Home> Entertainment
Advertisement

Renukaswamy Murder Case: ಮಗನನ್ನು ತಬ್ಬಿಕೊಂಡು ಕಣ್ಣೀರಿಟ್ಟ ದರ್ಶನ್, ಧೈರ್ಯ ತುಂಬಿದ ಪತ್ನಿ!

Renukaswamy Murder Case: ಮಗ ವಿನೀಶ್‌ನನ್ನು ತಬ್ಬಿಕೊಂಡು ಮುದ್ದಾಡಿದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಬಳಿ ನಡೆದ ಘಟನೆಯ ಬಗ್ಗೆ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಭಾವುಕರಾಗಿಯೇ ವಿಜಯಲಕ್ಷ್ಮಿಯವರ ಜೊತೆಗೆ ದರ್ಶನ್ ಮಾತಾಡಿದ್ದಾರೆಂದು ಹೇಳಲಾಗಿದೆ.

Renukaswamy Murder Case: ಮಗನನ್ನು ತಬ್ಬಿಕೊಂಡು ಕಣ್ಣೀರಿಟ್ಟ ದರ್ಶನ್, ಧೈರ್ಯ ತುಂಬಿದ ಪತ್ನಿ!

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲುಪಾಲಾಗಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ನೋಡಲು ಆಪ್ತರು ಹಾಗೂ ಕುಟುಂಬಸ್ಥರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ಪುತ್ರ ವಿನೀಶ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಭೇಟಿ ನೀಡಿದ್ದಾರೆ.  

ತನ್ನನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದ ಮಗ ಹಾಗೂ ಪತ್ನಿ ವಿಜಯಲಕ್ಷ್ಮಿಯವರನ್ನು ನೋಡುತ್ತಿದ್ದಂತೆ ದರ್ಶನ್ ಭಾವುಕರಾದರು. ಈ ವೇಳೆ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್ ಕಣ್ಣೀರು ಹಾಕಿದರು ಅಂತಾ ವರದಿಯಾಗಿದೆ. 

ಇದನ್ನೂ ಓದಿ: ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?

ಮಗ ವಿನೀಶ್‌ನನ್ನು ತಬ್ಬಿಕೊಂಡು ಮುದ್ದಾಡಿದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಬಳಿ ನಡೆದ ಘಟನೆಯ ಬಗ್ಗೆ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಭಾವುಕರಾಗಿಯೇ ವಿಜಯಲಕ್ಷ್ಮಿಯವರ ಜೊತೆಗೆ ದರ್ಶನ್ ಮಾತಾಡಿದ್ದಾರೆಂದು ಹೇಳಲಾಗಿದೆ.

ಈ ವೇಳೆ ದರ್ಶಶ್‌ಗೆ ಧೈರ್ಯ ತುಂಬಿದ ಪತ್ನಿ ವಿಜಯಲಕ್ಷ್ಮಿಯವರು ಕಾನೂನು ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತು ದರ್ಶನ್​ ಜೊತೆ ಮಾತಾಡಿದ ಬಳಿಕ ವಿಜಯಲಕ್ಷ್ಮಿಯವರು ಪುತ್ರನ ಜೊತೆಗೆ ವಾಪಸ್​ ತೆರಳಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್..‌! ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್‌ ಸಿನಿಮಾ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ಕೈದಿ ನಂಬರ್‌ 6106 ಆಗಿದ್ದು, ಅವರಿಗೆ ವಿಶೇಷ ಬ್ಯಾರಕ್‌ ವ್ಯವಸ್ಥೆ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ದರ್ಶನ್‌, ವಿನಯ್, ಪ್ರದೂಶ್ & ಧನರಾಜ್‌ಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಜುಲೈ 4ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ.  

ಭದ್ರತಾ ದೃಷ್ಟಿಯಿಂದಾಗಿ ನಟ ದರ್ಶನ್‌ರನ್ನು ವಿಶೇಷ ಬ್ಯಾರಕ್‌ನಲ್ಲಿರಿಸಲಾಗಿದ್ದು, ಅವರಿಗೆ ಜೈಲಿನ ಇನ್ಸ್‌ಪೆಕ್ಟರ್ ಸೇರಿದಂತೆ ೩ ಸಿಬ್ಬಂದಿಯಿಂದ ಭದ್ರತೆಗೆ ಆಯೋಜಿಸಲಾಗಿದೆ. ಇನ್ನು ಪ್ರಕರಣದ A1 ಆರೋಪಿಗೆ ಜೂನ್ 20ರಂದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಕೈದಿ ನಂಬರ್‌ 6106 ಆಗಿರುವ ಪವಿತ್ರಾ ಗೌಡರನ್ನು ಪರಪ್ಪನ ಅಗ್ರಹಾರದ ಮಹಿಳಾ ವಿಭಾಗದ ಡಿ ಬ್ಯಾರಕ್‌ನಲ್ಲಿರಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More