Home> Entertainment
Advertisement

ಕಂಗನಾ ರಣಾವತ್ ಅವರನ್ನು ಮನೆಗೆ ಕರೆದ ಜಾವೇದ್ ಅಖ್ತರ್ ಹೇಳಿದ್ದೇನು?

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಹಾಗೂ ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಕುರಿತು ಕಂಗನಾ ಸಹೋದರಿ ರಂಗೋಲಿ ಚಂದೇಲ್ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಕಂಗನಾ ರಣಾವತ್ ಅವರನ್ನು ಮನೆಗೆ ಕರೆದ ಜಾವೇದ್ ಅಖ್ತರ್ ಹೇಳಿದ್ದೇನು?

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಂದೇಲ್, ಯಾವುದೇ ಒಂದು ವಿಷಯದ ಮೇಲೆ ಹಿಂಜರಿಯದೆ ಹೇಳಿಕೆಗಳನ್ನು ನೀಡುತ್ತಾರೆ. ಇಂದು ಟ್ವೀಟ್ ವೊಂದನ್ನು ಮಾಡಿರುವ ರಂಗೋಲಿ, ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಹೌದು, ಬಾಲಿವುಡ್ ನ ಖ್ಯಾತ ಗೀತ ರಚನೆಕಾರರಾಗಿರುವ ಜಾವೇದ್ ಅಖ್ತರ್ ಅವರು, ತಮ್ಮ ಸಹೋದರಿ ಕಂಗನಾಳನ್ನು ಮನೆಗೆ ಕರೆದು, ಬಾಲಿವುಡ್ ಖ್ಯಾತ ನಟ ಹೃತಿಕ್ ರೋಶನ್ ಅವರ ಕ್ಷಮೆಯಾಚಿಸಲು ಧಮ್ಕಿ ಹಾಕಿದ್ದರು ಎಂದು ತನ್ನ ಟ್ವೀಟ್ ನಲ್ಲಿ ರಂಗೋಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ಖ್ಯಾತ ನಿರ್ದೇಶಕರಾಗಿರುವ ಮಹೇಶ್ ಭಟ್ ಕೂಡ ಆತ್ಮಾಹುತಿ ದಾಳಿಕೊರ್ ಮಹಿಳೆಯ ಪಾತ್ರ ನಿರ್ವಹಿಸಲು ತಮ್ಮ ಸಹೋದರಿ ನಿರಾಕರಿಸಿದ್ದಕ್ಕಾಗಿ ಚಪ್ಪಲಿ ಎಸೆದು ಹೊಡೆದಿದ್ದರು ಎಂದೂ ಕೂಡ ಹೇಳಿದ್ದಾರೆ.

ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ರಂಗೋಲಿ ಚಂದೇಲ್, 'ಗಲಿ ಬಾಯ್' ಚಿತ್ರದಲ್ಲಿ ಅಲಿಯಾ ಭಟ್ ಪರ್ಫಾರ್ಮನ್ಸ್ ಗೆ ಎವರೇಜ್ ಪರ್ಫಾರ್ಮೆನ್ಸ್ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಲಿಯಾ, ನನಗೆ ಇದರಲ್ಲಿ ಯಾವುದೇ ರೀತಿಯ ಸ್ವಾರಸ್ಯ ಇಲ್ಲ, ನಾನು ಸಕಾರಾತ್ಮಕ ಇರಲು ಬಯಸುವೆ ಮತ್ತು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಿ ನನ್ನಲ್ಲಿ ಸುಧಾರಣೆ ತರಲು ಬಯಸುವೆ. ಎಲ್ಲರಿಗೂ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದ್ದು, ನನ್ನ ಕುರಿತು ಹೇಳುವುದಾದರೆ ನಾನು ಸುಮ್ಮನಿರಲು ಬಯಸುವೆ ಎಂದಿದ್ದಳು.

ತಮ್ಮ ತಾಯಿ ಸೋನಿ ರಾಜದಾನ್ ಕುರಿತು ಕೂಡ ಹೇಳಿಕೆ ನೀಡಿದ್ದ ರಂಗೋಲಿ, ಇಲ್ಲಿ ವಾಸಿಸುವ ನಾನ್ ಇಂಡಿಯನ್ಸ್, ಸ್ಥಳೀಯ ಜನರನ್ನು ಅವಮಾನಿಸುತ್ತಿದ್ದಾರೆ. ಅಸಹಿಷ್ಣುತೆ ಹೆಸರಿನಲ್ಲಿ ಸುಳ್ಳು ಹೇಳುತ್ತಿದ್ದಾರೆ, ದ್ವೇಷ ಪಸರಿಸುತ್ತಿದ್ದಾರೆ. ಇಂತವರ ಅಜೆಂಡಾ ಕುರಿತು ವಿಚಾರ ನಡೆಸುವ ಸಮಯ ಬಂದಿದೆ ಎಂದಿದ್ದಳು. ನಿರ್ದೇಶಕ ಮಹೇಶ್ ಭಟ್ ಕುರಿತು ಮಾತನಾಡಿರುವ ರಂಗೋಲಿ, ಮಹೇಶ್ ಭಟ್ ಎಂದಿಗೂ ಕೂಡ ತಮ್ಮ ಸಹೋದರಿಗೆ ಬ್ರೇಕ್ ನೀಡಿಲ್ಲ, ಅನುರಾಗ್ ಬಸು ತಮ್ಮ ಸಹೋದರಿಗೆ ಬ್ರೇಕ್ ನೀಡಿದ್ದಾರೆ. 'ವೋ ಲಮ್ಹೇ' ಚಿತ್ರದ ಬಳಿಕ ಮಹೇಶ್ ಭಟ್ ಬರೆದ 'ಧೋಖಾ' ಚಿತ್ರದಲ್ಲಿ ತಮ್ಮ ಸಹೋದರಿ ನಟಿಸಲು ನಿರಾಕರಿಸಿದಾಗ ತಮ್ಮ ಸಹೋದರಿ ಮೇಲೆ ಅವರು ಕಿರುಚಾಟ ನಡೆಸಿದ್ದರು ಅಷ್ಟೇ ಅಲ್ಲ ಈ ಚಿತ್ರದ ಪ್ರಿವ್ಯೂ ವೇಳೆ ಕಂಗನಾ ಮೇಲೆ ಚಪ್ಪಲ್ ಕೂಡ ಎಸೆದಿದ್ದರು. ಕೇವಲ 19 ವರ್ಷ ವಯಸ್ಸಿನ ತಮ್ಮ ಸಹೋದರಿ ರಾತ್ರಿ ಇಡೀ ರೋಧಿಸಿದ್ದರು ಎಂದಿದ್ದಾಳೆ.

ಈ ಘಟನೆಯ ಕುರಿತು ಮಹೇಶ್ ಭಟ್ ಅವರನ್ನು ಪ್ರಶ್ನಿಸಲಾಗಿ, ಅವಳೊಬ್ಬ ಚಿಕ್ಕ ಮಗು ಎಂದು ಪ್ರತಿಕ್ರಿಯೆ ನೀಡಲು ಮಹೇಶ್ ಭಟ್ ನಿರಾಕರಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕಂಗನಾ ಓರ್ವ ನಟಿಯಾಗಿ ಬಾಲಿವುಡ್ ನಲ್ಲಿ ತಮ್ಮ ಪ್ರೊಡಕ್ಷನ್ ಕಂಪನಿಯಾಗಿರುವ ವಿಶೇಷ್ ಮೂಲಕ ಪದಾರ್ಪಣೆ ಮಾಡಿದ್ದಾರೆ. ಹೀಗಾಗಿ ತಾವು ಯಾವುದೇ ರೀತಿಯ ಟಿಪ್ಪಣಿ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಅವಳು ಚಿಕ್ಕ ಬಾಲಕಿಯಾಗಿದ್ದಾಳೆ, ನಮ್ಮ ಜೊತೆ ಸೇರಿ ತಮ್ಮ ಕರಿಯರ್ ಆರಂಭಿಸಿದ್ದಾರೆ ಎಂಬ ಒಂದು ಮಾತಿಗೆ ಅವಳ ಸಂಬಂಧಿ ತಮ್ಮ ಮೇಲೆ ಕಾಮೆಂಟ್ ಮಾಡಿದ್ದಾರೆ. ನಾನು ಯಾವುದೇ ಟಿಪ್ಪಣಿ ಮಾಡಲು ಬಯಸುವುದಿಲ್ಲ ಎಂದು ಭಟ್ ಹೇಳಿದ್ದಾರೆ.

ವೃತ್ತಿ ಜೀವನದ ಕುರಿತು ಮಾತನಾಡುವುದಾದರೆ, ಇತ್ತೀಚೆಗಷ್ಟೇ ಕಂಗನಾ ಅಭಿನಯಿಸಿರುವ 'ಪಂಗಾ' ಚಿತ್ರ ಬಿಡುಗಡೆಯಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಜೀವನಾಧಾರಿತ ಚಿತ್ರವಾಗಿರುವ 'ಥಲೈವಿ'ಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ 'ಧಾಕಡ್' ಚಿತ್ರದಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೀಜರ್ ಈಗಾಗಲೇ ಬಿಡುಗಡೆಯಾಗಿದ್ದು, ಅವರ ಮುಂಬರುವ ಮತ್ತೊಂದು ಚಿತ್ರ 'ತೇಜಸ್'ನ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

Read More