Home> India
Advertisement

ಈ ರಾಜ್ಯದಲ್ಲಿ ಖಾಸಗಿ ವಲಯದಲ್ಲಿ 75% ಸ್ಥಳೀಯ ಜನರಿಗೆ ಉದ್ಯೋಗಾವಕಾಶ

ಸ್ಥಳೀಯ ಯುವಕರ ನಿರುದ್ಯೋಗ ಸಮಸ್ಯೆಯನ್ನು ಆದ್ಯತೆಯಾಗಿ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 

ಈ ರಾಜ್ಯದಲ್ಲಿ ಖಾಸಗಿ ವಲಯದಲ್ಲಿ 75% ಸ್ಥಳೀಯ ಜನರಿಗೆ ಉದ್ಯೋಗಾವಕಾಶ

ಚಂಡೀಗಢ : ಖಾಸಗಿ ವಲಯದ ಉದ್ಯೋಗಗಳಲ್ಲಿ ರಾಜ್ಯದ ಯುವಕರಿಗೆ ಶೇಕಡಾ 75 ರಷ್ಟು ಮೀಸಲಾತಿ ನೀಡುವ ಸುಗ್ರೀವಾಜ್ಞೆ ತರುವ ಪ್ರಸ್ತಾಪಕ್ಕೆ ಹರಿಯಾಣ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದೆ. ಕರಡು ಸುಗ್ರೀವಾಜ್ಞೆಯನ್ನು ಮುಂದಿನ ಸಭೆಯಲ್ಲಿ ಸಚಿವರ ಪರಿಷತ್ತಿನ ಮುಂದೆ ಇಡಲಾಗುವುದು. ಬಿಜೆಪಿಯೊಂದಿಗೆ ರಾಜ್ಯದ ಮೈತ್ರಿ ಪಾಲುದಾರರಾದ ದುಶ್ಯಂತ್ ಚೌತಲಾ ಅವರ ಜನನಾಯಕ್ ಜನತಾ ಪಕ್ಷವು ಚುನಾವಣೆಯಲ್ಲಿ, ಮುಖ್ಯವಾಗಿ ಖಾಸಗಿ ವಲಯದ ಉದ್ಯೋಗಗಳಲ್ಲಿ ರಾಜ್ಯದ ಯುವಕರಿಗೆ ಶೇಕಡಾ 75 ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಕ್ಯಾಬಿನೆಟ್ ಸಭೆಯು 'ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿ ಉದ್ಯೋಗ ಸುಗ್ರೀವಾಜ್ಞೆ, 2020' ಅನ್ನು ರೂಪಿಸುವ ಪ್ರಸ್ತಾಪವನ್ನು ಅಂಗೀಕರಿಸಿದೆ, ಸ್ಥಳೀಯ ಯುವಕರ ನಿರುದ್ಯೋಗ ಸಮಸ್ಯೆಯನ್ನು ಆದ್ಯತೆಯಾಗಿ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 

ಮುಂದಿನ ಸಭೆಯಲ್ಲಿ ಮಂತ್ರಿ ಮಂಡಳಿಯ ಮುಂದೆ ಮಂಡಿಸಬೇಕಾದ ಕರಡು ಸುಗ್ರೀವಾಜ್ಞೆಯಡಿಯಲ್ಲಿ, ಖಾಸಗಿ ನಿರ್ವಹಣೆಯ ವಿವಿಧ ಕಂಪನಿಗಳು, ಸಮಿತಿಗಳು, ಟ್ರಸ್ಟ್‌ಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳು, ಪಾಲುದಾರಿಕೆ ಸಂಸ್ಥೆಗಳು ಇತ್ಯಾದಿಗಳಲ್ಲಿನ ಶೇಕಡಾ 75 ರಷ್ಟು ಉದ್ಯೋಗಗಳಿಗೆ ತಿಂಗಳಿಗೆ 50,000 ರೂ.ಗಿಂತ ಕಡಿಮೆ ವೇತನದ ಉದ್ಯೋಗದಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡಲಾಗುವುದು.

ಆದಾಗ್ಯೂ, ಉದ್ಯೋಗದಾತರಿಗೆ ಜಿಲ್ಲೆಯಿಂದ ಕೇವಲ 10 ಪ್ರತಿಶತದಷ್ಟು ಸ್ಥಳೀಯ ಅಭ್ಯರ್ಥಿಗಳನ್ನು ನೇಮಕ ಮಾಡುವ ಅವಕಾಶ ಸಿಗುತ್ತದೆ. ಒಂದು ನಿರ್ದಿಷ್ಟ ವರ್ಗದ ಉದ್ಯಮದಲ್ಲಿ ಸೂಕ್ತ ಅಭ್ಯರ್ಥಿಗಳು ಕಂಡುಬರದಿದ್ದರೆ ವಿನಾಯಿತಿ ನೀಡುವ ಅವಕಾಶವೂ ಲಭ್ಯವಿರುತ್ತದೆ.

ಸಭೆಯ ನಂತರ ಮಾತನಾಡಿದ ಚೌತಾಲಾ ಇಂದು ಹರಿಯಾಣದ ಯುವಕರಿಗೆ ಐತಿಹಾಸಿಕ ದಿನವಾಗಿದೆ. ಏಕೆಂದರೆ ಈಗ ಖಾಸಗಿ ವಲಯದ ಕೈಗಾರಿಕೆಗಳು ಮತ್ತು ಕಂಪನಿಗಳು ಹರಿಯಾಣದ ಯುವಕರಿಗೆ ಶೇಕಡಾ 75 ರಷ್ಟು ಉದ್ಯೋಗವನ್ನು ನೀಡುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು. ಯುವಜನರ ಉದ್ಯೋಗಕ್ಕೆ ಬಿಜೆಪಿ-ಜೆಜೆಪಿ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
 

Read More