Home> India
Advertisement

ಗಾಲ್ವಾನ್ ಘಟನೆ ನಂತರ ಭಾರತ-ಚೀನಾ ನಡುವೆ ಗಂಭೀರ ಸ್ಥಿತಿ ನಿರ್ಮಾಣ: ಸಚಿವ ಜೈಶಂಕರ್

ಜೂನ್‌ನಲ್ಲಿ ಇಂಡೋ-ಚೀನಾ ಗಡಿಯಲ್ಲಿ ಹಿಂಸಾತ್ಮಕ ಘರ್ಷಣೆಗಳು ಬಹಳ ಆಳವಾದ ಸಾರ್ವಜನಿಕ ಮತ್ತು ರಾಜಕೀಯ ಪ್ರಭಾವವನ್ನು ಬೀರಿವೆ ಮತ್ತು ಸಂಬಂಧದಲ್ಲಿ ಗಂಭೀರ ಕೋಲಾಹಲಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಹೇಳಿದ್ದಾರೆ.

ಗಾಲ್ವಾನ್ ಘಟನೆ ನಂತರ ಭಾರತ-ಚೀನಾ ನಡುವೆ ಗಂಭೀರ ಸ್ಥಿತಿ ನಿರ್ಮಾಣ: ಸಚಿವ ಜೈಶಂಕರ್

ನ್ಯೂಯಾರ್ಕ್: ಜೂನ್‌ನಲ್ಲಿ ಇಂಡೋ-ಚೀನಾ ಗಡಿಯಲ್ಲಿ ಹಿಂಸಾತ್ಮಕ ಘರ್ಷಣೆಗಳು ಬಹಳ ಆಳವಾದ ಸಾರ್ವಜನಿಕ ಮತ್ತು ರಾಜಕೀಯ ಪ್ರಭಾವವನ್ನು ಬೀರಿವೆ. ಜೊತೆಗೆ ಉಭಯ ದೇಶಗಳ ನಡುವಿನ ಸಂಬಂಧಗಳನ್ನು ತೀವ್ರವಾಗಿ ಬಿಗಡಾಯಿಸಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್  (S Jaishankar) ಶುಕ್ರವಾರ ಹೇಳಿದ್ದಾರೆ. 

ಜೂನ್ 15 ರಂದು ಪೂರ್ವ ಲಡಾಕ್‌ನ (Ladakh) ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ (Indian Army) 20 ಸೈನಿಕರು ಸಾವನ್ನಪ್ಪಿದರು. ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲೂ ಸಹ ಸಾವುನೋವುಗಳಾಗಿದ್ದರು ಇದು ಸ್ಪಷ್ಟ ಸಂಖ್ಯೆಯನ್ನು ನೀಡಿಲ್ಲ.

ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ

ಏಷ್ಯಾ ಸೊಸೈಟಿ ಆಯೋಜಿಸಿದ್ದ ಡಿಜಿಟಲ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಕಳೆದ 30 ವರ್ಷಗಳಲ್ಲಿ ಭಾರತವು ಚೀನಾದೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದೆ ಮತ್ತು ಈ ಸಂಬಂಧದ ಆಧಾರವು ವಾಸ್ತವಿಕ ನಿಯಂತ್ರಣದ ರೇಖೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಹೇಳಿದರು. ಉಭಯ ದೇಶಗಳ ನಡುವೆ ಗಡಿ ಪ್ರದೇಶಗಳಿಗೆ ಬರುವ ಮಿಲಿಟರಿ ಪಡೆಗಳನ್ನು ಸೀಮಿತಗೊಳಿಸುವ ಶಾಂತಿ ಮತ್ತು ಸುವ್ಯವಸ್ಥೆಯನ್ನು ವಿವರಿಸುವ ಹಲವಾರು ಒಪ್ಪಂದಗಳು 1993 ರಿಂದ ನಡೆದಿವೆ ಮತ್ತು ಗಡಿಯನ್ನು ಹೇಗೆ ನಿರ್ವಹಿಸುವುದು ಮತ್ತು ಗಡಿಯಲ್ಲಿ ಬೀಡುಬಿಟ್ಟಿರುವ ಸೈನ್ಯವನ್ನು ನಿರ್ಧರಿಸುತ್ತದೆ. ಪರಸ್ಪರರ ಕಡೆಗೆ ಚಲಿಸುವಾಗ ಹೇಗೆ ವರ್ತಿಸಬೇಕು ಎಂಬುದರ ಮೇಲೆ ಆಧಾರವಾಗಿರುತ್ತದೆ ಎಂದು ಅವರು ಹೇಳಿದರು. 

LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ

30 ವರ್ಷಗಳಲ್ಲಿ ಸಂಬಂಧಕ್ಕೆ ಪೆಟ್ಟು:
ಭಾರತ-ಚೀನಾ (India-China) ನಡುವಿನ ಸಂಬಂಧ ಪರಿಕಲ್ಪನೆಯ ಮಟ್ಟದಿಂದ ವರ್ತನೆಯ ಮಟ್ಟಕ್ಕೆ, ಇಡೀ ಒಂದು ಚೌಕಟ್ಟಾಗಿತ್ತು. ಈಗ ನಾವು ಈ ವರ್ಷ ನೋಡಿದ ಸಂಗತಿಯೆಂದರೆ, ಈ ಸಂಪೂರ್ಣ ಸರಣಿಯ ಒಪ್ಪಂದಗಳನ್ನು ಬೈಪಾಸ್ ಮಾಡಲಾಗಿದೆ. ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಚೀನೀ ಪಡೆಗಳನ್ನು ನಿಯೋಜಿಸುವುದು ಸ್ಪಷ್ಟವಾಗಿ ಈ ಎಲ್ಲದಕ್ಕೂ ವಿರುದ್ಧವಾಗಿದೆ. ಈ ಹಿನ್ನಲೆಯಲ್ಲಿ ಜೂನ್ 15 ರಂದು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ ನಡೆಯಲು ಸಾಕ್ಷಿಯಾಗಿದೆ ಎಂದು ಸಚಿವ ಜೈಶಂಕರ್ ಬೇಸರ ವ್ಯಕ್ತಪಡಿಸಿದರು.

ಈ ಕ್ರೂರತೆಯು 1975ರ ನಂತರ ಸೈನಿಕರ ಹುತಾತ್ಮತೆಯ ಮೊದಲ ಘಟನೆ ಎಂದು ತಿಳಿಯಬಹುದು. ಇದು ಬಹಳ ಆಳವಾದ ಸಾರ್ವಜನಿಕ ರಾಜಕೀಯ ಪರಿಣಾಮವನ್ನು ಬೀರಿದೆ ಮತ್ತು ಸಂಬಂಧಗಳನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ.  2018 ರ ಏಪ್ರಿಲ್‌ನಲ್ಲಿ ನಡೆದ ವುಹಾನ್ ಶೃಂಗಸಭೆಯ ನಂತರ ಕಳೆದ ವರ್ಷ ಚೆನ್ನೈನಲ್ಲಿ ಇದೇ ರೀತಿಯ ಶೃಂಗಸಭೆ ನಡೆದಿತ್ತು ಮತ್ತು ಅದರ ಹಿಂದಿನ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಚಿನ್ಫಿಂಗ್ ಒಟ್ಟಿಗೆ ಸಮಯ ಕಳೆಯುವ ಮೂಲಕ ಅವರ ಕಾಳಜಿಗಳ ಬಗ್ಗೆ ನೇರವಾಗಿ ಪರಸ್ಪರ ಮಾತನಾಡುವುದಾಗಿತ್ತು ಎಂದು ಜೈಶಂಕರ್ ವಿವರಿಸಿದರು.

ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಪಂಜಾಬಿ ಹಾಡುಗಳ ಮೊರೆಹೋದ ಚೀನಾ

ಏತನ್ಮಧ್ಯೆ ಈ ವರ್ಷ ಏನಾಯಿತು ಎಂಬುದು ನಿಜವಾಗಿಯೂ ದೊಡ್ಡ ವಿಚಲನವಾಗಿದೆ ಎಂದು ಬಣ್ಣಿಸಿದ ಸಚಿವ ಜೈಶಂಕರ್ ಇದು ಮಾತುಕತೆಗಳಿಂದ ಬಹಳ ಭಿನ್ನವಾದ ವಿಧಾನವಲ್ಲ, ಆದರೆ 30 ವರ್ಷಗಳ ಕಾಲ ಇದ್ದ ಸಂಬಂಧದಿಂದ ದೊಡ್ಡ ವಿಚಲನವೂ ಆಗಿತ್ತು. ಚೀನಾ ನಿಖರವಾಗಿ ಏನು ಮಾಡಿತು ಮತ್ತು ಗಡಿಯಲ್ಲಿ ಏಕೆ ಹೀಗೆ ಮಾಡಿದೆ ಎಂಬ ಪ್ರಶ್ನೆಗೆ ನಿಜವಾಗಿಯೂ ನನ್ನ ಬಳಿ ಯಾವುದೇ ತರ್ಕಬದ್ಧ ವಿವರಣೆ ಇಲ್ಲ ಎಂದು ವಿದೇಶಾಂಗ ಸಚಿವರು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಇಂದು ಹೆಚ್ಚಿನ ಸಂಖ್ಯೆಯ ಸೈನಿಕರು ಗಡಿಯ ಆ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಮತ್ತು ಇದು ನಮ್ಮ ಮುಂದೆ ಬಹಳ ಗಂಭೀರವಾದ ಭದ್ರತಾ ಸವಾಲಾಗಿದೆ ಎಂದವರು ತಿಳಿಸಿದರು.

Read More