Home> Entertainment
Advertisement

"ಸುವರ್ಣ ಸಂಕ್ರಾಂತಿ ಸಂಭ್ರಮ"... ಸ್ಯಾಂಡಲ್‌ವುಡ್ ತಾರೆಯರ ಸಮಾಗಮ..! ತಪ್ಪದೇ ವೀಕ್ಷಿಸಿ

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ಟಾರ್‌ ಸುವರ್ಣ ವಾಹಿನಿ ಅದ್ದೂರಿಯಾಗಿ ಆಚರಿಸಿದೆ. ಸ್ಯಾಂಡಲ್‌ವುಡ್‌ ಸಿನಿತಾರೆಗಳ ಜೊತೆ ಅದ್ಧೂರಿ ವೇದಿಕೆಯ ಮೇಲೆ ಸಂಕ್ರಾತಿ ಸಡಗರವನ್ನು ಕೊಂಡಾಡಲಾಗಿದೆ. ಹಬ್ಬದ ಖುಷಿಯಲ್ಲಿರುವ ಪ್ರೇಕ್ಷಕರಿಗೆ ಸ್ಟಾರ್‌ ಸುವರ್ಣವಾಹಿನಿ ಡಬಲ್‌ ಧಮಾಕ ನೀಡಿದ್ದು, ಡಿಪ್ರೇಂಟ್‌ ಕಾನ್ಸೆಪ್ಟ್‌ ಕಾರ್ಯಕ್ರಮಗಳ ಮೂಲಕ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. 

Suvarna sankranthi sambrama 2023 : ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ಟಾರ್‌ ಸುವರ್ಣ ವಾಹಿನಿ ಅದ್ದೂರಿಯಾಗಿ ಆಚರಿಸಿದೆ. ಸ್ಯಾಂಡಲ್‌ವುಡ್‌ ಸಿನಿತಾರೆಗಳ ಜೊತೆ ಅದ್ಧೂರಿ ವೇದಿಕೆಯ ಮೇಲೆ ಸಂಕ್ರಾತಿ ಸಡಗರವನ್ನು ಕೊಂಡಾಡಲಾಗಿದೆ. ಹಬ್ಬದ ಖುಷಿಯಲ್ಲಿರುವ ಪ್ರೇಕ್ಷಕರಿಗೆ ಸ್ಟಾರ್‌ ಸುವರ್ಣವಾಹಿನಿ ಡಬಲ್‌ ಧಮಾಕ ನೀಡಿದ್ದು, ಡಿಪ್ರೇಂಟ್‌ ಕಾನ್ಸೆಪ್ಟ್‌ ಕಾರ್ಯಕ್ರಮಗಳ ಮೂಲಕ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. 

ಹೌದು.. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ಕುಟುಂಬದ ಜೊತೆ ಕಾಲ ಕಳೆಯುತ್ತಾರೆ. ಇದೀಗ ಪ್ರೇಕ್ಷಕರ ಸಂತೋಷವನ್ನು ಡಬಲ್‌ ಮಾಡೋಕೆ ರೆಡಿಯಾಗಿರುವ ಸ್ಟಾರ್‌ ಸುವರ್ಣ ವಾಹಿನಿ, ಈ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ "ಸುವರ್ಣ ಸಂಕ್ರಾಂತಿ ಸಂಭ್ರಮ" ಎಂಬ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದೆ. 

ಇದನ್ನೂ ಓದಿ: ಸಪ್ತಮಿ ಸಂಭ್ರಮ ಹೆಚ್ಚಿಸಿದ ಸಂಕ್ರಾತಿ : ಬಾಲಿವುಡ್‌ನಲ್ಲಿ ಮಿಂಚಲಿದ್ದಾಳೆ ಕಾಂತಾರ ಬೆಡಗಿ

ಈ ಕಾರ್ಯಕ್ರಮದಲ್ಲಿ ಅನುಪಮಾ ಗೌಡ, ಅದಿತಿ ಪ್ರಭುದೇವ್, ಡಾಲಿ ಧನಂಜಯ್, ಲಾಸಿಯ, ಅಮೃತ ಐಯ್ಯಂಗಾರ್, ಅಮೂಲ್ಯ ಗೌಡ, ಪೃಥ್ವಿ ಅಂಬರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾದ ಪುಷ್ಪವತಿ ಖ್ಯಾತಿಯ ನಿಮಿಕಾ ಸೇರಿದಂತೆ ಇನ್ನು ಅನೇಕ ನಟ-ನಟಿಯರು ಭಾಗವಹಿಸಿದ್ದು, ಹಾಡು-ಹರಟೆ, ಮೋಜು ಮಸ್ತಿಯೊಂದಿಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡಿದ್ದಾರೆ. 

ಅಷ್ಟೇ ಅಲ್ಲದೆ ಬೊಂಬಾಟ್ ಭೋಜನದ ಸಾರಥಿ ಸಿಹಿ ಕಹಿ ಚಂದ್ರು ರವರು ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಬೊಂಬಾಟ್ ಭೋಜನ'ದ ಹೊಸ ಆವೃತ್ತಿಯ ಅನಾವರಣ ಈ ಕಾರ್ಯಕ್ರಮದಲ್ಲಿ ಮಾಡಿದ್ದಾರೆ. ಜೊತೆಗೆ ನಟ ಡಾಲಿ ಧನಂಜಯ್ ತಮ್ಮ ನಿರ್ಮಾಣದ ಹೊಸ ಸಿನಿಮಾದ ಬಗ್ಗೆ ಮಾತುಗಳನ್ನಾಡಿದ್ದು. ನಟಿ ಅದಿತಿ ಪ್ರಭುದೇವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಸಂಕ್ರಾಂತಿಯನ್ನು ಸ್ಟಾರ್ ಸುವರ್ಣದ ಜೊತೆ ಆಚರಿಸಿದ್ದಾರೆ.

ಇದನ್ನೂ ಓದಿ: ಬಚ್ಚನ್ ಕುಟುಂಬದಲ್ಲಿ ಮಗಳು ಮತ್ತು ಸೊಸೆ ಮಧ್ಯೆ ಮನಸ್ತಾಪ ! ಬಿಗ್ ಬಿ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ?

ವಾಹಿನಿಯಲ್ಲಿ ಹೊಸದಾಗಿ ಪ್ರಾರಂಭವಾಗಲಿರುವ 'ನಮ್ಮ ಲಚ್ಚಿ' ಧಾರಾವಾಹಿಯ ನಟ ವಿಜಯ್ ಸೂರ್ಯ ತಂದೆಯೊಂದಿಗಿನ ಭಾಂದವ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ 'ದಿಯಾ' ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ತನ್ನ ಪತ್ನಿಯ ಜೊತೆ ವೇದಿಕೆಯಲ್ಲಿ ಜೊತೆಯಾಗಿದ್ದು, 'ಸುವರ್ಣ ಸಂಕ್ರಾಂತಿ ಸಂಭ್ರಮ' ಕಾರ್ಯಕ್ರಮಕ್ಕೆ ಹೊಸ ಲುಕ್ ನೀಡಿದ್ದಾರೆ. ನಟ ಶಿವರಾಜ್ ಕೆ.ಆರ್.ಪೇಟೆ ನಿರೂಪಣೆಯಲ್ಲಿ ಮೂಡಿ ಬಂದಿರುವ "ಸುವರ್ಣ ಸಂಕ್ರಾಂತಿ ಸಂಭ್ರಮ" ಕಾರ್ಯಕ್ರಮವು ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ತಪ್ಪದೇ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More