Home> Entertainment
Advertisement

‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್

ರಾಜಮೌಳಿ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸುದೀಪ್, ‘ಧನ್ಯವಾದಗಳು ರಾಜಮೌಳಿ ಸರ್. ನಿಮ್ಮಿಂದ ಈ ಸಾಲುಗಳನ್ನು ಕೇಳಲು ತುಂಬಾ ಗೌರವ ಎನಿಸುತ್ತಿದೆ ಎಂದು ಹೇಳಿದ್ದಾರೆ.

‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್

ಬೆಂಗಳೂರು: ಹಾಲಿವುಡ್ ರೇಂಜ್‍ನಲ್ಲಿ ಮೂಡಿಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದೆ. ಸುಮಾರು 3200ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಿಲೀಸ್ ಆಗಿರುವ ‘ವಿಕ್ರಾಂತ್ ರೋಣ’ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕನ್ನಡ, ಇಂಗ್ಲಿಷ್ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ವಿಕ್ರಾಂತ್ ರೋಣ’ ಟೀಂ ಇದೀಗ ಸಿನಿಮಾ ಸಕ್ಸಸ್ ಆಗಿರುವ ಖುಷಿಯಲ್ಲಿದೆ. ಅನೇಕ ಭಾರತೀಯ ನಟ-ನಟಿಯರು, ಖ್ಯಾತ ನಿರ್ದೇಶಕರು ‘ವಿಕ್ರಾಂತ್ ರೋಣ’ ಸಿನಿಮಾ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಖ್ಯಾತ ಟಾಲಿವುಡ್ ನಿರ್ದೇಶಕ ಎಸ್.ಎಸ್.ರಾಜಮೌಳಿಯವರು ಖುದ್ದು ಥಿಯೇಟರ್‍ಗೆ ತೆರಳಿ ಸಿನಿಮಾ ವೀಕ್ಷಿಸಿದ್ದು, ಕಿಚ್ಚನ ಅಭಿನಯಕ್ಕೆ ಮನಸೋತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ವಿಕ್ರಾಂತ್ ರೋಣ’ ಸಿನಿಮಾದ ಗೆಲುವಿಗೆ ಕಿಚ್ಚ ಸುದೀಪ್‍ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ಅವರು ಗುಡ್ಡಿ ಸ್ನೇಹಿತ ಭಾಸ್ಕರ್‍ನ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ'..! ಮೊದಲ ದಿನವೇ ಹಲವು ದಾಖಲೆ ಉಡೀಸ್..!‌

‘ವಿಕ್ರಾಂತ್ ರೋಣ’ ಚಿತ್ರದ ಗೆಲುವಿಗಾಗಿ ಶುಭಾಶಯಗಳು ಕಿಚ್ಚ ಸುದೀಪ್. ಇಂತಹ ಸಿನಿಮಾಗೆ ಹೂಡಿಕೆ ಮಾಡಲು ಧೈರ್ಯ ಮತ್ತು ನಂಬಿಕೆ ಬೇಕಾಗುತ್ತದೆ. ನೀವು ಅದನ್ನು ಮಾಡಿದ್ದೀರಿ ಮತ್ತು ಅದು ಫಲ ನೀಡಿದೆ. ಈ ಚಿತ್ರದ ಪ್ರಿ-ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಅದೇ ಸಿನಿಮಾದ ಹೃದಯವಾಗಿದೆ. ಸಿನಿಮಾ ತುಂಬಾ ಚೆನ್ನಾಗಿತ್ತು’ ಎಂದು ಹೇಳಿದ್ದಾರೆ

ಗುಡ್ಡಿ ಸ್ನೇಹಿತ ಭಾಸ್ಕರ್ ನೆನಸಿಕೊಂಡ ರಾಜಮೌಳಿ

ಹೌದು, ಕಿಚ್ಚ ಸುದೀಪ್‍ಗೆ ಶುಭಾಶಯತಿಳಿಸಿರುವ ಎಸ್.ಎಸ್.ರಾಜಮೌಳಿ ‘ವಿಕ್ರಾಂತ್ ರೋಣ’ ಚಿತ್ರದ ಗುಡ್ಡಿ ಸ್ನೇಹಿತ ಭಾಸ್ಕರ್‍ನನ್ನು ನೆನಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಭಾಸ್ಕರ್ ಯಾರು ಅಂತೀರಾ..? ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಸುದೀಪ್‍ಗೆ ಗೀತಾಂಜಲಿ ರೋಣ ಎಂಬ ಮಗಳಿರುತ್ತಾಳೆ. ಆಕೆಯ ಸ್ನೇಹಿತನ ಹೆಸರೇ ಭಾಸ್ಕರ್. ಈ ಚಿತ್ರದಲ್ಲಿ ಎಲ್ಲೂ ಭಾಸ್ಕರ್ ಕಾಣಿಸಿಕೊಂಡಿಲ್ಲವಾದರೂ ಈ ಪಾತ್ರವು ಸಿನಿಪ್ರೇಕ್ಷಕರ ಮೊಗದಲ್ಲಿ ನಗು ತರಿಸುತ್ತದೆ. ಭಾಸ್ಕರ್ ಬಗ್ಗೆ ತನ್ನ ಅಪ್ಪನಿಗೆ ಗೀತಾಂಜಲಿ ಹೇಳುವ ಮಾತುಗಳ ದೃಶ್ಯಗಳು ನೋಡುಗರಿಗೆ ನಗು ತರಿಸುತ್ತವೆ. ರಾಜಮೌಳಿ ತಮ್ಮ ಟ್ವೀಟ್‍ನ ಕೊನೆಯ ಸಾಲಿನಲ್ಲಿ ‘Special mention to Guddy's friend Bhaskar’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!

ರಾಜಮೌಳಿ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸುದೀಪ್, ‘ಧನ್ಯವಾದಗಳು ರಾಜಮೌಳಿ ಸರ್. ನಿಮ್ಮಿಂದ ಈ ಸಾಲುಗಳನ್ನು ಕೇಳಲು ತುಂಬಾ ಗೌರವ ಎನಿಸುತ್ತಿದೆ. ಭಾಸ್ಕರ್ ಸೇರಿದಂತೆ ನಮ್ಮೆಲ್ಲರಿಂದ ನಿಮಗೆ ದೊಡ್ಡ ಧನ್ಯವಾದಗಳು..’ ಎಂದು ಹೇಳಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸಹ ಟ್ವೀಟ್ ಮಾಡಿದ್ದು, ‘ಧನ್ಯವಾದಗಳು ರಾಜಮೌಳಿ ಸರ್.. ನಾವೆಲ್ಲರೂ ಭಾವಪರವಶರಾಗಿದ್ದೇವೆ! ವಿಶೇಷವಾಗಿ ಭಾಸ್ಕರ್ ಅವರು ನಿಮ್ಮ ಮುಂದಿನ ಚಿತ್ರದಲ್ಲಿ ಒಂದು ಪಾತ್ರವನ್ನು ಪಡೆಯುವ ಭರವಸೆಯಲ್ಲಿದ್ದಾರೆ’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More