Home> Entertainment
Advertisement

ಕನ್ನಡತಿʼಯ ಕಿರಣ್‌ರಾಜ್‌ ಸೋಲೊ ಟ್ರಿಪ್‌ ಹೋಗಿದ್ದೇಕೆ..?

ಕನ್ನಡತಿ ಖ್ಯಾತಿಯ ನಟ ಕಿರಣ್‌ರಾಜ್‌ ಸದ್ಯ ಸಖತ್‌ ಬ್ಯುಸಿಯಾಗಿದ್ದಾರೆ. ಸೀರಿಯಲ್‌ನಲ್ಲಿ ಭುವಿ ಹಾಗೂ ಹರ್ಷ ಎಂಗೇಜ್‌ಮೆಂಟ್‌ ನೆಡಿತಾಯಿದ್ದು ಈ ಜೋಡಿ ಫುಲ್‌ ಖುಷ್‌ ಆಗಿದೆ..

ಕನ್ನಡತಿʼಯ ಕಿರಣ್‌ರಾಜ್‌ ಸೋಲೊ ಟ್ರಿಪ್‌ ಹೋಗಿದ್ದೇಕೆ..?

ಬೆಂಗಳೂರು: ಕನ್ನಡತಿ ಖ್ಯಾತಿಯ ನಟ ಕಿರಣ್‌ರಾಜ್‌ ಸದ್ಯ ಸಖತ್‌ ಬ್ಯುಸಿಯಾಗಿದ್ದಾರೆ. ಸೀರಿಯಲ್‌ನಲ್ಲಿ ಭುವಿ ಹಾಗೂ ಹರ್ಷ ಎಂಗೇಜ್‌ಮೆಂಟ್‌ ನೆಡಿತಾಯಿದ್ದು ಈ ಜೋಡಿ ಫುಲ್‌ ಖುಷ್‌ ಆಗಿದೆ..ವಿಶೇಷ ಅಂದ್ರೆ ಹರ್ಷ ಭುವಿ ಎಂಗೇಜ್‌ಮೆಂಟ್‌ ಯಾವಗಪ್ಪಾ ಅಂತಾ ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದರು.. ಇದೀಗ ಈ ಜೋಡಿ ರಿಂಗ್‌ ಎಂಕ್ಸ್‌ಚೇಂಚ್‌ ಮಾಡಿಕೊಳ್ತಾಯಿರೋದು ಸಾಕಷ್ಟು ಅಭಿಮಾನಿಗಳಿಗೆ  ಸಂತಸ ನೀಡಿದೆ..ಆದ್ರೆ ಧಾರಾವಾಹಿಯ ಕಥೆಯ ಎಳೆಯನ್ನು ನೋಡ್ತಾರಿದ್ರೆ ಮುಂದೇನಾದ್ರೂ ಟ್ವಿಸ್ಟ್‌ ಇದಿಯಾ ಎಂಬ ಕುತೂಹಲ ಕೂಡಾ ನೋಡುಗರಲ್ಲಿ  ಮನೆ ಮಾಡಿದೆ.. ಇದಿಷ್ಟು ಸೀರಿಯಲ್‌ ಕಥೆ..

 fallbacks

ಇದನ್ನೂ ಓದಿ: #BeastDisaster: ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್!

ಇನ್ನು ಕಿರಣ್‌ರಾಜ್‌ ಸದ್ಯ ಶೂಟಿಂಗ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.. ಒಂದು ಕಡೆ ಸೀರಿಯಲ್‌ ಶೂಟಿಂಗ್‌ ಇದ್ರೆ ಮತ್ತೊಂದು ಕಡೆ ಸಿನಿಮಾ ಚಿತ್ರೀಕರಣದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಬೆಂಗಳೂರಿನ ಟ್ರಾಫಿಕ್‌ ಕ್ರೌಡ್‌ ಸ್ಟ್ರೆಸ್‌ನಿಂದ ಸ್ವಲ್ಪ ರಿಲ್ಯಾಕ್ಸ್‌ ಆಗೋಕೆ ಕಿರಣ್‌ ಸೋಲೊ ಟ್ರಿಪ್‌ ಹೋಗಿದ್ರು.. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿದ್ದು, ದೇವರ ದರ್ಶನ ಪಡೆದಿದ್ದಾರೆ.. ಜೊತೆಗೆ ಮಲೆನಾಡಿನ ಸೊಬಗನ್ನು ಸವಿದು ಆ ತಂಪಾದ ವಾತಾವರಣದಲ್ಲಿ ಒಂದಿಷ್ಟು ಕಾಲ ಕಳೆದು ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.. ಮತ್ತೊಂದು ವಿಶೇಷ ಅಂದ್ರೆ ಸುಬ್ರಮಣ್ಯದಲ್ಲೂ ಕೂಡಾ ಕಿರಣ್‌ ಅವರನ್ನು ನೋಡಿ ಅಭಿಮಾನಿಗಳು ಸಂತಸಗೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ..

ಇದನ್ನೂ ಓದಿ: ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !

ಒಟ್ಟಿನಲ್ಲಿ ಶೂಟಿಂಗ್‌ನಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ಫುಲ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿ ಬೆಂಗಳೂರಿಗೆ ವಾಪಸ್‌ ಆಗಿರುವ ಕಿರಣ್‌ ಇದೀಗ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More