Home> Entertainment
Advertisement

Pavitra Naresh : ʼನನ್ನ ಸಾಯಿಸೋಕೆ ಸೂಪಾರಿ ಕೊಟ್ಟಿದ್ದಾಳೆ..ʼ ನಟ ನರೇಶ್‌ ಹೊಸ ಬಾಂಬ್‌..!

ತೆಲುಗು ನಟ ವಿಜಯ್‌ ಕೃಷ್ಣ ನರೇಶ್ ಅವರು ಮಾಜಿ ಪತ್ನಿ ರಮ್ಯಾ ರಘುಪತಿ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೈದರಾಬಾದ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನರೇಶ್‌ ಈ ಕುರಿತು ಮಾಹಿತಿ ನೀಡಿದ್ದು, ಆಕೆಯಿಂದ ತಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Pavitra Naresh : ʼನನ್ನ ಸಾಯಿಸೋಕೆ ಸೂಪಾರಿ ಕೊಟ್ಟಿದ್ದಾಳೆ..ʼ ನಟ ನರೇಶ್‌ ಹೊಸ ಬಾಂಬ್‌..!

Naresh Pavitra lokesh marriage : ತೆಲುಗು ನಟ ವಿಜಯ್‌ ಕೃಷ್ಣ ನರೇಶ್ ಅವರು ಮಾಜಿ ಪತ್ನಿ ರಮ್ಯಾ ರಘುಪತಿ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೈದರಾಬಾದ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನರೇಶ್‌ ಈ ಕುರಿತು ಮಾಹಿತಿ ನೀಡಿದ್ದು, ಆಕೆಯಿಂದ ತಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ರಮ್ಯಾ ನರೇಶ್ ಅವರ ಮೂರನೇ ಪತ್ನಿ. ಇಬ್ಬರೂ ಸುಮಾರು ಒಂದು ದಶಕದ ಹಿಂದೆ ಮದುವೆಯಾಗಿದ್ದರು. ಒಬ್ಬ ಮಗನೂ ಸಹ ಇದ್ದಾನೆ. ಜುಲೈನಲ್ಲಿ, ನರೇಶ್ ಪವಿತ್ರಾಳನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಳು ಮತ್ತು ಅವರಿಬ್ಬರನ್ನು ಹೋಟೆಲ್‌ನಲ್ಲಿದ್ದಾಗ ಹೊಡೆಯಲು ಪ್ರಯತ್ನಿಸಿ ವೀಡಿಯೊದಲ್ಲಿ ವೈರಲ್‌ ಆಗಿತ್ತು. ನರೇಶ್ ಆರಂಭದಲ್ಲಿ ತಾನು ಪವಿತ್ರಾ ಜೊತೆ ಡೇಟಿಂಗ್ ಮಾಡುವುದನ್ನು ನಿರಾಕರಿಸಿದ್ದರು, ನಂತರ ಪವಿತ್ರಾ ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದರು. ವಿಚಿತ್ರ ಅಂದ್ರೆ ನರೇಶ್‌ ಮತ್ತು ರಮ್ಯಾ ಇನ್ನೂ ವಿಚ್ಛೇದನ ಪಡೆದಿಲ್ಲವಂತೆ.

ಇದನ್ನೂ ಓದಿ: Taraka Ratna : ʼಅಣ್ಣನಿಗೆ ಅಸಂಖ್ಯಾತ ಅಭಿಮಾನಿಗಳ ಆರ್ಶೀವಾದ ಇದೆʼ ಗುಣಮುಖರಾಗ್ತಾರೆ

ಶನಿವಾರ ಹೈದರಾಬಾದ್‌ನಲ್ಲಿ ನರೇಶ್ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ರಮ್ಯಾ ತಮ್ಮ ರಾಜಕೀಯ ಹಿನ್ನೆಲೆಯನ್ನು ಬಳಸಿಕೊಂಡು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಮ್ಮನ್ನು ಸಾಯಿಸಲು ಸುಪಾರಿ ಕಿಲ್ಲರ್‌ಗಳನ್ನು ನೇಮಿಸಿದ್ದಾರೆ. ರಮ್ಯಾ ಅವರಿಗೆ 10 ಕೋಟಿ ರೂ.ಗಳ ನೀಡಿದ್ದಾರೆ. ಆದ್ದರಿಂದ ತಮಗೆ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ನರೇಶ್ ತಿಳಿಸಿದ್ದಾರೆ. ನರೇಶ್‌ ಆರೋಪಗಳಿಗೆ ರಮ್ಯಾ ಇನ್ನೂ ಪ್ರತಿಕ್ರಿಯಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More