Home> Entertainment
Advertisement

ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?

Darshan Arrest Case: ಕನ್ನಡದ ಸ್ಟಾರ್ ಹೀರೋ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿರುವುದು ಗೊತ್ತೇ ಇದೆ. ರೇಣುಕಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.  
 

 ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?

Actor Darshan: ನಟ ದರ್ಶನ್ ಬಂಧನ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಹಾಗೂ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಮತ್ತು ದರ್ಶನ್ ಎ2 ಆರೋಪಿಗಳು. 17ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಾಗಾದ್ರೆ ಈ ವೇಳೆ ಪವಿತ್ರಾ ಗೌಡ ಬಗ್ಗೆ ದರ್ಶನ್ ಪರ ವಕೀಲರು ಹೇಳಿದ್ದೇನು?

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿ ನಡೆಸಿದ್ದು, ಅಲ್ಲಿ ಪವಿತ್ರಾ ಗೌಡ ದರ್ಶನ್‌ ಎರಡನೇ ಪತ್ನಿ ಎನ್ನಲಾಗಿತ್ತು... ಸದ್ಯ ಎ1 ಆರೋಪಿ ಪವಿತ್ರಾ ಗೌಡ ದರ್ಶನ್ ಪತ್ನಿ ಎನ್ನುವುದರ ಬಗ್ಗೆ ವಕೀಲ ಅನಿಲ್ ಬಾಬು ಸ್ಪಷ್ಟನೆ ನೀಡಿದ್ದಾರೆ. "ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಪ್ಪಾಗಿ ಹೀಗೆ ಹೇಳಿರಬಹುದು, ಆದರೆ ಪವಿತ್ರಾ ನಟ ದರ್ಶನ್ ಅವರ ಎರಡನೇ ಪತ್ನಿಯಲ್ಲ" ಎಂದು ವಕೀಲರು ಹೇಳಿದ್ದಾರೆ.

ಇದನ್ನೂ ಓದಿ-ಐಎಎಸ್ ಕನಸು ಕಂಡಿದ್ದ ಈ ವ್ಯಕ್ತಿ ಇದೀಗ ಭಾರತೀಯ ಸಿನಿ ಜಗತ್ತಿನ ಟಾಪ್ ಸಂಗೀತ ನಿರ್ದೇಶಕ..! ಯಾರದು..?

"ದರ್ಶನ್ ಮತ್ತು ಪವಿತ್ರಿ ಗೌಡ ಮದುವೆಯಾಗಿಲ್ಲ. ಮದುವೆ ದಾಖಲೆಗಳಿಲ್ಲ. ನಟ ದರ್ಶನ್ ಅವರ ಏಕೈಕ ಪತ್ನಿ ವಿಜಯಲಕ್ಷ್ಮಿ. ಈ ಗೊಂದಲವನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇನೆ. ದರ್ಶನ್ ಗೆ ವಿಜಯಲಕ್ಷ್ಮಿ ಒಬ್ಬಳೇ ಪತ್ನಿ. ಇಬ್ಬರಿಗೂ ವಿನೀಶ್ ಒಬ್ಬನೇ ಮಗ.. ಪವಿತ್ರ ದರ್ಶನ್ ಅವರ ಸ್ನೇಹಿತೆ ಮಾತ್ರ.. ಅಲ್ಲದೇ ನಾವು ದರ್ಶನ್ ಜಾಮೀನಿಗೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.. 

ಇದನ್ನೂ ಓದಿ-Renuka Swamy Murder Case: ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ..!

ದರ್ಶನ್ ಮತ್ತು ಆತನ ತಂಡವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಪೊಲೀಸ್ ತನಿಖೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ದರ್ಶನ್ ಸರಿಯಾಗಿ ಉತ್ತರಿಸದೇ, ತನಿಖೆಗೆ ಸಹಕರಿಸಲಿಲ್ಲ ಎಂದು ವರದಿಯಾಗಿದೆ.

ಇನ್ನು ಚಿತ್ರರಂಗಕ್ಕೆ ಬರುವ ಮುನ್ನ ಪವಿತ್ರಾ ಗೌಡ ಸಂಜಯ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿ.. ಹಲವು ವರ್ಷಗಳ ಬಳಿಕ ವಿಚ್ಚೇದನ ಪಡೆದಿದ್ದರು.. ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ದರ್ಶನ್ ಮತ್ತು ನಾನು 10 ವರ್ಷಗಳಿಂದ ಸ್ನೇಹಿತರಾಗಿದ್ದೆವೆ ಎಂದಿದ್ದರು.. ಇಬ್ಬರೂ ಒಟ್ಟಿಗೆ ಇರುವ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿ ಶಾಕ್‌ ನೀಡಿದ್ದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More