Home> Entertainment
Advertisement

Seetha Rama Serial: ಸೀತೆಯನ್ನು ತನ್ನ ಸೊಸೆಯೆಂದ ಭಾರ್ಗವಿ: ಸಿಹಿಯ ವಿಚಾರ ತಾತ ಸೂರಿಗೆ ಗೊತ್ತಾಗುತ್ತಾ?

Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಅಶೋಕ್‌ ಹಾಗೂ ಪ್ರಿಯಾ ಮದುವೆ ಮದುವೆ ಮನೆಯಲ್ಲಿ ಭಾರ್ಗವಿ ಸೀತಾಳನ್ನು ರಾಮ ಪಕ್ಕ ನಿಲ್ಲಿಸಿ ತನ್ನ ಸೊಸೆಯೆಂದು ಹೇಳುತ್ತಾಳೆ. ತಾತ ಸೂರಿ ಸೀತಾಳನ್ನು ಒಪ್ಪಿಕೊಂಡ್ರಾ? ಸಿಹಿಯ ವಿಚಾರ ಗೊತ್ತಾಗುತ್ತಾ? ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Seetha Rama Serial: ಸೀತೆಯನ್ನು ತನ್ನ ಸೊಸೆಯೆಂದ ಭಾರ್ಗವಿ: ಸಿಹಿಯ ವಿಚಾರ ತಾತ ಸೂರಿಗೆ ಗೊತ್ತಾಗುತ್ತಾ?

Ram and Seetha Love Reveals: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರವಾಹಿಯಲ್ಲಿ ಭಾರ್ಗವಿ ಸೀತಾಳನ್ನು ತನ್ನ ಸೊಸೆಯೆಂದು ಒಪ್ಪಿಕೊಂಡಿದ್ದಾಳೆ. ಅಶೋಕ್ ಹಾಗೂ 
ಪ್ರಿಯಾ ಮದುವೆ ಸಂಭ್ರಮ ಸಡಗರದಿಂದ ಅದ್ಧೂರಿಯಾಗಿ ನಡೆದಿದೆ. ಧಾರೆಯ ಸಮಯದಲ್ಲಿ ಅಶೋಕನ ತಂದೆ ತಾಯಿ ಸ್ಥಾನದಲ್ಲಿ ಸತ್ಯ ಮತ್ತು ಸಾಧನಾ ನಿಂತಿದ್ದರೇ, ಇತ್ತ ಪ್ರಿಯಾಳಿಗೆ ಮೂರ್ತಿ ತಾತ ಮತ್ತು ಶಾಂತಜ್ಜಿ ಧಾರೆ  ಎರೆದಿದ್ದಾರೆ. ಮದುವೆ ಮನೆಯಲ್ಲಿ ಸೀತಾ ಮತ್ತು ರಾಮ ಇನ್ನಷ್ಟು ಹತ್ತಿರವಾಗುತ್ತಿದ್ದು, ಇಬ್ಬರು ತಮ್ಮ ಮದುವೆಯ ಕನಸು ಕಾಣುತ್ತಿದ್ದರು.

ಒಂದು ಕಡೆ ಸೀತಾ ಹಾಗೂ ರಾಮನನ್ನು ಗಮನಿಸುತ್ತಿರುವ ಭಾರ್ಗವಿ, ತನಗೇನೂ ಗೊತ್ತೇ ಇಲ್ಲವೆಂಬಂತೆ ನಡೆದುಕೊಂಡಿದ್ದಾಳೆ. ಇನ್ನೊಂದೆಡೆ ಚಾಂದಿನಿ ಮಾತ್ರ ಉದೇಶ ಪೂರ್ವಕವಾಗಿ ಸೀತಾಳಿಗೆ ನೋವಾಗುವಂತೆ ಆವಾಗವಾಗ ಮಾತನಾಡುತ್ತಿರುತ್ತಿದ್ದಳು. ಆದರೆ ಚಾಂದಿನಿ ಏನೇ ಮಾತನಾಡಿದರು ಅದರಿಂದ ಸೀತಾಳಿಗೆ ಒಳ್ಳೆಯದೇ ಆಗಿದೆ. ಅಶೋಕ್ ಮತ್ತು ಪ್ರಿಯಾ ಮದುವೆ ಮುಗಿದ ನಂತರ ಸೂರಿ ತಾತ ತನ್ನ ಮೊಮ್ಮಗ ರಾಮ ಮದುವೆ ವಿಚಾರವನ್ನು ಪ್ರಸ್ತಾಪ ಮಾಡುತ್ತಾನೆ.

ಇದನ್ನೂ ಓದಿ: ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!

ಸೂರಿ ಮದುವೆ ಮನೆಯಲ್ಲಿ ರಾಮ ಮದುವೆ ಮಾಡಿಕೊಳ್ಳಲು ನಿನ್ನ ಹುಡುಗಿಯನ್ನು ನೀನೇ ಆಯ್ಕೆ ಮಾಡಿಕೊಳ್ಳುಯೆಂದು ಇಷ್ಟು ದಿನ ಕಾಲಾವಕಾಶ ನೀಡಿದ್ದೆ. ಆದರೆ ರಾಮ ಮಾತ್ರ ನನ್ನ ಮುಂದೆ ಯಾವ ಹುಡುಗಿಯನ್ನು ಕರೆದುಕೊಂಡು ಬರಲಿಲ್ಲ. ಈಗ ಅವನು ಯಾರನ್ನು ಮದುವೆಯಾಗಬೇಕು ಎಂದು ನಾನೇ ನಿರ್ಧಾರ ಮಾಡುತ್ತೇನೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ಭಾರ್ಗವಿ ಅಪ್ಪು ಮದುವೆಯಾಗುವ ಹುಡುಗಿಯನ್ನು ನಾನು ತೋರಿಸುತ್ತೇನೆ ಎಂದು ಹೇಳುತ್ತಾಳೆ. ಭಾರ್ಗವಿ ಚಾಂದಿನಿಯನ್ನು ತೋರಿಸಬಹುದೆಂದು ಅಂದುಕೊಂಡವರಿಗೆ ದೊಡ್ಡ ಶಾಕ್‌ ಕೂಡ ಆಗುತ್ತದೆ. 

ಹೌದು.. ಭಾರ್ಗವಿ ರಾಮ ಪಕ್ಕ  ಸೀತಾಳನ್ನು ಕರೆದುಕೊಂಡು ಬಂದು ನಿಲ್ಲಿಸಿ, ನನ್ನ ಅಪ್ಪು ಮನಸ್ಸಲ್ಲಿ ಏನಿದೆಯೆಂದು ನನಗೆ ಗೊತ್ತಾಗುತ್ತೆ. ಸೀತಾಳನ್ನು ರಾಮ ತುಂಬಾ ಇಷ್ಟಪಡುತ್ತಾನೆ ಅಂದ್ಮೇಲೆ ನೀನು ನನ್ನ ಮುದ್ದಿನ ಸೊಸೆ  ಹೇಳುತ್ತಾಳೆ. ಭಾರ್ಗವಿಯ ಮಾತನ್ನು ಕೇಳಿದ ಮನೆಯವರಿಗೆಲ್ಲಾ ಖುಷಿಯೂ ಆಗುತ್ತಿದ್ದಂತೆ ತಾತ ಕೂಡ ಸೀತಾಳನ್ನು ಒಪ್ಪಿಕೊಳ್ಳುತ್ತಾರೆ. ಮತ್ತೊಂದಡೆ ಚಾಂದಿನಿಯನ್ನು ಮದುವೆ ಮನೆಯಿಂದ ಹೊರಗೆ ಹಾಕಲಾಗುತ್ತದೆ. ಅವಾಗ ಚಾಂದಿನಿಗೆ ಕೋಪ ಬಂದಿದ್ದು, ನಾನು ಏನು ಎಂದು ತೋರಿಸುತ್ತೇನೆ ಎನ್ನುತ್ತಾ ಅಲ್ಲಿಂದ ಹೊರಟು ಹೋಗಿ ಬಿಡುತ್ತಾಳೆ. 

ಇದನ್ನೂ ಓದಿ: Salman Khan: ಕೋಟ್ಯಾಂತರ ರುಪಾಯಿ ಆಸ್ತಿಯಿದ್ದರೂ ಸಲ್ಲು ಇರೋದು 1 BHK ಮನೆಯಲ್ಲಿ: ಇದರ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತಿರಾ!

ಇನ್ನು ಸೀತಾಳಿಗೆ  ಮನೆಯವರೆಲ್ಲರೂ ವಿಶ್ ಮಾಡುತ್ತಿದ್ದರೇ ಅಶೋಕ್ ಮಾತ್ರ ಶಾಕ್ ನಲ್ಲಿ ಇರುತ್ತಾನೆ. ಆತ ಭಾರ್ಗವಿ ಅಷ್ಟು ಸುಲಭವಾಗಿ ಹೇಗೆ ಸೀತಾಳನ್ನು ಒಪ್ಪಿಕೊಂಡಳೆಂದು ಭಯಪಡುತ್ತಾನೆ. ತದನಂತರ ಸೀತಾ ಸಿಹಿ ಬಗ್ಗೆ ತಾತನ ಹತ್ತಿರ ಹೇಳಲು ಹೊರಟಾಗ ಭಾರ್ಗವಿಯೇ ತಡೆಯುತ್ತಾಳೆ. ರಾಮನಿಗಂತೂ ಈ ಸಂಭ್ರಮ ಹೆಚ್ಚಾಗಿದ್ದರೇ, ಇತ್ತ  ಸೀತಾಳ ಬಳಿ ಭಾರ್ಗವಿ ಸಪರೇಟ್ ಆಗಿ ಮಾತನಾಡಬೇಕೆಂದು ಕರೆಯುತ್ತಾಳೆ. ಭಾರ್ಗವಿ ಸೀತೆಯ ಹತ್ತಿರ ಏನು ಮಾತನಾಡಬಹುದು? ಸೀತಾಗೆ ನೋವಾಗುವಂತೆ ನಡೆದುಕೊಳ್ಳುತ್ತಾ ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ತಿಳಿಯಬಹದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More