Home> Entertainment
Advertisement

ಯೋಗಿ ಜೀ ಕಾಲಿಗೆ ಬಿದ್ದಿದ್ದಕ್ಕೆ ಟ್ರೋಲ್‌..! ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ತಲೈವಾ

Rajinikanth : ಆಧ್ಯಾತ್ಮಿಕ ಯಾತ್ರೆ ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರು ಯೋಗಿ ಆದಿತ್ಯನಾಥ್ ಅವರ ಕಾಲು ಮುಟ್ಟಿ ಆರ್ಶೀವಾದ ಪಡೆದ ಕುರಿತು ಟ್ರೋಲ್‌ ಮಾಡಿದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.

ಯೋಗಿ ಜೀ ಕಾಲಿಗೆ ಬಿದ್ದಿದ್ದಕ್ಕೆ ಟ್ರೋಲ್‌..! ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ತಲೈವಾ

Rajinikanth on Yogi Adityanath : ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗಿನ 'ಜೈಲರ್' ಸಿನಿಮಾದ ಮೂಲಕ ಭರ್ಜರಿ ಹಿಟ್ ಪಡೆದಿದ್ದು ಗೊತ್ತೇ ಇದೆ. ಈ ನಡುವೆ ಅವರು ಆಧ್ಯಾತ್ಮಿಕ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದು, ಇದರ ಭಾಗವಾಗಿ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ತಲೈವಾ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು, ಟ್ರೋಲ್‌ಗೆ ಕಾರಣವಾಗಿತ್ತು.

ಹೌದು.. ಲಕ್ನೋದಲ್ಲಿ ಸಿಎಂ ಆದಿತ್ಯನಾಥ್ ಮನೆ ಮುಂದೆ ರಜನೀಕಾಂತ್ ಕಾರಿನಿಂದ ಇಳಿದ ತಕ್ಷಣ ಸ್ವಾಗತಿಸಲು ಬಂದ ಯೋಗಿ ಜೀ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಂದಿನಿಂದ ಸಾಕಷ್ಟು ಟ್ರೋಲ್‌ ಮಾಡಲಾಗಿತ್ತು.

ಇದನ್ನೂ ಓದಿ: ಎಲ್ಲರ ಕಣ್ಣು ಮಹೇಶ್ ಬಾಬು ಅಂಗಿ ಮೇಲೆ..! ಮಾಮೂಲಿ ಶರ್ಟ್‌ ಅಲ್ಲ ಗುರು ಇದು..

ರಜನಿಕಾಂತ್ ತನಗಿಂತ ಕಿರಿಯ ಯೋಗಿ ಅವರ ಕಾಲಿಗೆ ಬಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳು ಭಾರೀ ಗಲಾಟೆ ಎಬ್ಬಿಸಿದ್ದಾರೆ. ಮತ್ತೊಂದೆಡೆ ರಜನಿಕಾಂತ್ ಅವರ ಸರಳತೆ ಕಂಡು ಅವರ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್‌ಸ್ಟಾರ್ ತಮಗಿಂತ 20 ವರ್ಷ ಚಿಕ್ಕವರಾದ ಯೋಗಿ ಕಾಲು ಮುಟ್ಟಿದ್ದು ಸರಿಯಲ್ಲ ಅಂತ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ರಜನಿಕಾಂತ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ, ಇಂದು ಆಧ್ಯಾತ್ಮಿಕ ಪ್ರವಾಸ ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ರಜನಿಕಾಂತ್ ಸುದ್ದಿಗಾರರ ಜೊತೆ ಮಾತನಾಡುತ್ತ ಈ ಕುರಿತು ಪ್ರತಿಕ್ರಿಯೆ ನೀಡಿದರು. ನನಗಿಂತ ಕಿರಿಯ ಯಾರೇ ಆಗಲಿ, ಅವರು ಯೋಗಿಯಾಗಲಿ, ಸ್ವಾಮೀಜಿಯಾಗಲಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ನನ್ನ ಪರಿಪಾಠ’ ಎಂದು ತಮ್ಮದೇ ಶೈಲಿಯಲ್ಲಿ ಒಂದೇ ಮಾತಿನಲ್ಲಿ ಖಡಕ್ಕಾಗಿ ಹೇಳಿದರು. ಸದ್ಯ ರಜನಿಕಾಂತ್ ಹೇಳಿಕೆ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಭಾರಿ ಸಂಭಾವನೆಗೆ ಬೇಡಿಕೆಯಿಟ್ಟ ಅನುಷ್ಕಾ..! ಸ್ಟಾರ್‌ ಹೀರೋಗಳೂ ಸಹ ಅಷ್ಟು ಕೇಳಲ್ಲ

ಈ ನಡುವೆ 'ಜೈಲರ್' ಚಿತ್ರ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಿರ್ದೇಶಕ ನೆಲ್ಸನ್ ರಜನಿಕಾಂತ್ ಅವರನ್ನು ಸಿನಿಮಾದಲ್ಲಿ ತೋರಿಸಿರುವ ರೀತಿ, ಆ್ಯಕ್ಷನ್, ಸ್ಟೈಲ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಕೇವಲ ಹತ್ತು ದಿನದಲ್ಲಿ ರೂ.500 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More