲ್ಲ.

ಈ ದಿನ ಈ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ:
ಈ ವಾರ, ಸೆಪ್ಟೆಂಬರ್ 17 ರಂದು ಕರ್ಮ ಪೂಜೆಯ (Karma Puja) ಸಂದರ್ಭದಲ್ಲಿ ಅಂದರೆ ಶುಕ್ರವಾರ, ರಾಂಚಿಯ ಬ್ಯಾಂಕುಗಳನ್ನು ಮುಚ್ಚಲಾಗುವುದು. ಆದರೆ ಸೆಪ್ಟೆಂಬರ್ 19 ರ ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸೆಪ್ಟೆಂಬರ್ 20 ರಂದು, ಇಂದ್ರಜಾತ್ರೆಯ  ಹಿನ್ನಲೆಯಲ್ಲಿ ಗ್ಯಾಂಗ್ಟಾಕ್ ನ ಬ್ಯಾಂಕುಗಳಲ್ಲಿ ರಜೆ ಇರಲಿದೆ. ಸೆಪ್ಟೆಂಬರ್ 21 ರಂದು, ಶ್ರೀ ನಾರಾಯಣ ಗುರು ಸಮಾಧಿ ದಿನದಂದು ಕೊಚ್ಚಿ ಮತ್ತು ತಿರುವನಂತಪುರಂನ ಬ್ಯಾಂಕುಗಳಿಗೆ ರಜೆ ಇರಲಿದೆ.

ಇದನ್ನೂ ಓದಿ- EPFO ಚಂದಾದಾರರಿಗೆ ಮಹತ್ವದ ಸುದ್ದಿ! ಉದ್ಯೋಗಿಗಳು ತಮ್ಮ ಇಕ್ವಿಟಿ ಹೂಡಿಕೆ ನಿರ್ಧರಿಸಬಹುದೇ? ಇಲ್ಲಿದೆ ವಿವರ

ಬ್ಯಾಂಕುಗಳು ಸತತ ಮೂರು ದಿನಗಳವರೆಗೆ ಮುಚ್ಚಲ್ಪಡುತ್ತವೆ:
19 ಸೆಪ್ಟೆಂಬರ್ - ಭಾನುವಾರ (ವಾರದ ರಜೆ)
20 ಸೆಪ್ಟೆಂಬರ್ - ಇಂದ್ರಜಾತ್ರೆ (ಗ್ಯಾಂಗ್ಟಾಕ್)
21 ಸೆಪ್ಟೆಂಬರ್ - ಶ್ರೀ ನಾರಾಯಣ ಗುರು ಸಮಾಧಿ ದಿನ (ಕೊಚ್ಚಿ, ತಿರುವನಂತಪುರಂ)
ಇದರ ಹೊರತಾಗಿ, ಈ ತಿಂಗಳ ಕೊನೆಯ ವಾರದಲ್ಲಿ, ಸೆಪ್ಟೆಂಬರ್ 25 ತಿಂಗಳ ನಾಲ್ಕನೇ ಶನಿವಾರವಾಗಿದ್ದು, ಈ ಕಾರಣದಿಂದಾಗಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದರೆ ಭಾನುವಾರದ ರಜೆಯಿಂದಾಗಿ ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 26 ರಂದು ಮುಚ್ಚಲ್ಪಡುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More