Home> Entertainment
Advertisement

Rakshith Shetty: ಮಾರಿಗುಡಿಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಂಪಲ್‌ ಸ್ಟಾರ್‌ !

Rakshith Shetty At Kapu: ಸಿಂಪಲ್‌ ಸ್ಟಾರ್‌ ರಕ್ಷಿತ್‌ ತಮ್ಮ ಹೊಸ ಚಿತ್ರದ ಮುಹೂರ್ತಕ್ಕೂ ಮುಂಚೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮಾರಿಗುಡಿ ದೇವಾಲಯಕ್ಕೆ ಭೇಟಿ  ನೀಡಿ ಮಾರಿಯಮ್ಮ ದರ್ಶನ ಪಡೆದಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
 

Rakshith Shetty: ಮಾರಿಗುಡಿಯ  ದೇವಸ್ಥಾನಕ್ಕೆ ಭೇಟಿ ನೀಡಿದ ಸಿಂಪಲ್‌ ಸ್ಟಾರ್‌ !

Rakshith Shetty At Marigudi Temple: ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ದೈವ ಭಕ್ತರಾಗಿರುವರು ಆಗಾಗಾ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.  ಇದೀಗ ಈ ನಟ ತಮ್ಮ ಹೊಸ ಚಿತ್ರದ ಮುಹೂರ್ತಕ್ಕೂ ಮುಂಚೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಮಾರಿಗುಡಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದಾರೆ. ಇನ್ನೂ ನಟ ರಕ್ಷಿತ್‌ ಶೆಟ್ಟಿಗೆ ಕರಾವಳಿಯಲ್ಲಿ ಉಡುಪಿಯ ಕೃಷ್ಣನ ದೇವಾಲಯ ಬಿಟ್ಟರೆ ಕಾಪು ಮಾರಿಯಮ್ಮನ ಮೇಲೆ ಅಪಾರ ನಂಬಿಕೆ ಮತ್ತು ಭಕ್ತಿ ಇದೆ.

ಉಡುಪಿಯ ಕಾಪು ತಾಲ್ಲೂಕಿನ ಮಾರಿಗುಡಿ ದೇವಾಲಯದಲ್ಲಿ ವರ್ಷಕೊಮ್ಮೆ ಜಾತ್ರೆ ನಡೆಯುತ್ತಿದ್ದು, ಅಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅದೇ ರೀತಿ ನಟ ರಕ್ಷಿತ್‌ ಶೆಟ್ಟಿ ಈ ದೇವಾಲಯಕ್ಕ ಭೇಟಿ ನೀಡಿ ಇಳಕಲ್ ಕಲಾತ್ಮಕ ಶೈಲಿಯ ಕೆತ್ತನೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದರ ಮಧ್ಯೆಯೇ  ರಕ್ಷಿತ್ ಶೆಟ್ಟಿ  ತಮ್ಮ ಅಭಿಮಾನಿಗಳಿಗೆ ಇನ್ ಡೈರೆಕ್ಟ್ ಆಗಿ ರಿಚರ್ಡ್ ಆಂಟನಿ  ಸಿನಿಮಾದ ಅಪ್ಡೇಟ್‌ ನೀಡಿದ್ಧಾರೆ. 

ಇದನ್ನೂ ಓದಿ: ಒಟಿಟಿಗೆ ಕಾಯ್ಬೇಡಿ..ಚಿತ್ರಮಂದಿರಕ್ಕೆ ಬನ್ನಿ..ಶಾಖಾಹಾರಿ ರಂಗಾಯಣ ರಘು ಮಾತು!

ನಟ ರಕ್ಷಿತ್‌ ಶೆಟ್ಟಿ ಯಾವಾಗಿನಿಂದ  ರಿಚರ್ಡ್ ಆಂಟನಿ ಚಿತ್ರದ ಶೂಟಿಂಗ್‌ ಪ್ರಾರಂಭವಾಗಲಿದೆ ಎಂದು ಕೇಳಲಾದ ಪ್ರಶ್ನೆಗೆ, ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಡೇಟ್ ಹೇಳಿದ್ದಾರೆ. ಇದೇ ಮಾರ್ಚ್ 28ಕ್ಕೆ ಎಂದು ಹೇಳುವ ಮೂಲಕ ರಿಚರ್ಡ್ ಆಂಟನಿಯ ಮುಹೂರ್ತದ ದಿನಾಂಕವನ್ನೂ ಬಹಿರಂಗ ಪಡಿಸಿದ್ದಾರೆ. ಈ ಹಿಂದೆ ರಿಚರ್ಡ್‌ ಆಂಟನಿ ಚಿತ್ರದ ಮುಹೂರ್ತ ಇದೇ ವರ್ಷ  ಮಾರ್ಚ್‌ ಕೊನೆಯ ವಾರದ ಅಥವಾ ಏಪ್ರಿಲ್ ಮೊದಲ ವಾರದಲ್ಲಿ  ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊಂಬಾಳೆ ಫಿಲ್ಮ್ಸ್ ಅಂಗಳದಿಂದಲೇ ಕೇಳಿ ಬಂದಿತ್ತು.

ರಿಚರ್ಡ ಆಂಟನಿ ಸಿನಿಮಾವನ್ನು  ಕೆಲವು ತಿಂಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದ್ದು, ಆದರೆ ನಟ ರಕ್ಷಿತ್‌ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಶೂಟಿಂಗ್‌ ಹಾಗೂ ಅದರ ರಿಲೀಸ್‌ ಕೆಲಸದಲ್ಲಿ ಬ್ಯುಸಿಯಿದ್ದರು. ಸದ್ಯ ರಕ್ಷಿತ್‌ ರಿಚರ್ಡ್‌ ಆಂಟನಿಯ ಸ್ಕ್ರಿಪ್ಟ್ ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.  ಇಷ್ಟೇಲ್ಲಾ ಕಾರಣಗಳಿಂದ ರಿಚರ್ಡ್‌ ಆಂಟನಿ ಚಿತ್ರದ ಮುಹೂರ್ತಕ್ಕೆ ಕೊಂಚ ತಡವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More