Home> Entertainment
Advertisement

ಮದುವೆಯಾದ ಬೆನ್ನಲ್ಲೆ ಸೋನಾಕ್ಷಿ ಸಿನ್ಹಾಗೆ ಶಾಕಿಂಗ್‌ ನ್ಯೂಸ್‌..? ಆಸ್ಪತ್ರೆಗೆ ದಾಖಲಾದ ಸೋನಾಕ್ಷಿ ತಂದೆ..!

Shathrugna Sinha: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ಮದುವೆಯಾಗಿದ್ದು ಗೊತ್ತೇ ಇದೆ. ಜೂನ್ 23 ರಂದು ಜಹೀರ್ ಇಕ್ಬಾಲ್ ಎಂಬ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಸೋನಾಕ್ಷಿಗೆ ಸಿಡಿಲು ಬಡಿದಂತಾಗಿದೆ. 
 

ಮದುವೆಯಾದ ಬೆನ್ನಲ್ಲೆ ಸೋನಾಕ್ಷಿ ಸಿನ್ಹಾಗೆ ಶಾಕಿಂಗ್‌ ನ್ಯೂಸ್‌..? ಆಸ್ಪತ್ರೆಗೆ ದಾಖಲಾದ ಸೋನಾಕ್ಷಿ ತಂದೆ..!

Shathrugna Sinha: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ಮದುವೆಯಾಗಿದ್ದು ಗೊತ್ತೇ ಇದೆ. ಜೂನ್ 23 ರಂದು ಜಹೀರ್ ಇಕ್ಬಾಲ್ ಎಂಬ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಸೋನಾಕ್ಷಿಗೆ ಸಿಡಿಲು ಬಡಿದಂತಾಗಿದೆ. 

ಜೂನ್ 23 ರಂದು ಜಹೀರ್ ಇಕ್ಬಾಲ್ ಹಾಗೂ ನಟಿ ಸೋನಾಕ್ಷಿ ಸಿನ್ಹಾ ಸಪ್ತ ಪದಿ ತುಳಿದಿದ್ದರು. ಮುದುವೆ ಆದ ಐದು ದಿನದಲ್ಲೇ ಸೋನಾಕ್ಷಿ ತಂದೆ, ಬಾಲಿವುಡ್ ಜನಪ್ರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಶತ್ರುಘ್ನ ಸಿನ್ಹಾರನ್ನು ದಾಖಲಿಸಲಾಗಿದೆ. ಈ ವಿಷಯ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಶತ್ರುಘ್ನ ಸಿನ್ಹಾ ಒಂದು ಕಾಲದಲ್ಲಿ ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. ನಂತರ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರ ಮಗಳು ಸೋನಾಕ್ಷಿ ಸಿನ್ಹಾ ಕೂಡ ಬಾಲಿವುಡ್‌ನಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇತ್ತೀಚೆಗಷ್ಟೇ ಅಂದರೆ ಜೂನ್ 23 ರಂದು ಜಹೀರ್ ಇಕ್ಬಾಲ್ ಎಂಬ ನಟನನ್ನು ಮದುವೆಯಾಗಿದ್ದು ಗೊತ್ತೇ ಇದೆ. ಆದರೆ ಅವರ ಮದುವೆಯಾದ ಐದು ದಿನಗಳ ನಂತರ ಶತ್ರುಘ್ನನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂದೆ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿಯುತ್ತಿದ್ದಂತೆ ನವ ಜೋಡಿ ಶತ್ರುಘ್ನ ಸಿನ್ಹಾ ಅವರನ್ನು ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇದೀಗ ಈ ಜೋಡಿ ಆಸ್ಪತ್ರೆಗೆ ಬಂದ ವಿಡಿಯೋ ಫುಲ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!

ಮೊದಲಿಗೆ ಈ ವಿಡಿಯೋ ವೈರಲ್‌ ಆದಾಗ  ಶತ್ರುಘ್ನ ಸಿನ್ಹಾಗೆ ಏನಾಯ್ತು? ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ರೊಟೀನ್ ಚೆಕಪ್‌ಗೆ ಎಂದು ಹೇಳಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸೋನಾಕ್ಷಿ ಮದುವೆಯ ಸಂದರ್ಭದ ರಶ್‌ನ ಒತ್ತಡದಿಂದ ಕೊಂಚ ಅಸ್ವಸ್ಥಗೊಂಡಿದ್ದು ಶತ್ರುಘ್ನ ಸಿನ್ಹಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಸೋನಾಕ್ಷಿ ಸಿನ್ಹಾ ಭಾರೀ ಟೀಕೆಗೆ ಗುರಿಯಾಗಿದ್ದರು.  ಮದುವೆಗೂ ಮುನ್ನವೇ ಶತ್ರುಘ್ನ ಸಿನ್ಹಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರು, ಇಂದಿನ ದಿನಮಾನಗಳಲ್ಲಿ ಮಕ್ಕಳು ಬರೀ ಮಾತು ಹೇಳುತ್ತಾರೆಯೇ ಹೊರತು ಪೋಷಕರ ಅನುಮತಿ ಪಡೆಯುವುದಿಲ್ಲ ಎಂದಿದ್ದರು. ಹಾಗಾಗಿ ಸೋನಾಕ್ಷಿಯ ಮನೆಯವರಿಗೆ ಆಕೆಯ ಮದುವೆ ಇಷ್ಟವಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು.

ರಿಜಿಸ್ಟರ್ ಮ್ಯಾರೇಜ್ ಬಳಿಕ ನವ ಜೋಡಿ ಆಯೋಜಿಸಿದ್ದ ಆರತಕ್ಷತೆ ಸಮಾರಂಭದಲ್ಲಿ ಶತ್ರುಘ್ನ ಸೇರಿದಂತೆ ಇಡೀ ಕುಟುಂಬವೇ ಪಾಲ್ಗೊಳ್ಳುವ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More