Home> India
Advertisement

ರಾಜ್ಯಸಭೆಯಲ್ಲಿ ಇಂದು ಕೇವಲ ಜಮ್ಮು-ಕಾಶ್ಮೀರ ವಿಚಾರ ಕುರಿತು ಚರ್ಚೆ, ಗೃಹ ಸಚಿವರಿಂದ ಉತ್ತರ

ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಕುರಿತು ಉತ್ತರಿಸಲಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ಕೇವಲ ಜಮ್ಮು-ಕಾಶ್ಮೀರ ವಿಚಾರ ಕುರಿತು ಚರ್ಚೆ, ಗೃಹ ಸಚಿವರಿಂದ ಉತ್ತರ

ನವದೆಹಲಿ: ರಾಜ್ಯಸಭೆಯ ಅಧ್ಯಕ್ಷರು ಇಂದು ಸದನದಲ್ಲಿ ಇತರ ಎಲ್ಲ ಕಾರ್ಯಕಲಾಪಗಳನ್ನೂ ರದ್ದುಗೊಳಿಸಿದ್ದಾರೆ.  ಇಂದು ಬೆಳಿಗ್ಗೆ 11 ರಿಂದ ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯ ಕುರಿತು ಮಾತ್ರ ಚರ್ಚೆ ನಡೆಯಲಿದ್ದು, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರಕ್ಷುಬ್ಧತೆ ಕುರಿತು ಉತ್ತರಿಸಲಿದ್ದಾರೆ.

ವಾಸ್ತವವಾಗಿ, ನಿಯಮ 267 ರ ಅಡಿಯಲ್ಲಿ, ರಾಜ್ಯಸಭೆಯ ಅಧ್ಯಕ್ಷರು ಇಂದು ಸದನದಲ್ಲಿ ಇತರ ಎಲ್ಲ ವಿಚಾರಣೆಗಳ ಮೇಲಿನ ಚರ್ಚೆಯನ್ನು ರದ್ದುಗೊಳಿಸಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಯಾವುದೇ ಪ್ರಶ್ನೋತ್ತರ ಅಥವಾ ಶೂನ್ಯ ವೇಳೆ ಇರುವುದಿಲ್ಲ. ಈ ಹಿಂದೆ ನಿಗದಿಗೊಳಿಸಲಾಗಿದ್ದ ಪ್ರಮುಖ ವಿಷಯಗಳ ಮೇಲಿನ ಇಂದಿನ ಚರ್ಚೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರು ಸಭೆ ಕರೆದಿದ್ದಾರೆ. ಗುಲಾಮ್ ನಬಿ ಆಜಾದ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸದನಕ್ಕೆ ತೆರಳುವ ಮೊದಲು ಜಮ್ಮು ಮತ್ತು ಕಾಶ್ಮೀರದ ವಿಷಯದ ಬಗ್ಗೆ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಬೆಳಿಗ್ಗೆ 10.30 ಕ್ಕೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಸಭೆ ಕರೆಯಲಾಯಿತು.

ಅದೇ ಸಮಯದಲ್ಲಿ, ಆಗಸ್ಟ್ 5 ರಿಂದ ಆಗಸ್ಟ್ 7 ರವರೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿ ವಿಪ್ ಜಾರಿ ಮಾಡಿದೆ. ಕಾಂಗ್ರೆಸ್ ಉಭಯ ಸದನಗಳನ್ನು ಇನ್ನೂ ಒಂದೆರಡು ದಿನ ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

Read More